ಈ ರಾಶಿಗೆ ಶತ್ರುಗಳೇ ಸಿಹಿ ಸುದ್ದಿ ನೀಡುವರು

By Web DeskFirst Published Feb 12, 2019, 7:01 AM IST
Highlights

ರಥ ಸಪ್ತಮಿ ಅಥವಾ ಸೂರ್ಯ ಜಯಂತಿಯ ಈ ಶುಭ ದಿನದಂದು ಯಾರ ಭವಿಷ್ಯ ಹೇಗಿದೆ? ಓದಿ ದಿನ ಭವಿಷ್ಯ.

ಈ ರಾಶಿಗೆ ಶತ್ರುಗಳೇ ಸಿಹಿ ಸುದ್ದಿ ನೀಡುವರು

ಮೇಷ
ಮಾಡಿದ ಕೆಲಸದಲ್ಲಿ ಫಲಾಪೇಕ್ಷೆ ಬೇಡ.
ಯಾವುದೇ ಪ್ರಶ್ನೆಗಳಿಗೂ ಉತ್ತರ ಹುಡುಕ
ಬೇಡಿ. ಒಳ್ಳೆ ಸಮಯ ತಾನಾಗಿಯೇ ಬರಲಿದೆ.

ವೃಷಭ
ಮಣ್ಣನ್ನು ಚಿನ್ನ ಎಂದು ಭಾವಿಸುವ ನೀವು
ಮಾಡಿದ ಕೆಲಸಗಳಲ್ಲಿ ಜಯ ಸಿಗಲಿದೆ. ಹಿತಶ
ತ್ರುಗಳಿಂದಲೇ ಸಿಹಿ ಸುದ್ದಿ ಕೇಳುವಿರಿ.

ಮಿಥುನ
ಕುಟುಂಬದಲ್ಲಿನ ಮನಸ್ತಾಪ ನಿವಾರಣೆ.
ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಕೈ ಸುಟ್ಟುಕೊ
ಳ್ಳಬೇಡಿ. ಬಂಧುಗಳ ಆಗಮನ ಸಾಧ್ಯತೆ.

ಕಟಕ
ನಿಮ್ಮ ಆಲೋಚನೆಗೆ ತಕ್ಕಂತೆ ನಿರ್ಧಾರ ಕೈಗೊ
ಳ್ಳಲಿದ್ದೀರಿ. ನಿರ್ಲಕ್ಷಣೆಗೆ ಒಳಗಾದಿರೆಂದು
ಕುಗ್ಗದಿರಿ. ಸಕಾರಾತ್ಮಕ ಆಲೋಚನೆ ಇರಲಿ.

ಸಿಂಹ
ನಿಮ್ಮ ಆಸೆ ಹಾಗೂ ಕನಸುಗಳಿಗೆ ಸ್ನೇಹಿತರು
ಜೊತೆಯಾಗಲಿದ್ದಾರೆ. ಮಹಿಳೆಯರಲ್ಲಿ
ಆತ್ಮವಿಶ್ವದಲ್ಲಿ ಹೆಚ್ಚು. ಮನೆಯಲ್ಲಿ ನೆಮ್ಮದಿ.

ಕನ್ಯಾ
ಅನುಭವ ಹಾಗೂ ಫಲಿತಾಂಶದಿಂದ ನಿಮ್ಮ
ಮುಂದಿನ ದಿನಗಳು ನಿರ್ಧಾರ ಸಾಧ್ಯ.
ಶಾಂತಿಯುತ ವಾತಾವರಣ ಸಿಗಲಿದೆ.

ತುಲಾ 
ಬೆಣ್ಣೆಯ ಮಾತಿಗೆ ಕರಗದಿರಿ. ಅತಿಯಾದ
ಒತ್ತಡದಿಂದ ಮನೆಯಲ್ಲಿ ಅಶಾಂತಿ. ಚಂಚಲ
ಮನಸ್ಸು. ಆಲಸ್ಯ ಕೂಡಿದ ದಿನವಾಗಲಿದೆ.

ವೃಶ್ಚಿಕ
ಅಡ್ಡ ಕತ್ತರಿಯಲ್ಲಿ ಸಿಲುಕಿರುವ ನಿಮಗೆ
ಮನೆಯವರಿಂದ ಸಹಕಾರ ದೊರಕಲಿದೆ.
ಕಲಿಕೆಯಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲಿದೆ. 

ಧನುಸ್ಸು
ನಿಮ್ಮ ಸಂಗಾತಿ ಜೊತೆಗೆ ಮನಸ್ತಾಪ ಎದುರಾ
ಗಬಹುದು. ಸಣ್ಣ ಗಾಯವನ್ನೂ ನಿರ್ಲಕ್ಷಿಸದಿ
ರಿ. ಹುಮ್ಮಸ್ಸಿನಿಂದ ಕೆಲಸ ಮಾಡಲಿದ್ದೀರಿ.

ಮಕರ
ಇಂದು ಭಾವುಕತೆಗೆ ಒಳಗಾಗುವ ಸಾಧ್ಯತೆ.
ಮನಸ್ಸಿನಲ್ಲಿ ಕಿರಿಕಿರಿ ಎದುರಾಗಲಿದೆ. ಎದುರಾ
ಗುವ ಸಮಸ್ಯೆಯನ್ನು ನಿಭಾಯಿಸುವಿರಿ.

ಕುಂಭ
ಕಣ್ಣಿನಲ್ಲೇ ಮಮತೆ ತೋರಿ ಸುತ್ತಲಿನವರ
ಪ್ರೀತಿ ಗೆಲ್ಲುವಿರಿ. ಒಳ್ಳೆಯ ಗುಣಗಳೂ
ಮೋಸದ ಕೂಪಕ್ಕೆ ದೂಡಬಹುದು ಎಚ್ಚರ.

ಮೀನ 
ಮಕ್ಕಳಲ್ಲಿ ಆರೋಗ್ಯದಲ್ಲಿ ವ್ಯತ್ಯಯ. ಹಣ
ಕಾಸಿನ ವ್ಯವಹಾರದಲ್ಲಿ ಎಚ್ಚರ. ನಿಮ್ಮ ಸುತ್ತ
ಲಿನವ ಮುಖದಲ್ಲಿ ನಗು ಮೂಡಿಸಲಿದ್ದೀರಿ.

click me!