Kannada

ಚಾಣಕ್ಯ ನೀತಿ ಪ್ರಕಾರ ಯಾರನ್ನು ನಂಬಬೇಕು?

Kannada

ಯಾರನ್ನು ನಂಬಬೇಕು?

ಚಾಣಕ್ಯ ನೀತಿ ಪ್ರಕಾರ ಯಾರನ್ನಾದರೂ ನಂಬುವ ಮೊದಲು ನಾಲ್ಕು ವಿಷಯಗಳನ್ನು ಪರಿಶೀಲಿಸಬೇಕು. ಅದರ ನಂತರ ಅವರ ಮೇಲೆ ನಂಬಿಕೆ ಇಡಬೇಕು. ಯಾವ ವಿಷಯಗಳೆಂದು ನೋಡೋಣ..

 

 

Kannada

ಚಾಣಕ್ಯ ನೀತಿ ಶ್ಲೋಕ

ಯಥಾ ಚತುರ್ಭಿಃ ಕನಕಂ ಪರೀಕ್ಷ್ಯತೇ ನಿಘರ್ಷಣಂ ಛೇದನತಾಪತಾಡನೈಃ।
ತಥಾ ಚತುರ್ಭಿಃ ಪುರುಷಂ ಪರೀಕ್ಷ್ಯತೇ ತ್ಯಾಗೇನ ಶೀಲೇನ ಗುಣೇನ ಕರ್ಮಣಾ।।

Kannada

ಶ್ಲೋಕದ ಅರ್ಥ ಇದೇ

ಆಚಾರ್ಯ ಚಾಣಕ್ಯರ ಪ್ರಕಾರ, ಬಂಗಾರವನ್ನು ನಾಲ್ಕು ವಿಧಗಳಲ್ಲಿ ಪರೀಕ್ಷಿಸಿದಂತೆ - ಉಜ್ಜುವುದು, ಕತ್ತರಿಸುವುದು, ಸುಡುವುದು, ಹೊಡೆಯುವುದು, ಹಾಗೆಯೇ ವ್ಯಕ್ತಿಯನ್ನು ತ್ಯಾಗ, ಶೀಲ, ಗುಣ, ಕರ್ಮಗಳಿಂದ ಪರೀಕ್ಷಿಸಬೇಕು.

Kannada

ವ್ಯಕ್ತಿಯ ತ್ಯಾಗ ಗುಣ ನೋಡಬೇಕು

ಇತರರ ಸುಖಕ್ಕಾಗಿ ತನ್ನ ಸುಖವನ್ನು ತ್ಯಾಗ ಮಾಡುವ ವ್ಯಕ್ತಿಯನ್ನು ನಂಬಬಹುದು. ಅಂತಹವರು ಇತರರ ಆನಂದವನ್ನು ತಮ್ಮ ಸುಖಕ್ಕಿಂತ ಹೆಚ್ಚಾಗಿ ಭಾವಿಸುತ್ತಾರೆ.

Kannada

ನಡವಳಿಕೆಯಲ್ಲಿ ಪ್ರಾಮಾಣಿಕತೆ

ಶೀಲ ಎಂದರೆ ನಡವಳಿಕೆಯ ಜ್ಞಾನ, ಪವಿತ್ರತೆ. ಅಂದರೆ ಪ್ರತಿಯೊಂದು ರೀತಿಯಲ್ಲೂ ನಡವಳಿಕೆಯಲ್ಲಿ ನಿಷ್ಣಾತರು, ಪವಿತ್ರವಾಗಿ ನಡೆದುಕೊಳ್ಳುವ ವ್ಯಕ್ತಿಯನ್ನು ನಂಬಬಹುದು.

Kannada

ಗುಣಗಳಲ್ಲಿ ಉತ್ತಮ

ಕೋಪ, ಸೋಮಾರಿತನ, ಸ್ವಾರ್ಥ, ಅಹಂಕಾರ ಮುಂತಾದ ದುರ್ಗುಣಗಳು ಇಲ್ಲದವರನ್ನು ನಂಬಬಹುದು. ಸತ್ಯವನ್ನು ಪಾಲಿಸುವವರನ್ನು ನಂಬಬೇಕು.

Kannada

ಕಷ್ಟಜೀವಿ, ಪ್ರಾಮಾಣಿಕ

ಕಷ್ಟಪಟ್ಟು, ಪ್ರಾಮಾಣಿಕವಾಗಿ ತನ್ನ ಕುಟುಂಬವನ್ನು ಪೋಷಿಸುವ, ತಪ್ಪು ಮಾಡದ ವ್ಯಕ್ತಿಯನ್ನು ನಂಬಬಹುದು.

ದೇವಸ್ಥಾನದಲ್ಲಿ ಈ 7 ತಪ್ಪು ಮಾಡಬೇಡಿ

ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವದ ದಿನಾಂಕ ಬದಲು

ಸಮಯಕ್ಕೆ ಸರಿಯಾಗಿ ಈ 4 ಕೆಲಸಗಳನ್ನು ಮಾಡಿ

ಗುಲಾಬಿ ಅಥವಾ ಪಿಂಕ್ ಕಲರ್ ಪ್ರೀತಿಯ ಸಂಕೇತ ಅಲ್ವಂತೆ, ಯಾಕೆ ಗೊತ್ತಾ?