ವಿಘ್ನ ವಿನಾಶಕನ ಆಗಮನದ ಈ ವಾರ ನಿಮ್ಮ ಪಾಲಿಗೆ ಹೇಗಿದೆ?

By Kannadaprabha NewsFirst Published Sep 1, 2019, 7:14 AM IST
Highlights

ಸೆಪ್ಟೆಂಬರ್ 1ರಿಂದ ಒಂದು ವಾರದ ರಾಶಿ ಫಲ : ಹೇಗಿದೆ ನಿಮ್ಮ ನಿಮ್ಮ ರಾಶಿಗಳ ಫಲಾ ಫಲ ಇಲ್ಲಿ ತಿಳಿಯಿರಿ 

ವಿಘ್ನ ವಿನಾಶಕನ ಆಗಮನದ ಈ ವಾರ ನಿಮ್ಮ ಪಾಲಿಗೆ ಹೇಗಿದೆ?

ಮೇಷ
ಕೆಲಸ ಕೆಲಸ ಎಂದು ಕುಟುಂಬದ ಕಡೆಗೆ ಗಮನ
ಕೊಡುವುದು ಕಡಿಮೆ ಮಾಡಬೇಡಿ. ಕೆಲಸ
ಯಾವಾಗಲೂ ಇದ್ದದ್ದೆ. ಆದರೆ ಕುಟುಂಬಕ್ಕೆ ಸ್ವಲ್ಪ
ಟೈಂ ಕೊಟ್ಟರೆ ಮನೆಯ ಎಲ್ಲರಿಗೂ ಸಂತೋಷ ಆಗುತ್ತೆ.
ಹಬ್ಬದ ಸಮಯವಾದ್ದರಿಂದ ಖರ್ಚು ಹೆಚ್ಚಿರುತ್ತೆ. ನೋಡಿ
ಕೊಂಡು ಖರ್ಚು ಮಾಡುವುದು ನಿಮಗೇ ಒಳ್ಳೆಯದು. 

Latest Videos

ವೃಷಭ
ಒಬ್ಬರನ್ನು ಮೋಸ ಮಾಡಿ ಕೊಳ್ಳೆ ಹೊಡೆದು
ತಿನ್ನುವುದಕ್ಕಿಂತ ನಿಯತ್ತಾಗಿ ದುಡಿದು ತಿನ್ನುವು
ದು ಒಳ್ಳೆಯದು. ಆಗ ತಿಂದಿದ್ದೂ ಮೈಗೆ ಹತ್ತುತ್ತೆ.
ಈ ವಿಚಾರ ನಿಮಗೆ ಗೊತ್ತಿದ್ದರೂ ಮಾಡಿದ ತಪ್ಪನ್ನು ಮತ್ತೆ
ಮತ್ತೆ ಮಾಡುವುದರಿಂದ ಏನೂ ಲಾಭ ಸಿಗದು. ಮನೆಯ
ವರ ಮಾತು ಕೇಳಿ ಬೇರೆ ಕೆಲಸಕ್ಕೆ ಮುಂದಾಗಿ. 

ಮಿಥುನ
ಈ ವಾರ ನಿಮ್ಮ ಮೇಲೆ ಜವಾಬ್ದಾರಿ ಹಾಗೂ
ಒತ್ತಡ ಹೆಚ್ಚಾಗಿರಲಿದೆ. ಕೆಲಸದಲ್ಲಿ ಆದಷ್ಟು
ಜೋಪಾನವಾಗಿದ್ದಷ್ಟು ನಿಮಗೇ ಒಳ್ಳೆಯದು.
ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ವಾತಾವರಣದಲ್ಲಿನ
ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ.
ದೂರ ಪ್ರಯಾಣದಿಂದ ಸುಸ್ತು ಇದ್ದರೂ ನೆಮ್ಮದಿ ಸಿಗಲಿ

ಕಟಕ
ಮೂರು ಹೊತ್ತು ತಿನ್ನುವ ಬಗ್ಗೆ ಯೋಚಿಸದೆ
ಕೆಲಸ ಕಾರ್ಯಗಳ ಬಗ್ಗೆಯೂ ಗಮನ ಕೊಡಿ.
ನಿಮ್ಮ ಕೆಲಸ ಇತರರಿಗೆ ಮೆಚ್ಚುಗೆಯಾಗು
ವಂತಿರಲಿ. ಅನಿರೀಕ್ಷಿತ ಘಟನೆಗಳು ನಡೆಯುವ ಸಂಭವ.
ನಿಮ್ಮನ್ನು ದೂರ ಮಾಡಿದವರೂ ನಿಮ್ಮನ್ನು ಹೊಗಳುವರು.
ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ಸಿಂಹ
ನಿಮ್ಮನ್ನು ಇಲ್ಲಸಲ್ಲದೆ ದೂರ ತಳ್ಳಿದವರೂ
ಇಂದು ನಿಮ್ಮ ಸ್ನೇಹ ಅರಸಿ ಬರುವ ಸಾಧ್ಯತೆ
ಗಳಿವೆ. ದೊಡ್ಡ ಮನಸ್ಸು ಮಡಿ ಅವರನ್ನು
ಕ್ಷಮಿಸಿ ಮಿತ್ರತ್ವ ಬೆಳೆಸಿ. ಒಳ್ಳೆಯ ಗುಣಗಳು ಎಂದೂ
ಸೋಲುವುದಿಲ್ಲ. ಸೋತ ಮನಸ್ಸನ್ನೂ ಬದಲಿಸುವ ಶಕ್ತಿ
ನಿಮ್ಮಲ್ಲಿದೆ. ಬಂಧುಗಳ ಆಗಮನ ಸಾಧ್ಯತೆ. 

ಕನ್ಯಾ
ಮಕ್ಕಳಿಗೆ ಆಸಕ್ತಿ ಇರುವ ವಿಚಾರಗಳಿಗೆ
ಪ್ರೋತ್ಸಾಹಿಸಿ. ಇದರಿಂದ ಮಕ್ಕಳ ಗುರಿ ಸಾಧನೆಗೆ
ಅನುಕೂಲವಾಗಲಿದೆ. ಒಂದೇ ಏಟಿಗೆ ಎರಡು
ಹಕ್ಕಿಗಳು ಬೀಳಿಸುವ ತಾಕತ್ತು ನಿಮ್ಮಲ್ಲಿದೆ. ಇದೇ
ವಿಚಾರವನ್ನು ನೀವು ಕೆಲಸದಲ್ಲಿ ಅಳವಡಿಸಿಕೊಂಡರೆ
ಪ್ರಗತಿ ಕಾಣುವಿರಿ. ಮಹಿಳೆಯರಲ್ಲಿ ಒತ್ತಡ ಹೆಚ್ಚಲಿದೆ.

ತುಲಾ
ಒಬ್ಬರೊಂದಿಗೆ ಮಾತನಾಡುವಾಗ ಅಥವಾ
ಯಾವುದೇ ವಿಚಾರದಲ್ಲಿ ನಿರ್ಧಾರ
ತೆಗೆದುಕೊಳ್ಳುವಾಗ ಸಾವಿರ ಬಾರಿ ಯೋಚಿಸಿ
ಮುಂದುವರೆಯಿರಿ. ಇದರಿಂದ ಮುಂದಾಗುವ ಯಡವ
ಟ್ಟುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ. ನಿಮ್ಮ ಆತ್ಮಬಲವೇ
ನಿಮಗಿರುವ ಶ್ರೀರಕ್ಷೆ. ಜೈ ಎಂದು ಮುಂದೆಸಾಗಿ. 

ವೃಶ್ಚಿಕ
ತಾನೊಂದು ಬಗೆದರೆ ವಿಧಿ ಇನ್ನೊಂದು
ಬಗೆಯಿತು ಎಂಬ ಮಾತಿದೆ. ಈಗಾದ ತಪ್ಪನ್ನು
ಸರಿಪಡಿಸುವುದು ಅಸಾಧ್ಯ. ಆದರೆ ಆದ
ತಪ್ಪಿನಿಂದ ತಿದ್ದಿಕೊಂಡು ಮುನ್ನಡೆಯಿರಿ. ಸೋಲು
ಗೆಲುವು ಬದುಕಿನಲ್ಲಿ ಸಿಹಿ ಕಹಿ ಇದ್ದಂತೆ. ಎರಡೂ
ಇದ್ದರೇನೆ ಜೀವನ ಸುಂದರವಾಗಿ ಕಾಣುತ್ತೆ.

ಧನಸ್ಸು
ಸಂತಸದ ಸಂದರ್ಭದಲ್ಲಿ ಎಲ್ಲರೊಂದಿಗೂ
ಸಂತೋಷವಾಗಿರಿ. ಕೆಲವೊಮ್ಮೆ ದುಃಖ
ನುಂಗಿಕೊಂಡು ಬದುಕಬೇಕಾಗುತ್ತದೆ.
ಅದರಿಂದ ನಮ್ಮಲ್ಲಿ ಧೈರ್ಯ ಹೆಚ್ಚುತ್ತೆ. ಯಾರೇನೇ
ಎಂದರು ತಲೆಕೆಡಿಸಿಕೊಳ್ಳದಿರಿ. ವ್ಯಾಪಾರಿಗಳಿಗೆ ಲಾಭ.

ಮಕರ
ನೊಂದವರಿಗೆ ಹೆಗಲಾಗಿ ನಿಲ್ಲುವ ನಿಮಗೆ ಈ
ವಾರ ಹಣಕಾಸಿನ ವಿಚಾರದಲ್ಲಿ ಏರಿಳಿತಗಳು
ಹೆಚ್ಚಾಗಿ ಕಂಡುಬರಲಿದೆ. ಹಣಕಾಸಿನ ವ್ಯವಹಾ
ರದಲ್ಲಿ ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದು
ಕೊಳ್ಳಿ. ಒಳ್ಳೆ ಆಲೋಚನೆಗಳು ನಿಮ್ಮ ಕೈ ಹಿಡಿಯಲಿದೆ. 

ಕುಂಭ
ಕೊಟ್ಟ ಕೈಗಳಿಗೆ ಪಡೆದು ಗೊತ್ತಿರುವುದಿಲ್ಲ ಎಂದು
ಹಿರಿಯರು ಹೇಳುತ್ತಾರೆ. ಆದರೆ ಕೆಲ ಸಂದರ್ಭ
ದಲ್ಲಿ ಏನನ್ನಾದರೂ ಇನ್ನೊಬ್ಬರಿಂದ ಪಡೆಯುವ
ಪರಿಸ್ಥಿತಿ ಬರುತ್ತೆ. ಅದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿ.
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದ್ದು, ಶಿಕ್ಷಕ
ವರ್ಗದಿಂದ ಪೋಷಕರಿಗೆ ಪ್ರಶಂಸೆ ಸಿಗಲಿದೆ.

ಮೀನ
ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಲಿದೆ. ನಿಮ್ಮಲ್ಲಿನ
ಕಲೆಯ ಅನಾವರಣಕ್ಕೆ ಸೂಕ್ತ ವೇದಿಕೆ ಸಿಗಲಿದೆ.
ಪ್ರಯತ್ನಿ ನಿಮ್ಮದಾಗಿದ್ದರೆ ಒಂದಿಲ್ಲೊಂದು ದಿನ
ಉತ್ತಮ ಫಲ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆ.
ವ್ಯಾಪಾರಿಗಳಿಗೆ ಈ ವಾರ ಭರ್ಜರಿ ಲಾಭ.

click me!