ಸಾರಾಂಶ

ಬೆಂಗಳೂರು ಬಂದರು ಧ್ವಂಸಗೊಳಿಸಲಾಗಿದೆ ಎಂಬ ಪಾಕ್ ಪ್ರಜೆಯ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದೆ. ಕನ್ನಡ ಭಾಷೆ ಬಾರದ ಕಾರಣ ಪಾಕಿಸ್ತಾನದ ಡ್ರೋನ್ ವಾಪಸ್ ಕಳುಹಿಸಲಾಗಿದೆ ಎಂಬ ಟ್ವೀಟ್ ವೈರಲ್ ಆಗಿದ್ದು, ಪಾಕಿಸ್ತಾನಿಗಳಿಗೆ ಇಂಗ್ಲಿಷ್ ಕೂಡ ಸರಿಯಾಗಿ ಬರಲ್ಲ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಬಂದರು ಧ್ವಂಸಗೊಳಿಸಲಾಗಿದೆ ಎಂದು ಪಾಕ್ ಪ್ರಜೆಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಬೆಂಗಳೂರಿಗರು ಸೇರಿದಂತೆ ಭಾರತೀಯರು, ಪಾಕ್ ಪ್ರಜೆಯ ಟ್ವೀಟ್ ತಮಾಷೆ ಮಾಡಿ, ಸುಳ್ಳು ಸುದ್ದಿಯನ್ನು ಹರಡುವ ನಿಮ್ಮ ಕೆಟ್ಟ ಚಾಳಿಯನ್ನು ನಿಲ್ಲಿಸಿ ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಬೆಂಗಳೂರಿನಲ್ಲಿ ಸಮುದ್ರವಿದ್ರೆ ಇದ್ರೆ ತಾನೇ ಬಂದರು ಧ್ವಂಸಗೊಳಿಸಲು ಸಾಧ್ಯ? ಪಾಕಿಸ್ತಾನದಿಂದ ಬೆಂಗಳೂರಿಗೆ ಬರೋ ಧೈರ್ಯ ನಿಮ್ಮಲ್ಲಿದೆಯಾ? ನೀವು ಕ್ಷಿಪಣಿಗಳು ಲಾಂಚ್ ಆದ ಮರುಕ್ಷಣವೇ ನಾವು ಅವುಗಳನ್ನು ಹೊಡೆದುರುಳಿಸುತ್ತವೆ. ಪಾಕ್ ಗಡಿ ದಾಟುವ ಸಾಮಾರ್ಥ್ಯವೂ ನಿಮ್ಮಲ್ಲಿ ಇಲ್ಲ ಎಂದು ಭಾರತೀಯರು ಟ್ರೋಲ್ ಮಾಡಿದ್ದರು.

ಕನ್ನಡಿಗರು ಮಾತೃ ಭಾಷೆಗೆ ಮೊದಲ ಆದ್ಯತೆ ನೀಡುವದರ ಜೊತೆ ಇತರೆ ಭಾಷೆಗಳನ್ನು ಗೌರವಿಸುತ್ತಾರೆ. ರಾಜಧಾನಿ ಬೆಂಗಳೂರಿನಲ್ಲಿ ನಿಮಗೆ ಹಿಂದಿ, ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಯ ಮಾತುಗಳನ್ನಾಡುವ ಜನರು ಸಿಗುತ್ತಾರೆ. ಇದೇ ಕನ್ನಡ ವಿಷಯದ ಆಧಾರದ ಮೇಲೆ ಮತ್ತೊಮ್ಮೆ ಪಾಕಿಸ್ತಾನವನ್ನು ಟ್ರೋಲ್ ಮಾಡಲಾಗುತ್ತಿದೆ. ಫುನ್ಸುಕ್ ವಾಂಗಡು (@Phunsukwangduji) ಹೆಸರಿನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಳ್ಳಲಾಗಿದೆ. ಈ ಫುನ್ಸುಕ್ ವಾಂಗಡು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದೇನು ಅಂತ ನೋಡೋಣ ಬನ್ನಿ.

ವೈರಲ್ ಟ್ವೀಟ್ ಹೀಗಿದೆ!
ಪಾಕಿಸ್ತಾನಿ ಡ್ರೋನ್‌ಗಳು ಬೆಂಗಳೂರಿನ ಬಂದರು ತಲುಪಿದ್ದವು. ಆದರೆ ಕನ್ನಡ ಭಾಷೆ ಬಾರದ ಹಿನ್ನೆಲೆ ಪಾಕಿಸ್ತಾನದ ಡ್ರೋನ್ ವಾಪಸ್ ಕಳುಹಿಸಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಪಾಕಿಸ್ತಾನಿಗಳಿಗೆ ಸರಿಯಾಗಿ ಇಂಗ್ಲಿಷ್ ಬರಲ್ಲ. ಇನ್ನು ಅವರು ಕನ್ನಡ ಕಲಿಯೋದು ದೂರದ ಮಾತು. ಪಾಕಿಸ್ತಾನಿಗಳು ಬಾವಿಯೊಳಗಿನ ಕಪ್ಪೆಗಳಾಗಿದ್ದು, ತಮ್ಮ ಭುಜವನ್ನು ತಾವೇ ತಟ್ಟಿಕೊಳ್ಳುತ್ತವೆ ಎಂದು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಕನ್ನಡಿಗರು ಏನು ಹೇಳುತ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಬಹುತೇಕರು ನಗುವ ಎಮೋಜಿ ಹಾಕಿದ್ದಾರೆ. 

ತಪ್ಪಾದ ಮಾಹಿತಯುಳ್ಳ ಪಾಕ್ ಪ್ರಜೆಯ ಟ್ವೀಟ್‌ ಸ್ಕ್ರೀನ್‌ಶಾಟ್‌ ನ್ನು Citizens Movement, East Bengaluru ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಟ್ವೀಟ್‌ಗೆ ಕಮೆಂಟ್ ಮಾಡಿದ್ದ ಬೆಂಗಳೂರಿಗರು,'ಬೆಂಗಳೂರು ಬಂದರು ನಾಶವಾಗಿದೆ., ಕುಂದಲಹಳ್ಳಿ ಬಂದರು, ಹೆಬ್ಬಾಳ ಬಂದರು ಮತ್ತು ಸಿಲ್ಕ್ ಬೋರ್ಡ್ ಬಂದರು ಪಾಕಿಸ್ತಾನದ 7ನೇ ತಲೆಮಾರಿನ ಫೈಟರ್ ಜೆಟ್‌ಗಳಿಂದ ಸುರಕ್ಷಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ' ಎಂದು ಕಾಮೆಂಟ್‌ ಮಾಡಿದ್ದರು. ಮಳೆಗೆ ಇಲ್ಲಿಯ ರಸ್ತೆಗಳ ಮೇಲಿನ ನೀರು ನೋಡಿ ಸಮುದ್ರ ಅಂದ್ಕೊಂಡಿರಬಹುದು ಎಂದು ಕಮೆಂಟ್ ಮಾಡುವ ಮೂಲಕ ಬಿಬಿಎಂಪಿಯ ಕಾಲೆಳೆದು, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಟ್ಯಾಗ್ ಮಾಡಲಾಗಿತ್ತು.

ದೇವರಿಗೆ ಧನ್ಯವಾದಗಳು! ಪಾಕಿಸ್ತಾನಿ-ಪ್ಯಾಲೆಸ್ಟೀನಿಯನ್ ಬೆಂಗಳೂರು ಬಂದರನ್ನು ನಾಶಮಾಡಿ ಸುರಂಗ ರಸ್ತೆಗೆ ದಾರಿ ಮಾಡಿಕೊಟ್ಟರು. ನೀವು ನಮ್ಮ ಮೂಲಸೌಕರ್ಯವನ್ನು ಒಂದು ದಶಕದ ಮುಂದೆ ಮುನ್ನಡೆಸಿದ್ದೀರಿ!  ಎಂದು ಸಿಟಿಜನ್‌ ಮೂವ್‌ಮೆಂಟ್‌ ಟ್ವೀಟ್‌ ಮಾಡಿದೆ. 'ಇಂಥ ಕಠಿಣ ಸಮಯದಲ್ಲಿ ನಾನು ನೋಡಿದ ಅತ್ಯಂತ ತಮಾಷೆಯ ಟ್ವೀಟ್‌ಗಳಲ್ಲಿ ಇದು ಒಂದು' ಎಂದು ಬರೆದುಕೊಂಡಿದ್ದಾರೆ. 'ಅಯ್ಯೋ,  ನಾವು ಇನ್ನು ಮುಂದೆ ಬೋಟ್ ಮೆಟ್ರೋವನ್ನು ಬಳಸಲು ಸಾಧ್ಯವೇ ಆಗೋದಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಮತ್ತೆ ಡ್ರೋನ್ ದಾಳಿಗೆ ಯತ್ನ 
ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದ ನಂತರ ಎರಡೂ ದೇಶಗಳ ಡಿಜಿಎಂಒಗಳ ನಡುವಿನ ಮಾತುಕತೆ ಮುಗಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮತ್ತೆ ಭಾರತೀಯ ಗಡಿ ಪ್ರದೇಶದಲ್ಲಿ ಡ್ರೋನ್ ಮೂಲಕ ದಾಳಿಗೆ ಯತ್ನಿಸಿದೆ. ಸಾಂಬಾದಲ್ಲಿ ಕಾಣಿಸಿಕೊಂಡ ಪಾಕಿಸ್ತಾನಿ ಡ್ರೋನ್ ಅನ್ನು ಭಾರತೀಯ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ.