Asianet Suvarna News Asianet Suvarna News

'ನನ್ನ ಪ್ರಾಣ ಒತ್ತೆ ಇಟ್ಟಾದರೂ ಮುಸ್ಲಿಮರನ್ನು ಕಾಪಾಡುತ್ತೇನೆ'

ಸೋಮಶೇಖರ್ ರೆಡ್ಡಿ ಹೇಳಿಕೆಗೆ ಬಿ. ನಾಗೇಂದ್ರ ಆಕ್ರೋಷ| ಜಮೀರ್‌ ಅಹ್ಮದ್ ಬಂದರೆ ನಗರಕ್ಕೆ ಬರುವುದು ಬೇಡ| ಎಲ್ಲರೂ ಕುಳಿತು ನಮ್ಮೂರಿನ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ| ಜಮೀರ್‌ ಹೇಳಿಕೆಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟ ನಾಗೇಂದ್ರ|

ಬಳ್ಳಾರಿ(ಜ.08): ಪ್ರಚೋದನಕಾರಿ ಭಾಷಣ ಮಾಡಿದ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನನ್ನ ಪ್ರಾಣ ಒತ್ತೆ ಇಟ್ಟಾದರೂ ಮುಸ್ಲಿಮರನ್ನು ಕಾಪಾಡುತ್ತೇನೆ ಎಂದು ಹೇಳುವ ಮೂಲಕ ಮುಸ್ಲಿಮರ ಪರ ಬಿ. ನಾಗೇಂದ್ರ ನಿಂತಿದ್ದಾರೆ. 

ಜಮೀರ್‌ ಅಹ್ಮದ್ ಬಂದರೆ ನಗರಕ್ಕೆ ಬರುವುದು ಬೇಡ. ಬಳ್ಳಾರಿಯಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡರು ಇದ್ದಾರೆ. ಮುಸ್ಲಿಂ ಸಮಾಜದ ಅನೇಕ ಹಿರಿಯರಿದ್ದಾರೆ. ಎಲ್ಲರೂ ಕುಳಿತು ನಮ್ಮೂರಿನ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸುತ್ತೇವೆ ಎಂದು ಹೇಳುವ ಮೂಲಕ ಜಮೀರ್‌ ಹೇಳಿಕೆಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ. ಸೋಮಶೇಖರ್ ರೆಡ್ಡಿ ಹೇಳಿದ್ದು ತಪ್ಪಿದೆ, ಅವರ ಹೇಳಿಕೆಗೆ ನನ್ನ ವಿರೋಧವಿದೆ ಎಂದು ಹೇಳಿದ್ದಾರೆ. 
 

Video Top Stories