Travel

ಪವಿತ್ರ ನದಿ

ಹಿಂದೂ ಧರ್ಮದಲ್ಲಿ ಹಲವಾರು ನದಿಗಳನ್ನು ಪವಿತ್ರ ಎಂದು ಹೇಳಲಾಗುತ್ತೆ. ನದಿಗಳಿಗೆ ಸನಾತನ ಧರ್ಮದಲ್ಲಿ ತಾಯಿ ಸ್ಥಾನವನ್ನು ನೀಡಲಾಗಿದೆ. ಇದೇ ನದಿಗಳಿಗೆ ಸಂಬಂಧಿಸಿದ ಶಾಪದ ಬಗ್ಗೆ ತಿಳಿಯಿರಿ. 
 

Image credits: pexels

ನದಿಗಳಿಗೆ ಶಾಪ

ಭಾರತದಲ್ಲಿ ಹಲವು ಪವಿತ್ರ -ಪುಣ್ಯ ನದಿಗಳಿವೆ. ಅವುಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಕಳೆಯುತ್ತೆ. ಆದರೆ ಆ ನದಿಗಳು ಇಂದಿಗೂ ಶಾಪಗ್ರಸ್ತವಾಗಿವೆ.
 

Image credits: pexels

ಸರಸ್ವತಿ ನದಿ

ದುರ್ವಾಸ ಮುನಿಗಳ ಶಾಪದಂತೆ ಕಲಿಯುಗ ಬರುವವರೆಗೆ ಸರಸ್ವತಿ ನದಿ ಕಣ್ಮರೆಯಾಗಿರುತ್ತಾಳೆ, ಕಲ್ಕಿಯ ಅವತಾರದ ಬಳಿಕವಷ್ಟೇ ಸರಸ್ವತಿ ಮತ್ತೆ ಭೂಮಿ ಮೇಲೆ ಕಾಣಿಸುತ್ತಾಳೆ. 
 

Image credits: pexels

ಫಲ್ಗು ನದಿ

ಸುಳ್ಳು ಹೇಳಿದ ಫಲ್ಗು ನದಿಯನ್ನು ಯಾರೂ ಪೂಜಿಸದಂತೆ ಸೀತೆ ಶಾಪ ನೀಡಿದಳಂತೆ. ಅದಕ್ಕೆ ಇಲ್ಲಿ ಪಿಂಡದಾನದಂತಹ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತೆ.
 

Image credits: pexels

ಕೋಸಿ ನದಿ

ಕೋಸಿನದಿಯಿಂದಾಗಿ ತನ್ನ ತಪೋಭಂಗವಾದ ಹಿನ್ನೆಲೆಯಲ್ಲಿ ಋಷಿಯೊಬ್ಬರು ಈ ನದಿಗೆ ಶಾಪ ನೀಡಿದ್ದರು. ಅದರಂತೆ ಈ ನದಿಯಲ್ಲಿ ಸ್ನಾನ ಮಾಡಿದವರು ಸಾವನ್ನಪ್ಪುತ್ತಾರೆ ಎನ್ನಲಾಗಿದೆ. 
 

Image credits: pexels

ಗಂಗಾ ನದಿ

ಗಂಗಾ ನದಿಗೆ ಪಾರ್ವತಿ ದೇವಿ ಶಾಪ ನೀಡಿದ್ದರು. ಗಂಗೆ ಜನರ ಪಾಪವನ್ನೇನು ದೂರ ಮಾಡುತ್ತಾಳೆ, ಆದರೆ ಅವರ ಪಾಪವನ್ನು ಹೊತ್ತು ಗಂಗೆ ಜೀವನಪೂರ್ತಿ ಕಷ್ಟ ಪಡುವ ಶಾಪ ಪಡೆದಿದ್ದಾಳೆ. 
 

Image credits: pexels

ಚಂಬಲ್ ನದಿ

ರಾಜ ರತಿದೇವ್ ಸಾವಿರಾರು ಪ್ರಾಣಿಗಳನ್ನು ಕೊಂದು ಈ ನದಿಯಲ್ಲಿ ರಕ್ತವನ್ನು ಹರಿಯಲು ಬಿಟ್ಟ ಎನ್ನಲಾಗಿದ್ದು, ಬಳಿಕ ಇದನ್ನು ಶಾಪಗ್ರಸ್ತ ನದಿ ಎಂದು ಪರಿಗಣಿಸಲಾಯಿತು.
 

Image credits: pixabay

ಕರ್ಮನಾಶ್ ನದಿ

ಪುರಾಣ ಕಾಲದಲ್ಲಿ ಋಷಿಯೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದಾಗ, ಯುವಕರು ಬಂದು ತಪೋಭಂಗ ಮಾಡಿದ್ದರಂತೆ, ಆವಾಗ ಋಷಿ ಈ ನದಿಗೆ ಅಶುದ್ಧ ಮತ್ತು ಪಾಪಿ ಎಂದು ಶಾಪ ನೀಡಿದ್ದರಂತೆ.
 

Image credits: pixabay
Find Next One