Festivals

ಗಣೇಶನಿಗೆ ಪ್ರಿಯವಾದ 7 ಹೂವುಗಳು, ಸಸ್ಯಗಳು ಇದ್ದರೆ ಸಿರಿ ಸಂಪತ್ತು ನಿಮ್ಮದೇ!

ಹುಲ್ಲು

ಸಾಮಾನ್ಯವಾಗಿ ತೋಟ, ಹಸಿರು ಹುಲ್ಲುಗಾವಲುಗಳಲ್ಲಿ ಬೆಳೆಯುವ ಈ ಹುಲ್ಲು ವಿನಾಯಕನಿಗೆ ತುಂಬಾ ಇಷ್ಟ. ಹುಲ್ಲನ್ನು ಅರ್ಪಿಸಿ ವಿನಾಯಕನನ್ನು ಪ್ರಸನ್ನಗೊಳಿಸುವುದು ಸುಲಭ ಮಾರ್ಗ.

ಬಂತಿ ಹೂಗಳು

ವಿನಾಯಕನಿಗೆ ಇಷ್ಟವಾದ ಹೂವುಗಳಲ್ಲಿ ಬಂತಿ ಹೂವು ಒಂದು. ಈ ಅದ್ಭುತವಾದ ಹೂವುಗಳು ಸಕಾರಾತ್ಮಕ ಭಾವನೆಗಳಿಗೆ,  ಶಕ್ತಿಗೆ ಸಂಕೇತಗಳು.

ಮಂದಾರ ಹೂವು

ಮಂದಾರ ಹೂವನ್ನು (ದಾಸವಾಳ) ತುಂಬಾ ಶುಭಪ್ರದವೆಂದು ಪರಿಗಣಿಸಲಾಗುತ್ತದೆ. ಇದರ ಕೆಂಪು ಹೂವು ವಿನಾಯಕನಿಗೆ ತುಂಬಾ ಇಷ್ಟ. ಈ ಗಣೇಶ ಚತುರ್ಥಿಯಂದು ನೀವು ಇದನ್ನು ಅರ್ಪಿಸಿದರೆ.. ಅಭಿವೃದ್ಧಿ, ಸಂಪತ್ತುಗಳು ಒದಗಿ ಬರುತ್ತವೆ.

ನೀಲಿ ಗೋಕರ್ಣ

ವಿನಾಯಕನಿಗೆ ನೀಲಿ ಗೋಕರ್ಣ ಹೂವು ಕೂಡ ಇಷ್ಟ. ಇದು ಸೌಂದರ್ಯಕ್ಕೆ ಸಂಕೇತ. ಆತನ ಆಶೀರ್ವಾದ ಪಡೆಯಲು ಬಯಸುವವರು ಇದನ್ನು ಅರ್ಪಿಸಬೇಕು.

ಮಲ್ಲಿಗೆ

ವಿನಾಯಕನ ಪೂಜೆಗೆ ಮಲ್ಲಿಗೆ ಹೂಗಳನ್ನು ಸಹ ಬಳಸಲಾಗುತ್ತದೆ. ಇದಕ್ಕೆ ಪ್ರತಿದಿನ ಸುಮಾರು 6 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕಾಗುತ್ತದೆ. ಆದ್ದರಿಂದ ಗಿಡ ನೆಟ್ಟಾಗ ಸಾಕಷ್ಟು ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ.

ಹಳದಿ ಚೆಂಡು ಹೂವು

ತುಂಬಾ ಅದ್ಭುತವಾದ ಹೂವುಗಳಲ್ಲಿ ಹಳದಿ ಚೆಂಡು ಹೂವು ಒಂದು. ಈ ಹೂವುಗಳು ದೃಷ್ಟಿ ದೋಷಗಳನ್ನು ನಿವಾರಿಸುತ್ತವೆ. ಮನೆಯಲ್ಲಿ ನಕಾರಾತ್ಮಕತೆಯನ್ನು ಸಹ ದೂರ ಮಾಡುತ್ತದೆ.

ಎಕ್ಕೆ ಹೂವು

ಬಿಳಿ ಎಕ್ಕೆ ಹೂವುಗಳಲ್ಲಿ ವಿನಾಯಕ ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಗಿಡವನ್ನು ಪ್ರತಿದಿನ ಪೂಜಿಸಿದರೆ ವಿನಾಯಕನನ್ನು ಪೂಜಿಸಿದಂತೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Find Next One