Kannada

ಸಬ್ಜಾ ಬೀಜಗಳಲ್ಲಿನ ಲಾಭಗಳು

ಸಬ್ಜಾ ಅಥವಾ ಕಾಮ ಕಸ್ತೂರಿ ಬೀಜಗಳು ಹಲವು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಕಪ್ಪು ಎಳ್ಳು ಬೀಜಗಳನ್ನು ಹೋಲುವ ಈ ಚಿಕ್ಕ ಕಪ್ಪು ಬೀಜಗಳು ಪೌಷ್ಟಿಕಾಂಶದ ಆಗರವಾಗಿದೆ.

Kannada

ಜೀರ್ಣಕ್ರಿಯೆಯ ಆರೋಗ್ಯಕ್ಕೆ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಲ್ಲಿರುವ ನಾರಿನಂಶವು ಕರುಳಿನ ಚಲನೆಯನ್ನು ಆರೋಗ್ಯಕರವಾಗಿಡಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

Image credits: our own
Kannada

ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ

ಸಬ್ಜಾ ಬೀಜವನ್ನು ನೀರಿನಲ್ಲಿ ನೆನೆಸಿದಾಗ ಆ ಬೀಜಗಳು ಉಬ್ಬುತ್ತವೆ ಮತ್ತು ಅದರಲ್ಲಿರುವ ನಾರಿನಂಶ ಹೆಚ್ಚಾಗುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆರೋಗ್ಯಕರ ತೂಕ ಇಳಿಕೆಗೆ ಕಾರಣವಾಗುತ್ತದೆ.

Image credits: our own
Kannada

ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು

ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಬ್ಜಾ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಸಬ್ಜಾ ಬೀಜಗಳಲ್ಲಿರುವ ನಾರಿನಂಶವು ಜೀರ್ಣಕ್ರಿಯೆ ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ.

Image credits: our own
Kannada

ಚರ್ಮಕ್ಕೆ ಒಳ್ಳೆಯದು:

ಸಬ್ಜಾ ಬೀಜದಲ್ಲಿ ಅಲರ್ಜಿ ವಿರೋಧಿ ಗುಣಗಳಿವೆ. ಮೊಡವೆಗಳಂತಹ ಸಮಸ್ಯೆಗಳಿಂದ ರಕ್ಷಿಸುತ್ತವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸಬ್ಜಾ ಬೀಜದ ನೀರನ್ನು ಕುಡಿದರೆ ಚರ್ಮವು ಹೊಳೆಯುತ್ತದೆ.

Image credits: our own
Kannada

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

 ಸಬ್ಜಾ ಬೀಜದಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Image credits: our own
Kannada

ಹೃದಯಕ್ಕೆ ಒಳ್ಳೆಯದು

ಸಬ್ಜಾ ಬೀಜಗಳು ಹೃದಯಾಘಾತವನ್ನು ತಡೆಯಲು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿತ ಕಾಯಿಲೆಗಳಿಗೂ ಸಹಾಯ ಮಾಡುತ್ತದೆ. 

Image credits: our own
Kannada

ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ಸಬ್ಜಾ ಬೀಜವು ಒತ್ತಡವನ್ನು ನಿಯಂತ್ರಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಇತರ ಪೋಷಕಾಂಶಗಳು ನರಪ್ರೇಕ್ಷಕ ಕಾರ್ಯವನ್ನು ನಿಯಂತ್ರಿಸುತ್ತದೆ.

Image credits: our own

ಈ ಐದು ಆರೋಗ್ಯ ಸಮಸ್ಯೆಗಳಿದ್ದರೆ ಕಾಫಿ ಕುಡಿಯೋದು ಈಗಲೇ ಬಿಟ್ಟು ಬಿಡಿ

ಬಾಯಿಗೆ ಸಿಹಿ ನೀಡುವ ಸಕ್ಕರೆ ಇಷ್ಟೊಂದು ಡೇಂಜರಸ್ಸಾ?

ಅಜೀರ್ಣ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಸಮಸ್ಯೆಗೆ ರಾಮಬಾಣ ಶುಂಠಿ ನೀರು

ಮಧ್ಯಾಹ್ನದ ಊಟಕ್ಕೆ ಅನ್ನದ ಬದಲಿಗೆ ಇವುಗಳನ್ನು ತಿನ್ನಿ, ತೂಕ ಇಳಿಸುವುದು ಸುಲಭ!