relationship

ನಿಜವಾದ ಸ್ನೇಹಿತರು ಯಾರೆಂದು ತಿಳಿಯುವುದು

ನಮ್ಮ ಸುತ್ತಮುತ್ತಲಿರುವವರೆಲ್ಲರೂ ಒಳ್ಳೆಯ ಸ್ನೇಹಿತರಾಗಿರುವುದಿಲ್ಲ.ಚಾಣಕ್ಯನೀತಿಯ ಪ್ರಕಾರ ಒಳ್ಳೆಯ ಗೆಳೆಯರನ್ನು ಹುಡುಕುವುದು ಹೇಗೆ ನೋಡೋಣ.
 

ಅನಾರೋಗ್ಯ ಸಮಯದಲ್ಲಿ..

ಚಾಣಕ್ಯ ನೀತಿ ಪ್ರಕಾರ.. ಆರೋಗ್ಯವು ಸರಿಯಿಲ್ಲದಿದ್ದಾಗ ನಿಮ್ಮೊಂದಿಗೆ ಇದ್ದು ನಿಮಗೆ ಸಹಾಯ ಮಾಡುವವರು ನಿಮ್ಮ ನಿಜವಾದ ಮಿತ್ರರು. ನಿಮ್ಮ ಹಿತೈಷಿಗಳು. 

ದುಃಖದಲ್ಲಿ ಜೊತೆಗಿರುವವರು..

ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ದುಃಖ ಬರುತ್ತದೆ. ಇದು ಸಹಜ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ.. ದುಃಖದ ಸಮಯದಲ್ಲಿ ಜೊತೆಯಲ್ಲಿರುವವನೇ ನಿಜವಾದ ಸ್ನೇಹಿತ.

ಕಷ್ಟದ ಸಮಯದಲ್ಲಿ..

ಯಾವಾಗಲೂ ಪರಿಸ್ಥಿತಿಗಳು ಒಂದೇ ರೀತಿ ಇರುವುದಿಲ್ಲ. ಆದರೆ ನಮಗೆ ಕಷ್ಟ, ಕ್ಷಾಮ ಬಂದಾಗ ಅಂದರೆ ತಿನ್ನಲು ಸಹ ಇಲ್ಲದಿದ್ದಾಗ ಜೊತೆಯಲ್ಲಿರುವವನೇ ನಿಜವಾದ ಸ್ನೇಹಿತ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. 

ಶತ್ರುవు ಎದುರಿದ್ದಾಗ..

ನಿಮ್ಮ ಶತ್ರು ನಿಮಗೆ ಎದುರಾದಾಗ.. ನಿಮ್ಮ ಸ್ನೇಹಿತ ನಿಮ್ಮನ್ನು ಒಬ್ಬಂಟಿಯಾಗಿ ಬಿಡದೆ ನಿಮ್ಮ ಜೊತೆಯಲ್ಲಿರುವವನೇ ನಿಜವಾದ ಸ್ನೇಹಿತ. 

ಸರ್ಕಾರಿ ಕೆಲಸಗಳಲ್ಲಿ

ವಾಜ್ಯ, ಕೋರ್ಟ್ ಕೇಸ್‌ಗಳಂತಹ ಸಮಸ್ಯೆಗಳಲ್ಲಿ ನೀವು ಸಿಲುಕಿಕೊಂಡಾಗ.. ನಿಮ್ಮ ಜೊತೆಯಲ್ಲಿ ಇದ್ದು ನಿಮ್ಮನ್ನು ರಕ್ಷಿಸುವವರೇ ನಿಮ್ಮ ನಿಜವಾದ ಹಿತೈಷಿಗಳು.

ಅಂತ್ಯಕ್ರಿಯೆಯಲ್ಲಿ ಜೊತೆಗಿರುವವರು

ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದಾಗ ನಿಮ್ಮನ್ನು ಒಬ್ಬಂಟಿಯಾಗಿ ಬಿಡದೆ ಆ ಸಮಯದಲ್ಲಿ ನಿಮಗಾಗಿ ಕೆಲಸ ಮಾಡುವವನೇ ನಿಜವಾದ ಸ್ನೇಹಿತ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. 

Find Next One