ಶತಮಾನಗಳ ಶೈಕ್ಷಣಿಕ ಅನ್ಯಾಯದ ಬಗ್ಗೆ ಸಿಎಂ ಸಿದ್ದು ಮಾತು
ಸಂವಿಧಾನ ಜಾರಿಗೆ ಬಂದ ನಂತರವೇ ಶೂದ್ರ ಸಮುದಾಯಗಳಿಗೆ ಶಿಕ್ಷಣದ ಅವಕಾಶ ದೊರೆಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಶತಶತಮಾನಗಳ ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಶೂದ್ರರಿಗೆ ಶಿಕ್ಷಣ ಕಲಿಯಲು ಅವಕಾಶವೇ ಇರಲಿಲ್ಲ, ಒಂದು ಕಾಲದಲ್ಲಿ ಸಂಸ್ಕೃತ ಕಲಿತರೆ ಕಿವಿಗೆ ಕಾದ ಸೀಸವನ್ನು ಹಾಕುವಂತಹ ಕ್ರೂರ ಶಿಕ್ಷೆಗಳಿದ್ದವು. ಈ ಶೈಕ್ಷಣಿಕ ಅವಕಾಶಗಳ ನಿರಾಕರಣೆಯೇ ಅಸಮಾನತೆಗೆ ಮೂಲ ಕಾರಣವಾಯಿತು, ಸಂವಿಧಾನವು ಈ ಅಡೆತಡೆಗಳನ್ನು ನಿವಾರಿಸಿ ಎಲ್ಲರಿಗೂ ವಿದ್ಯಾವಂತರಾಗಲು ದಾರಿ ಮಾಡಿಕೊಟ್ಟಿತು ಎಂದು ಅವರು ವಿಶ್ಲೇಷಿಸಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared