ಹಿಂದೂ ಧರ್ಮದಲ್ಲಿ ಹಲವಾರು ನದಿಗಳನ್ನು ಪವಿತ್ರ ಎಂದು ಹೇಳಲಾಗುತ್ತೆ. ನದಿಗಳಿಗೆ ಸನಾತನ ಧರ್ಮದಲ್ಲಿ ತಾಯಿ ಸ್ಥಾನವನ್ನು ನೀಡಲಾಗಿದೆ. ಇದೇ ನದಿಗಳಿಗೆ ಸಂಬಂಧಿಸಿದ ಶಾಪದ ಬಗ್ಗೆ ತಿಳಿಯಿರಿ.
travel Jul 20 2023
Author: Suvarna News Image Credits:pexels
Kannada
ನದಿಗಳಿಗೆ ಶಾಪ
ಭಾರತದಲ್ಲಿ ಹಲವು ಪವಿತ್ರ -ಪುಣ್ಯ ನದಿಗಳಿವೆ. ಅವುಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಕಳೆಯುತ್ತೆ. ಆದರೆ ಆ ನದಿಗಳು ಇಂದಿಗೂ ಶಾಪಗ್ರಸ್ತವಾಗಿವೆ.
Image credits: pexels
Kannada
ಸರಸ್ವತಿ ನದಿ
ದುರ್ವಾಸ ಮುನಿಗಳ ಶಾಪದಂತೆ ಕಲಿಯುಗ ಬರುವವರೆಗೆ ಸರಸ್ವತಿ ನದಿ ಕಣ್ಮರೆಯಾಗಿರುತ್ತಾಳೆ, ಕಲ್ಕಿಯ ಅವತಾರದ ಬಳಿಕವಷ್ಟೇ ಸರಸ್ವತಿ ಮತ್ತೆ ಭೂಮಿ ಮೇಲೆ ಕಾಣಿಸುತ್ತಾಳೆ.
Image credits: pexels
Kannada
ಫಲ್ಗು ನದಿ
ಸುಳ್ಳು ಹೇಳಿದ ಫಲ್ಗು ನದಿಯನ್ನು ಯಾರೂ ಪೂಜಿಸದಂತೆ ಸೀತೆ ಶಾಪ ನೀಡಿದಳಂತೆ. ಅದಕ್ಕೆ ಇಲ್ಲಿ ಪಿಂಡದಾನದಂತಹ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತೆ.
Image credits: pexels
Kannada
ಕೋಸಿ ನದಿ
ಕೋಸಿನದಿಯಿಂದಾಗಿ ತನ್ನ ತಪೋಭಂಗವಾದ ಹಿನ್ನೆಲೆಯಲ್ಲಿ ಋಷಿಯೊಬ್ಬರು ಈ ನದಿಗೆ ಶಾಪ ನೀಡಿದ್ದರು. ಅದರಂತೆ ಈ ನದಿಯಲ್ಲಿ ಸ್ನಾನ ಮಾಡಿದವರು ಸಾವನ್ನಪ್ಪುತ್ತಾರೆ ಎನ್ನಲಾಗಿದೆ.
Image credits: pexels
Kannada
ಗಂಗಾ ನದಿ
ಗಂಗಾ ನದಿಗೆ ಪಾರ್ವತಿ ದೇವಿ ಶಾಪ ನೀಡಿದ್ದರು. ಗಂಗೆ ಜನರ ಪಾಪವನ್ನೇನು ದೂರ ಮಾಡುತ್ತಾಳೆ, ಆದರೆ ಅವರ ಪಾಪವನ್ನು ಹೊತ್ತು ಗಂಗೆ ಜೀವನಪೂರ್ತಿ ಕಷ್ಟ ಪಡುವ ಶಾಪ ಪಡೆದಿದ್ದಾಳೆ.
Image credits: pexels
Kannada
ಚಂಬಲ್ ನದಿ
ರಾಜ ರತಿದೇವ್ ಸಾವಿರಾರು ಪ್ರಾಣಿಗಳನ್ನು ಕೊಂದು ಈ ನದಿಯಲ್ಲಿ ರಕ್ತವನ್ನು ಹರಿಯಲು ಬಿಟ್ಟ ಎನ್ನಲಾಗಿದ್ದು, ಬಳಿಕ ಇದನ್ನು ಶಾಪಗ್ರಸ್ತ ನದಿ ಎಂದು ಪರಿಗಣಿಸಲಾಯಿತು.
Image credits: pixabay
Kannada
ಕರ್ಮನಾಶ್ ನದಿ
ಪುರಾಣ ಕಾಲದಲ್ಲಿ ಋಷಿಯೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದಾಗ, ಯುವಕರು ಬಂದು ತಪೋಭಂಗ ಮಾಡಿದ್ದರಂತೆ, ಆವಾಗ ಋಷಿ ಈ ನದಿಗೆ ಅಶುದ್ಧ ಮತ್ತು ಪಾಪಿ ಎಂದು ಶಾಪ ನೀಡಿದ್ದರಂತೆ.