ಸರ್ದಾರ್ಗಿಂತ ಎತ್ತರದ ಆನೆ ಪ್ರತಿಮೆ ನಿರ್ಮಾಣ ಮಾಡ್ತಾರಂತೆ ಮಾಯಾವತಿ..!
ಗುಜರಾತಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲ್ಗಿಂತ ಆನೆಯ ಪ್ರತಿಮೆ ನಿರ್ಮಾಣ.
ಲಖನೌ, [ಅ.15]: ಗುಜರಾತಿನಲ್ಲಿ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣಗೊಂಡಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ, ಸರ್ದಾರ್ಗಿಂತ ಎತ್ತರದ ಆನೆಯ ಪ್ರತಿಮೆಯನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ವಿಶ್ವದ ಅತಿ ಎತ್ತರದ ಪ್ರತಿಮೆ 31ಕ್ಕೆ ಲೋಕಾರ್ಪಣೆ
‘ಉತ್ತರ ಪ್ರದೇಶ ಸಿಎಂ ಆಗಿದ್ದಾಗ ಕಂಡ ಕಂಡಲ್ಲೆಲ್ಲಾ ಆನೆಯ ಪ್ರತಿಮೆಗಳನ್ನು ನಿರ್ಮಿಸಿದ್ದೆ. ಆದರೆ, ಅವು ಉದ್ಘಾಟನೆಗೊಳ್ಳದೇ ಹಾಗೆಯೇ ಉಳಿದಿದ್ದವು. ಈಗ ಅವುಗಳನ್ನೆಲ್ಲಾ ಒಟ್ಟುಗೂಡಿಸಿ ಅತಿದೊಡ್ಡ ಆನೆಯ ಪ್ರತಿಮೆ ನಿರ್ಮಿಸಲಾಗುವುದು.
ಮತ್ತೊಮ್ಮೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯಾದಾಗ ಅದನ್ನು ಉದ್ಘಾಟಿಸುತ್ತೇನೆ’ ಎಂದು ಘೋಷಿಸಿದ್ದಾರೆ. ಇದಕ್ಕೆ ಬೇಕಾದ ಹಣವನ್ನು ತಾವೇ ಸ್ವತಃ ನೀಡುವುದಾಗಿ ಹೇಳಿದ್ದಾರೆ ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.
ಈ ಸುದ್ದಿ ಕೇವಲ ತಮಾಷೆಗಾಗಿ. ಓದಿ ಸುಮ್ಮನೆ ನಕ್ಕುಬಿಡಿ