Asianet Suvarna News Asianet Suvarna News

ಬೆಂಗಳೂರಿನಲ್ಲಿ ಇದೇ ಕೊನೆಯ ಏರ್‌ ಶೋ?

ದಕ್ಷಿಣ ಏಷ್ಯಾದ ಅತಿ​ದೊಡ್ಡ ವೈಮಾ​ನಿಕ ಪ್ರದ​ರ್ಶ​ನ​ವೆ​ನಿ​ಸಿದ ಏರೋ ಇಂಡಿಯಾದ 12ನೇ ಆವೃ​ತ್ತಿಯೇ ಬೆಂಗ​ಳೂರು ಪಾಲಿಗೆ ಕಟ್ಟಕಡೆಯ ಆವೃ​ತಿ​ಯಾ​ಗ​ಲಿ​ದೆಯೇ? ಇಂತ​ಹ​ದೊಂದು ಗುಮಾ​ನಿಯ ನಡು​ವೆಯೇ ಬುಧ​ವಾರ ಏರೋ ಇಂಡಿಯಾ ಉದ್ಯಾ​ನ​ಗ​ರಿ​ಯಲ್ಲಿ ಆರಂಭ​ಗೊಂಡಿದ್ದು, ಲೋಹದ ಹಕ್ಕಿ​ಗಳ ಚಮ​ತ್ಕಾ​ರ​ವನ್ನು ಕಣ್ತುಂಬಿ​ಕೊ​ಳ್ಳಲು ಇದು ಕಟ್ಟಕಡೆಯ ಅವ​ಕಾಶ ಎಂಬ ಭಾವನೆ ಬೆಂಗ​ಳೂ​ರಿ​ಗ​ರಲ್ಲಿ ಮೂಡಿ​ದೆ.

Aero India 2019 last air show in Bengaluru
Author
Bengaluru, First Published Feb 21, 2019, 8:48 AM IST

ಬೆಂಗಳೂರು (ಫೆ. 21):  ದಕ್ಷಿಣ ಏಷ್ಯಾದ ಅತಿ​ದೊಡ್ಡ ವೈಮಾ​ನಿಕ ಪ್ರದ​ರ್ಶ​ನ​ವೆ​ನಿ​ಸಿದ ಏರೋ ಇಂಡಿಯಾದ 12ನೇ ಆವೃ​ತ್ತಿಯೇ ಬೆಂಗ​ಳೂರು ಪಾಲಿಗೆ ಕಟ್ಟಕಡೆಯ ಆವೃ​ತಿ​ಯಾ​ಗ​ಲಿ​ದೆಯೇ? ಇಂತ​ಹ​ದೊಂದು ಗುಮಾ​ನಿಯ ನಡು​ವೆಯೇ ಬುಧ​ವಾರ ಏರೋ ಇಂಡಿಯಾ ಉದ್ಯಾ​ನ​ಗ​ರಿ​ಯಲ್ಲಿ ಆರಂಭ​ಗೊಂಡಿದ್ದು, ಲೋಹದ ಹಕ್ಕಿ​ಗಳ ಚಮ​ತ್ಕಾ​ರ​ವನ್ನು ಕಣ್ತುಂಬಿ​ಕೊ​ಳ್ಳಲು ಇದು ಕಟ್ಟಕಡೆಯ ಅವ​ಕಾಶ ಎಂಬ ಭಾವನೆ ಬೆಂಗ​ಳೂ​ರಿ​ಗ​ರಲ್ಲಿ ಮೂಡಿ​ದೆ.

ವಾಯುಪಡೆ ಮೃತ ಪೈಲಟ್‌ಗೆ ಆಗಸದಲ್ಲೇ ವಿಶಿಷ್ಟ ಗೌರವ

ಏರೋ ಇಂಡಿಯಾ ವೈಮಾ​ನಿಕ ಪ್ರದ​ರ್ಶ​ನ​ವನ್ನು ಬೆಂಗ​ಳೂ​ರಿ​ನಿಂದ ಕಸಿ​ದು​ಕೊ​ಳ್ಳಲು ದೇಶದ ಹಲವು ನಗ​ರ​ಗಳು ತೀವ್ರ ಪ್ರಯತ್ನ ನಡೆ​ಸು​ತ್ತಿದ್ದು, ಕೇಂದ್ರ ಸರ್ಕಾ​ರದ ಪ್ರಮು​ಖರು ಈ ದಿಸೆ​ಯಲ್ಲಿ ತೀವ್ರ ಲಾಬಿ ನಡೆ​ಸಿದ್ದು ಕಂಡು ಬಂದಿತ್ತು. ಈ ಬಾರಿ​ಯಂತೂ ಏರೋ ಇಂಡಿಯಾ ಲಖನೌಗೆ ಸ್ಥಳಾಂತ​ರ​ಗೊಂಡೇ ಬಿಟ್ಟಿತು ಎಂಬ ಸನ್ನಿ​ವೇಶ ನಿರ್ಮಾಣವಾಗಿತ್ತು. ಆದರೆ, ರಾಜ್ಯದ ನಾಯ​ಕರು ಪಕ್ಷ ಭೇದ ಮರೆತು ಏರೋ ಇಂಡಿಯಾ ಸ್ಥಳಾಂತ​ರಕ್ಕೆ ತೀವ್ರ ವಿರೋಧ ಹಾಗೂ ಸಾರ್ವ​ಜ​ನಿಕ ವಲ​ಯ​ದಿಂದಲೂ ತೀವ್ರ ಆಕ್ಷೇಪ ವ್ಯಕ್ತ​ವಾಗಿತ್ತು. ಅಂತಿ​ಮ​ವಾಗಿ ಏರೋ ಇಂಡಿ​ಯಾ​ದಂತಹ ಬೃಹತ್‌ ಪ್ರದ​ರ್ಶ​ನ​ವನ್ನು ಆಯೋ​ಜಿ​ಸುವ ಸಿದ್ಧತೆ ಲಕ್ನೋ ನಗ​ರಕ್ಕೆ ಇಲ್ಲ ಎಂಬ ಕಾರ​ಣಕ್ಕೆ ಏರೋ ಇಂಡಿಯಾ ಬೆಂಗ​ಳೂ​ರಿ​ನಲ್ಲೇ ನಡೆ​ಸಲು ನಿರ್ಧ​ರಿ​ಸ​ಲಾ​ಯಿ​ತು.

ಭಾರತದಲ್ಲೇ ಉತ್ಪಾದಿಸಿ ಭಾರತಕ್ಕೇ ಮಾರಿ: ನಿರ್ಮಲಾ ಸೀತಾರಾಮನ್ ಆಹ್ವಾನ

ಆದರೆ, 2019ರ ಏರ್‌ಶೋ ಬೇರೆ ನಗ​ರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯ​ತೆಯೇ ಈಗ ಹೆಚ್ಚಿದೆ ಎನ್ನ​ಲಾ​ಗು​ತ್ತಿದೆ. ಈ ವೈಮಾ​ನಿಕ ಪ್ರದ​ರ್ಶನ ಕೇವಲ ಬೆಂಗ​ಳೂ​ರಿಗೆ ಸೀಮಿ​ತ​ವಾ​ಗ​ಬಾ​ರದು ಇತರೆ ನಗ​ರ​ಗ​ಳಿಗೂ ಅವ​ಕಾಶ ಲಭ್ಯ​ವಾ​ಗ​ಬೇಕು ಎಂಬ ಕೇಂದ್ರ ಸರ್ಕಾ​ರದ ನೀತಿಯ ಪರಿ​ಣಾ​ಮ​ವಾಗಿ ಈ ಪ್ರದ​ರ್ಶನ ಸ್ಥಳಾಂತ​ರ​ಗೊ​ಳ್ಳುವ ಸಾಧ್ಯ​ತೆ​ಯಿದೆ ಎನ್ನ​ಲಾ​ಗು​ತ್ತಿದೆ.

ಈ ಗುಮಾನಿ ಹುಟ್ಟಿ​ಕೊಂಡಿ​ರುವ ಕಾರಣ ಈ ಬಾರಿಯ ಏರೋ ಇಂಡಿ​ಯಾವೇ ಬೆಂಗ​ಳೂ​ರಿ​ಗರ ಪಾಲಿನ ಅಂತಿಮ ಏರೋ ಇಂಡಿಯಾ ಎಂಬ ಭಾವನೆ ದೃಢ​ವಾ​ಗಿದೆ. ಹೀಗಾಗಿ ಈ ಪ್ರದ​ರ್ಶ​ನವನ್ನು ಕಣ್ತುಂಬಿ​ಕೊ​ಳ್ಳಲು ಬೆಂಗ​ಳೂ​ರಿ​ಗರಿಗೆ ದೊರ​ಕಿ​ರುವ ಕೊನೆಯ ಅವ​ಕಾ​ಶ​ವಿದು ಎಂದೇ ಬಿಂಬಿ​ಸ​ಲಾ​ಗು​ತ್ತಿ​ದೆ.

ಏರೋ ಇಂಡಿಯಾ ಪ್ರದ​ರ್ಶ​ನವು 1998ರಿಂದ ಇದು​ವ​ರೆಗೂ ಬೆಂಗಳೂರಿನ ಯಲಹಂಕ ವಾಯು ನೆಲೆ​ಯಲ್ಲೇ ಸತ​ತ​ವಾಗಿ ನಡೆ​ಯು​ತ್ತಾ ಬಂದಿದೆ. ಅತ್ಯು​ತ್ತ​ಮ​ವಾಗಿ ಆಯೋ​ಜಿ​ಸ​ಲಾ​ಗುವ ವೈಮಾ​ನಿಕ ಪ್ರದ​ರ್ಶನ ಎಂದೇ ವಿಶ್ವಾ​ದ್ಯಂತ ಖ್ಯಾತಿ ಗಳಿ​ಸಿದೆ. ಇಂತಹ ಏರೋ ಇಂಡಿಯಾ ಪ್ರದ​ರ್ಶ​ನ​ವನ್ನು ದೇಶದ ಬೇರೆ ನಗ​ರಕ್ಕೆ ಒಯ್ಯುವ ಪ್ರಯ​ತ್ನ​ಗಳು ಆಗಾಗ ನಡೆ​ದಿವೆ. 2017ರಲ್ಲೇ ಅಂದಿನ ರಕ್ಷಣಾ ಸಚಿವರಾಗಿದ್ದ ಮನೋಹರ್‌ ಪರಿಕ್ಕರ್‌ ಅವರ ನೇತೃತ್ವದಲ್ಲಿ ಗೋವಾಗೆ ಸ್ಥಳಾಂತರ ಮಾಡಲು ಪ್ರಯತ್ನ ನಡೆದಿತ್ತು.

ಏರ್‌ಬಸ್‌ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭ

ಹೀಗಾಗಿಯೇ ಪ್ರತಿ ಏರ್‌ಶೋ ಸಮಾರೋಪದಲ್ಲೂ ಮುಂದಿನ ಸ್ಥಳ ಘೋಷಣೆ ಮಾಡಲಾಗುತ್ತಿತ್ತಾದರೂ 2015ರ ಏರ್‌ಶೋ ಸಮಾರೋಪದಲ್ಲಿ ಸ್ಥಳ ಸೂಚಿಸಿರಲಿಲ್ಲ. ಜತೆಗೆ ಬೆಂಗಳೂರಿನಲ್ಲಿಯೇ ನಡೆಯುತ್ತದೆ ಎಂಬುದನ್ನೂ ಸ್ಪಷ್ಟಪಡಿಸಿರಲಿಲ್ಲ. ಬಳಿಕ ತೀವ್ರ ವಿವಾದ ಉಂಟಾದ ನಂತರ ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ 2016ರ ಜೂನ್‌ನಲ್ಲಿ ಸ್ಪಷ್ಟನೆ ನೀಡಿ ಬೆಂಗಳೂರಿನಲ್ಲಿಯೇ ಮಾಡುವುದಾಗಿ ಘೋಷಿಸಿದ್ದರು.

ಬಳಿಕ 2017ರ ಏರ್‌ಶೋ ಬಳಿಕವೂ 2019ರ ಏರ್‌ಶೋ ಲಕ್ನೋ ಸ್ಥಳಾಂತರಿಸಬೇಕು ಎಂಬ ಕೂಗು ಬಂದಿತ್ತು. ಈ ಬಗ್ಗೆ ಆದೇಶವೂ ಹೊರಡಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಆದರೆ, ಇದನ್ನು ಕೇಂದ್ರ ಸರ್ಕಾರ ಅಲ್ಲ​ಗ​ಳೆ​ದಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ​ದಂತೆ ರಾಜ್ಯದ ಎಲ್ಲಾ ಪ್ರಮುಖ ನಾಯ​ಕರು ಏರೋ ಇಂಡಿಯಾ ಪ್ರದ​ರ್ಶ​ನ​ವನ್ನು ಸ್ಥಳಾಂತ​ರಿ​ಸಲು ಹುನ್ನಾರ ನಡೆ​ಸಿ​ರುವ ಕೇಂದ್ರ ಸರ್ಕಾ​ರದ ಬಗ್ಗೆ ಕಿಡಿ ಕಾರಿ​ದ್ದರು. ಸಾರ್ವ​ಜ​ನಿ​ಕ​ವಾ​ಗಿಯೂ ಸಾಕಷ್ಟುಆಕ್ರೋಶ ವ್ಯಕ್ತ​ವಾ​ಗಿ​ತ್ತು.

ಆದರೆ, ಅಂತಿ​ಮ​ವಾಗಿ ಲಕ್ನೋ ನಗ​ರ​ದಲ್ಲಿ ಇಂತಹ ಬೃಹತ್‌ ಅಂತಾ​ರಾ​ಷ್ಟ್ರೀಯ ಮಟ್ಟದ ಪ್ರದ​ರ್ಶನ ಆಯೋ​ಜಿ​ಸುವ ಸಾಮರ್ಥ್ಯ ಇಲ್ಲ ಎಂಬ ಕಾರ​ಣಕ್ಕೆ ಬೆಂಗ​ಳೂ​ರಿಗೆ ಈ ವೈಮಾ​ನಿಕ ಪ್ರದ​ರ್ಶನ ಈ ಬಾರಿ ಲಭ್ಯ​ವಾ​ಗಿದೆ. ಆದರೆ, 2019ರ ಏರ್‌ಶೋ ಬೇರೆ ನಗ​ರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯ​ತೆಯೇ ಈಗ ಹೆಚ್ಚಿದೆ ಎನ್ನ​ಲಾ​ಗು​ತ್ತಿದೆ. ಈ ವೈಮಾ​ನಿಕ ಪ್ರದ​ರ್ಶನ ಕೇವಲ ಬೆಂಗ​ಳೂ​ರಿಗೆ ಸೀಮಿ​ತ​ವಾ​ಗ​ಬಾ​ರದು ಇತರೆ ನಗ​ರ​ಗ​ಳಿಗೂ ಅವ​ಕಾಶ ಲಭ್ಯ​ವಾ​ಗ​ಬೇಕು ಎಂಬ ಕೇಂದ್ರ ಸರ್ಕಾ​ರದ ನೀತಿಯ ಪರಿ​ಣಾ​ಮ​ವಾಗಿ ಈ ಪ್ರದ​ರ್ಶನ ಸ್ಥಳಾಂತ​ರ​ಗೊ​ಳ್ಳುವ ಸಾಧ್ಯ​ತೆ​ಯಿದೆ ಎನ್ನ​ಲಾ​ಗು​ತ್ತಿದೆ.

ಈ ಗುಮಾನಿ ಹುಟ್ಟಿ​ಕೊಂಡಿ​ರುವ ಕಾರಣ ಈ ಬಾರಿಯ ಏರೋ ಇಂಡಿ​ಯಾವೇ ಬೆಂಗ​ಳೂ​ರಿ​ಗರ ಪಾಲಿನ ಅಂತಿಮ ಏರೋ ಇಂಡಿಯಾ ಎಂಬ ಭಾವನೆ ದೃಢ​ವಾ​ಗಿದೆ. ಹೀಗಾಗಿ ಈ ಪ್ರದ​ರ್ಶ​ನವನ್ನು ಕಣ್ತುಂಬಿ​ಕೊ​ಳ್ಳಲು ಬೆಂಗ​ಳೂ​ರಿ​ಗರಿಗೆ ದೊರ​ಕಿ​ರುವ ಕೊನೆಯ ಅವ​ಕಾ​ಶ​ವಿದು ಎಂದೇ ಬಿಂಬಿ​ಸ​ಲಾ​ಗು​ತ್ತಿ​ದೆ.
 

Follow Us:
Download App:
  • android
  • ios