Festivals

ಕೃಷ್ಣ ಜನ್ಮಾಷ್ಟಮಿ 2024: ಹಿತ್ತಾಳೆ ಲಡ್ಡು ಗೋಪಾಲ

ಲಡ್ಡು ಗೋಪಾಲ ಹಿಂದೂ ಧರ್ಮದಲ್ಲಿ ಪೂಜಿಸುವ ಕೃಷ್ಣನ ಜನಪ್ರಿಯ ರೂಪವಾಗಿದೆ ಗೋಪಾಲ ಮೂರ್ತಿಯ ಶಿಶು ಭಗವಾನ್ ಕೃಷ್ಣನ ಅಲಂಕಾರಿತ ಪ್ರತಿಮೆಯಾಗಿದೆ..

ಜನ್ಮಾಷ್ಟಮಿ ಯಾವಾಗ?

ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 26 ರಂದು ಆಚರಿಸಲಾಗುತ್ತದೆ. ನೀವು ಸಾಮಾನ್ಯ ಮನೆಯ ವಸ್ತುಗಳನ್ನು ಬಳಸಿಕೊಂಡು ಲಡ್ಡು ಗೋಪಾಲನನ್ನು ಸ್ವಚ್ಛಗೊಳಿಸಬಹುದು.

ಹಿತ್ತಾಳೆ ಶುಚಿಗೊಳಿಸಲು ನಿಂಬೆ

ಹಿತ್ತಾಳೆ ಲಡ್ಡು ಗೋಪಾಲನನ್ನು ಸ್ವಚ್ಛಗೊಳಿಸಲು ನಿಂಬೆ ಮತ್ತು ಉಪ್ಪನ್ನು ಬಳಸಿ. ನಿಂಬೆಯನ್ನು ಅರ್ಧಕ್ಕೆ ಕತ್ತರಿಸಿ ಸ್ವಲ್ಪ ಉಪ್ಪಿನೊಂದಿಗೆ ವಿಗ್ರಹದ ಮೇಲೆ ಉಜ್ಜಿ.

ಹುಳಿ ಮೊಸರು ಮತ್ತು ನಿಂಬೆ ಮಿಶ್ರಣ

ಲಡ್ಡು ಗೋಪಾಲನನ್ನು ಸ್ವಚ್ಛಗೊಳಿಸಲು ಹುಳಿ ಮೊಸರು, ನಿಂಬೆ, ಒಂದು ಚಿಟಿಕೆ ಅರಿಶಿನ ಮತ್ತು ಕಡಲೆ ಹಿಟ್ಟನ್ನು ಸೇರಿಸಿ. ಈ ಮಿಶ್ರಣವು ವಿಗ್ರಹದ ಕಪ್ಪು ಬಣ್ಣವನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.

ಒಣ ಮಾವಿನ ಹುಡಿ ಶುಚಿಗೊಳಿಸುವಿಕೆ

ನಿಂಬೆ ಅಥವಾ ಮೊಸರು ಲಭ್ಯವಿಲ್ಲದಿದ್ದರೆ, ಒಣ ಮಾವಿನ ಹುಡಿಯನ್ನು ಬಳಸಿ. ಪುಡಿಯೊಂದಿಗೆ ದ್ರಾವಣವನ್ನು ಬೆರೆಸಿ ಮತ್ತು ಬಟ್ಟೆಯನ್ನು ಬಳಸಿ ವಿಗ್ರಹವನ್ನು ಸ್ವಚ್ಛಗೊಳಿಸಬಹುದು. ಇದರಿಂದ ವಿಗ್ರಹ ಪಳಪಳ ಹೊಳೆಯುತ್ತದೆ.

 

ಹಿತ್ತಾಳೆ ಹೊಳಪಿಗೆ ವಿನೆಗರ್

ಹಿತ್ತಾಳೆ ವಿಗ್ರಹವನ್ನು ವಿನೆಗರ್‌ನಿಂದ ತೊಳೆದು ಹೊಳಪು ಮಾಡಿ. ವಿಗ್ರಹವನ್ನು ಹೊಳೆಯುವಂತೆ ಮಾಡಲು ಬಟ್ಟೆ ಅಥವಾ ನಿಮ್ಮ ಕೈಗಳಿಗೆ ಎರಡು ಚಮಚ ವಿನೆಗರ್ ಅನ್ನು ಹಚ್ಚಿ.

 

ಹುಣಸೆ ಹಣ್ಣಿನ ತಿರುಳು ಶುಚಿಗೊಳಿಸುವಿಕೆ

ಹುಣಸೆಹಣ್ಣನ್ನು 15 ನಿಮಿಷ ನೀರಿನಲ್ಲಿ ನೆನೆಸಿ. ತಿರುಳನ್ನು ವಿಗ್ರಹಕ್ಕೆ ಹಚ್ಚಿ, ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

Image credits: our own
Find Next One