Asianet Suvarna News Asianet Suvarna News

ದಸರಾ ಟ್ರಿಪ್ ಹೋಗುವ ಪ್ಲಾನ್ ಇದೆಯಾ? ಮೈಸೂರು ಜತೆ ಈ ಸ್ಥಳಗಳಿಗೂ ಭೇಟಿ ಕೊಡಿ.

ದಸರಾ ಸಂದರ್ಭದಲ್ಲಿ ಮೈಸೂರು ಸೇರಿ ಭೇಟಿ ನೀಡಲೇಬೇಕಾದ ಅನೇಕ ತಾಣಗಳಿವೆ. ಒಂದೊಂದು ಕಡೆ ವಿಭಿನ್ನ ಆಚರಣೆ ಇದೆ. ರಜೆ ಸಮಯದಲ್ಲಿ ಇವು ಜನರಿಗೆ ರಿಲ್ಯಾಕ್ಸ್‌ ಮೂಡಿಗೆ ಕರೆದುಕೊಂಡು ಹೋಗುತ್ತವೆ. ಅವುಗಳ ವಿವರ ಇಲ್ಲಿದೆ.

Best places to visit Dasara Festival
Author
First Published Sep 25, 2022, 12:31 PM IST

ದಸರಾ ಬಂದರೆ ಸಾಕು ಸಾಲು-ಸಾಲು ರಜೆಗಳು, ಎಲ್ಲಿ ನೋಡಿದರೂ ಹಬ್ಬದ ವಾತಾವರಣ. ದೇಶದ ಹಲವು ಕಡೆ ದಸರಾವನ್ನು ವಿಭಿನ್ನ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುವ ಹಬ್ಬವೇ ವಿಜಯದಶಮಿ ಅಥವಾ ದಸರಾ ಹಬ್ಬ. ಇದನ್ನು ಹಲವೆಡೆ ಬೇರೆ ಬೇರೆ ಸಂಕೇತವಾಗಿ ಆಚರಿಸುತ್ತಾರೆ. ಒಟ್ಟು ಒಂಬತ್ತು-ಹತ್ತು ದಿನಗಳು ಭಾರತದ ಬಹುತೇಕ ಕಡೆ ಎಲ್ಲಿ ನೋಡಿದರೂ ಹಬ್ಬದ ವಾತಾವರಣ. ಇಂತಹ ಸಾಂಸ್ಕೃತಿಕ ವಾತಾವರಣವು ಜನರನ್ನು ರಿಲ್ಯಾಕ್ಸ್‌ ಮೂಡಿಗೆ ಕರೆದುಕೊಂಡು ಹೋಗುತ್ತವೆ. ದಸರಾ ಸಂದರ್ಭದಲ್ಲಿ ಭೇಟಿ ನೀಡಲೇಬೇಕಾದ ಅನೇಕ ತಾಣಗಳಿವೆ. ಅವುಗಳ ವಿವರ ಇಲ್ಲಿದೆ.

ಮೈಸೂರು ದಸರಾ ನೋಡಲು ಸುಂದರ:

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ದಸರಾ ಉತ್ಸವಕ ವಿಶ್ವವಿಖ್ಯಾತಿ ಗಳಿಸಿದೆ. ಮೈಸೂರು ದಸರಾ (Mysore Dasara) ಸಾಮಾನ್ಯವಾಗಿ ದೇಶದಲ್ಲೆ ಹೆಚ್ಚು ಪ್ರಸಿದ್ಧಿ ಪಡೆದ ಉತ್ಸವವಾಗಿದೆ. ಮೈಸೂರಿನಲ್ಲಿ ದಸರಾವನ್ನು 10 ದಿನ ವಿಜೃಂಭಣೆಯಿಂದ ಆಚರಿಸುತ್ತಾರೆ. ದಸರಾದಲ್ಲಿ ರಾತ್ರಿ ಮೈಸೂರು ಅರಮನೆಯನ್ನು ಸಾವಿರಾರು ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ದಸರೆಯ ಹತ್ತು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆಯಲ್ಲಿ ನಡೆಯುತ್ತವೆ. ಮೈಸೂರು ದಸರಾದ ಇನ್ನೊಂದು ಆಕರ್ಷಣೆ ಎಂದರೆ ಜಂಬೂ ಸವಾರಿ (Jamboo Savari). ಆನೆಯು ಶ್ರೀ ಚಾಮುಂಡಿದೇವಿ (Shri Chamundi Devi) ಇರುವ ಅಂಬಾರಿಯನ್ನು ಹೊತ್ತು ಸಾಗುತ್ತದೆ. ಇದು ನೋಡುಗರ ಕಣ್ಮನ ಸೆಳೆಯುತ್ತದೆ. ಇದು ವಿಶ್ವದಲ್ಲಿ ಪ್ರಖ್ಯಾತಿ ಪಡೆದಿದೆ. ಇನ್ನು ದಸರಾ ಸಮಯದಲ್ಲಿ ಮೈಸೂರಿನಲ್ಲಿ ಕಲಾ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸುತ್ತಾರೆ. ಇದರಲ್ಲಿ ಸ್ಥಳೀಯ ತಿಂಡಿಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಸಿಗುತ್ತವೆ.

ತುಳಜಾಪುರದಲ್ಲಿ ವಿಜಯದಶಮಿ ಸಂಭ್ರಮ:

ತುಳಜಾಪುರದ ಭವಾನಿ ದೇವಾಲಯವು ಅತ್ಯಂತ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿದೆ. ತುಳಜಾಪುರ ಮಹಾರಾಷ್ಟ್ರದ (Maharashtra) ಒಸ್ಮಾನಾಬಾದ್ ಜಿಲ್ಲೆಯ ತಾಲೂಕು ಕೇಂದ್ರವಾಗಿದೆ. ಇಲ್ಲಿ ಮರಾಠಿಗರಲ್ಲಿ ಪ್ರಸಿದ್ಧವಾದ ತುಳಜಾ ಭವಾನಿ ದೇವಾಲಯವಿದೆ (Tulaja Bhvani Temple). ದೇವಿಯ ದರ್ಶನ ಪಡೆಯಲು ಆಗಮಿಸುವ ಭಕ್ತರಿಂದ ತುಳಜಾಪುರವು ತುಂಬಿ ತುಳುಕುತ್ತಿರುತ್ತದೆ. ಇಲ್ಲಿ ತುಳಜಾ ಭವಾನಿ ದೇವಿಯ ದೇವಾಲಯವನ್ನು ಸ್ಥಾಪಿಸಿದ ತರುವಾಯ ಈ ಊರು ತುಳಜಾಪುರ್ ಎಂಬ ಹೊಸ ಹೆಸರನ್ನು ಪಡೆಯಿತು. ಇಲ್ಲಿನ ತುಳಜಾ ಭವಾನಿ ದೇವಾಲಯವು ಭಾರತದ 51 ಪವಿತ್ರ ಶಕ್ತಿ ಪೀಠಗಳಲ್ಲಿ ಒಂದು ಎಂದು ಪ್ರಾಮುಖ್ಯತೆಯನ್ನು ಗಳಿಸಿದೆ. ಶಿವಾಜಿ ಮಹಾರಾಜನಿಗೆ (Shivaji Maharaja) ಖಡ್ಗ ನೀಡಿದ ಕುಲದೇವತೆ ಅಂಬಾಭವಾನಿಯು, ಕರ್ನಾಟಕದ ಅರ್ಧದಷ್ಟು ಜನರ ಕುಲದೇವತೆಯೂ ಆಗಿದ್ದಾಳೆ. ಈ ಶಕ್ತಿಸ್ವರೂಪಿಣಿಯ ಜಾತ್ರೆಯು ಪ್ರತಿ ವರ್ಷ ಮಹಾನವಮಿ ಅಮಾವಾಸ್ಯೆಯಿಂದ ಸೀಗಿ ಹುಣ್ಣಮೆವರೆಗೆ ನಡೆಯುತ್ತಿದೆ. ರಾಜ್ಯದಿಂದ ಭಕ್ತರು ದೇವಿ ದರ್ಶನಕ್ಕೆ ನಿರಂತರವಾಗಿ ತೆರಳುತ್ತಾರೆ. ಬಹುತೇಕ ಭಕ್ತರು ಪಾದಯಾತ್ರೆ ಮೂಲಕ ಹೋಗುತ್ತಾರೆ.

ಕೋಲ್ಕೊತ್ತಾದ ಸಿಂಧೂರ್‌ ಖೇಲ್ ನೋಡುವುದೇ ಚಂದ:

ಕೋಲ್ಕೊತ್ತಾ (Kolkatta) ದುರ್ಗಾ ಪೂಜೆಗೆ (Durga Pooje) ಬಹಳ ಪ್ರಸಿದ್ಧ ಪಡೆದಿದ್ದು, ದುರ್ಗಾ ಪೂಜೆಯನ್ನು ಬಂಗಾಳಿಗರು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಗಲ್ಲಿ-ಗಲ್ಲಿಗಳಲ್ಲಿಯೂ ಒಂಬತ್ತು ದಿನಗಳ ಕಾಲ ದುರ್ಗಾ ಮಾತೆಯ ಮೂರ್ತಿ ಕೂರಿಸಿ ಪೂಜೆ ಮಾಡುತ್ತಾರೆ. ಕೊನೆಯ ದಿನ ಸಿಂಧೂರ್‌ ಖೇಲ್‌  (Sindhoor Khel)ಎನ್ನುವ ವಿಶಿಷ್ಟ ಆಚರಣೆ ಮಾಡುತ್ತಾರೆ. ಈ ವೇಳೆ ಮದುವೆಯಾದ ಹೆಂಗಸರು ಬಿಳಿ ಮತ್ತು ಕೆಂಪು ಸೀರೆ ಧರಿಸಿ ಒಬ್ಬರಿಗೊಬ್ಬರು ಸಿಂಧೂರವನ್ನು ಹಚ್ಚಿ ಸಂಭ್ರಮಿಸುತ್ತಾರೆ. ಈ ಆಚರಣೆಯ ನಂತರ ದುರ್ಗಾಮಾತೆಯ ಮೂರ್ತಿಯನ್ನು ನದಿಯಲ್ಲಿ ವಿಸರ್ಜಿಸುತ್ತಾರೆ. ಈ ಸಮಾರಂಭವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ. ಈ ವೇಳೆ ಕಲಾ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸುತ್ತಾರೆ. ಇದರಲ್ಲಿ ಸ್ಥಳೀಯ ತಿಂಡಿಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಸಿಗುತ್ತವೆ.

ಇದನ್ನೂ ಓದಿ: TRAVEL PLAN: ಪ್ರವಾಸಕ್ಕೆ ಹೋಗ್ತೀರಾ? ಈ ತಪ್ಪುಗಳನ್ನ ಮಾಡ್ಲೇಬೇಡಿ

ಮಂಗಳೂರು ದಸರಾ:

ದಸರಾ ಆಚರಣೆಗೆ ಇತ್ತೀಚಿನ ಕೆಲ ವರ್ಷಗಳಿಂದ ಕರ್ನಾಟಕದ ಮಂಗಳೂರು (Mangaluru) ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮಂಗಳೂರು ದಸರಾ ಉತ್ಸವದಲ್ಲಿ ಕರಾವಳಿಯ ಸೊಬಗು, ಸಂಪ್ರದಾಯ, ಆಚರಣೆಗಳು ಜನರ ಗಮನ ಸೆಳೆಯುತ್ತದೆ. ಹುಲಿಯ ಕು
ಣಿತ (Tiger Dance) ಆಕರ್ಷಣೆಯಾಗಿದೆ.ಮಂಗಳೂರು ದಸರಾ ವೇಳೆ ನವ ದುರ್ಗೆಯರ ವಿಗ್ರಹಗಳನ್ನು ಮೆರವಣಿಗೆ ಮಾಡಲಾಗುತ್ತದೆ. ನವದುರ್ಗೆಯರ ಜೊತೆ ಗಣೇಶ ಹಾಗೂ ಶಾರದೆಯರ ವಿಗ್ರಹಳು ಸಹ ಇರುತ್ತದೆ. ವರ್ಷದಿಂದ ವರ್ಷಕ್ಕೆ ಈ ನಗರದ ದಸರಾ ಹಬ್ಬ ಉತ್ಸವವು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಪ್ರಮಾಣದಲ್ಲಿ ಜನರನ್ನು ಆಕರ್ಷಿಸುತ್ತಿದೆ. ಮೈಸೂರು ದಸರಾ ಹಬ್ಬಕ್ಕೆ ಅತ್ಯಂತ ಶ್ರೀಮಂತವಾದ ಐತಿಹಾಸಿಕ ಹಿನ್ನಲೆಯಿದ್ದರೆ, ಮಂಗಳೂರು ದಸರೆಯು ತನ್ನದೆ ಆದ ಹತ್ತು ದಿನಗಳ ಕಾಲ ವಿಶಿಷ್ಟ ಆಚರಣೆಯಿಂದಾಗಿ ಜನರನ್ನು ಆಕರ್ಷಿಸುತ್ತದೆ.

ಇದನ್ನೂ ಓದಿ: ಮುಳ್ಳಯನಗಿರಿ ಸೌಂದರ್ಯ ಹೆಚ್ಚಿಸಿದ ನೀಲಿಕುರವಂಜಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಿಕ್ಕಮಗಳೂರು

ದಸರಾ ವೇಳೆ ಇವು ಭೇಟಿ ನೀಡಬಹುದಾದ ಸ್ಥಳಗಳಾಗಿವೆ. ನೀವು ಒಮ್ಮೆ ಇವುಗಳ ಸೊಬಗನ್ನು ನೋಡಬಹುದು.

Follow Us:
Download App:
  • android
  • ios