Asianet Suvarna News Asianet Suvarna News

Study: ಸತ್ತ ಮೇಲೆ ಸತ್ತಿದ್ದೇವೆಂದು ತಿಳಿವವರೆಗೆ ಪ್ರಜ್ಞೆ ಇರುತ್ತೆ!

ಸತ್ತ ಮೇಲೆ ಎಲ್ಲ ಮುಗೀತು, ಇಹದ ವ್ಯವಹಾರ ಅಲ್ಲಿಗೆ ಕೊನೆಯಾಯ್ತು ಎಂದೇ ನಂಬಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಪ್ರಜ್ಞೆಯನ್ನು ಅಷ್ಟೊಂದು ಹಗುರವೆಂದು ಭಾವಿಸಬೇಡಿ. ಪ್ರಜ್ಞೆಯು ಸಾವಿನ ನಂತರವೂ ಸತ್ತಿದ್ದೇವೆಂದು ಅರಿವು ಮೂಡುವವರೆಗೆ ಕೆಲಸ ಮಾಡುತ್ತಿರುತ್ತೆ ಎನ್ನುತ್ತೆ ಹೊಸ ಅಧ್ಯಯನ.

Study Reveals That After You Die You are Conscious Long Enough To Actually Know You are Dead skr
Author
First Published Jun 10, 2023, 4:01 PM IST

ಗರುಡ ಪುರಾಣದಲ್ಲಿ ಸಾವಿನ ನಂತರದ ಒಂದು ಗಂಟೆಯಲ್ಲಿ ಏನೆಲ್ಲ ಆಗುತ್ತದೆ ಎಂದು ಹೇಳಲಾಗಿದೆ. ಅದರಂತೆ ಆತ್ಮವು ಎಚ್ಚರವಿದ್ದು, ದೇಹ ಸಾವಿಗೀಡಾಗಿದೆ ಎಂದು ಅರಿಯಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ, ಸತ್ತ ದೇಹಕ್ಕಾಗಿ ಚಡಪಡಿಸುತ್ತದೆ ಎಂದು ಹೇಳಲಾಗಿದೆ. ಇತ್ತೀಚಿನ ವೈಜ್ಞಾನಿಕ ಅಧ್ಯಯನವೊಂದು ಇದೇ ಮಾತನ್ನು ಪುಷ್ಠೀಕರಿಸುತ್ತಿದೆ. ಅದರಂತೆ ವ್ಯಕ್ತಿ ಸತ್ತ ಬಳಿಕವೂ ಆತನ ಪ್ರಜ್ಞೆ ಜಾಗೃತವಾಗಿದ್ದು, ಸತ್ತಿದ್ದಿಯಾ ಎಂದು ಅರಿವು ಮೂಡುವವರೆಗೂ ಎಚ್ಚರವಾಗಿರುತ್ತದೆಯಂತೆ.

ಹೌದು, ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ನಾವು ಸತ್ತ ನಂತರ ನಾವು ಸತ್ತಿದ್ದೇವೆ ಎಂದು ತಿಳಿಯಬಹುದು ಎಂದು ಬಹಿರಂಗಪಡಿಸುತ್ತದೆ. ನಮ್ಮ ಹೃದಯವು ನಮ್ಮ ಮೆದುಳಿಗೆ ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸಿದ ನಂತರ ನಮ್ಮ ಪ್ರಜ್ಞೆ ಮತ್ತು ಅರಿವು ಮುಂದುವರಿಯುತ್ತದೆಯಂತೆ. ಅಂದರೆ, ಪ್ರಜ್ಞೆಗೆ ಬದುಕಿರುವಾಗಲೇ ಶವಪೆಟ್ಟಿಗೆಯಲ್ಲಿ ಸಿಕ್ಕಿಹಾಕಿಕೊಂಡಂತೆನಿಸಬಹುದು!

ಸಾವಿಗೀಡಾದಾಗ ನಮ್ಮ ಇತರ ಕಾರ್ಯಗಳು ನಿಲ್ಲುತ್ತವೆ ಮತ್ತು ನಮ್ಮ ಮಿದುಳು ಇನ್ನು ಮುಂದೆ ನಮ್ಮ ಕ್ರಿಯೆಗಳನ್ನು ಸ್ವಯಂಪ್ರೇರಣೆಯಿಂದ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಆದರೆ, ಪ್ರಜ್ಞೆ ಎನ್ನುವುದು ನಮ್ಮ ಅಸ್ತಿತ್ವವನ್ನು ಗ್ರಹಿಸುವ ನಮ್ಮ ಸಾಮರ್ಥ್ಯವಾಗಿದೆ. ನಮ್ಮ ದೇಹ ಸತ್ತ ಬಳಿಕವೂ ಮೆದುಳು ಕೆಲಸ ಮಾಡಿದರೆ ಮಾತ್ರ ನಮ್ಮ ಅಸ್ತಿತ್ವ, ಅಂದರೆ ಸಾವಿಗೀಡಾಗಿದ್ದೇವೆ ಎಂದು ಗ್ರಹಿಸಲು ಸಾಧ್ಯವಲ್ಲವೇ?

ಡಿಜಿಟಲ್‌ ಇಂಡಿಯಾ ಮಸೂದೆಯಲ್ಲಿ 11 ಅಂಶಗಳಿಗೆ ನಿಷೇಧ: 85 ಕೋಟಿ ಇಂಟರ್ನೆಟ್‌ ಬಳಕೆದಾರರನ್ನು ರಕ್ಷಿಸಲು ಪ್ಲ್ಯಾನ್‌

ಎಷ್ಟೋ ಮಂದಿ ಸಾವಾದರು ಎಂದು ಘೋಷಿಸುವ ಹೊತ್ತಿಗೆ ಬದುಕಿ ಬಂದವರಿದ್ದಾರೆ. ಹೀಗೆ ಸಾವಿನ ರುಚಿ ನೋಡಿ ಬಂದವರ ಅನುಭವಗಳು ವಿಜ್ಞಾನಿಗಳಿಗೆ ಪ್ರಶ್ನೆಯಾಗಿತ್ತು. ಅವರೆಲ್ಲರೂ ದೇಹ ತೇಲುವ ಅನುಭವ ಹೊಂದಿತ್ತು ಮತ್ತು ಕುಟುಂಬದೊಂದಿಗೆ ಪುನರ್ಮಿಲನದ ಅತೀಂದ್ರಿಯ ಸಂವೇದನೆಯನ್ನು ಅನುಭವಿಸಿದ್ದಾಗಿ ವಿವರಿಸಿದ್ದಾರೆ. ವಿಜ್ಞಾನವು ಈ ಸಾವಿನ ಸಮೀಪ ತಲುಪಿದ ವಿದ್ಯಮಾನವನ್ನು ದೈಹಿಕ ಅನುಭವವಾಗಿ ವಿವರಿಸಿದೆ. ಇದು ರಕ್ತ ಸರಬರಾಜು ಮತ್ತು ಆಮ್ಲಜನಕದ ಕೊರತೆ ಅನುಭವಿಸಿದ ಮೆದುಳಿನ ನರದ ರಾಸಾಯನಿಕಗಳಿಂದ ಉತ್ಪತ್ತಿಯಾಗುವ ಪ್ರತಿಕ್ರಿಯೆ ಎಂದಿದೆ. ಆದರೆ, ಈ ಬಗ್ಗೆ ಮತ್ತಷ್ಟು ಉತ್ತರವನ್ನು ಕೆದಕುವುದನ್ನು ಮುಂದುವರಿಸಿದೆ. 

ವಿಜ್ಞಾನಿ ಡಾ. ಸ್ಯಾಮ್ ಪರ್ನಿಯಾ ಹೇಳುವಂತೆ ನಮ್ಮ ದೇಹದಲ್ಲಿರುವ ಜೀವಕೋಶಗಳು ನಮ್ಮ ಮರಣದ ನಂತರ ಏಕಬಾರಿಗೆ ಸಾಯುವುದಿಲ್ಲ. ಬದಲಿಂಗೆ ಹಂತಹಂತವಾಗಿ ಸಾವಿನ ಕಡೆಗೆ ಚಲಿಸುತ್ತವೆ. ಇದು ನಿಧನದ ಬಳಿಕವೂ ಮೆದುಳು ಜಾಗೃತವಾಗಿರುವುದಕ್ಕೆ ಕೊಂಚ ಸಮಾಧಾನಕರ ಕಾರಣ ನೀಡುತ್ತದೆ. 

ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸೂಕ್ಷ್ಮ ಜೀವವಿಜ್ಞಾನ ಪ್ರಾಧ್ಯಾಪಕ ಪೀಟರ್ ನೋಬಲ್ ಅವರ ಪ್ರಕಾರ, ನಮ್ಮ ಕೋಶಗಳು ಕ್ರಮೇಣ ಸ್ಥಗಿತಗೊಳ್ಳುವುದು ಮಾತ್ರವಲ್ಲ, ಅವು ಗುಣಿಸುವ ಸಾಧ್ಯತೆಯಿದೆ. ಇಲಿಗಳು ಮತ್ತು ಜೀಬ್ರಾ ಫಿಶ್ ಎರಡರಲ್ಲೂ ಸಂಶೋಧನೆ ನಡೆಸುವಾಗ, ಸತ್ತ ನಂತರ ಜೀವಕೋಶಗಳು ವಾಸ್ತವವಾಗಿ ಸಂಖ್ಯೆಯಲ್ಲಿ ಬೆಳೆಯುತ್ತಿವೆ ಎಂದು ಅವರು ಕಂಡುಕೊಂಡಿದ್ದಾಗಿ ತಿಳಿಸಿದ್ದಾರೆ. 

ನ್ಯೂಯಾರ್ಕ್‌ನ ಸಂಶೋಧಕರು ಇತ್ತೀಚೆಗೆ ನಾವು ಸತ್ತ ನಂತರ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಲು ಹತ್ತಿರವಾಗಿದ್ದಾರೆ - ಹೃದಯವು ನಿಂತಾಗ, ಮೆದುಳು ಸ್ವಲ್ಪ ಮಟ್ಟಿಗೆ ಕಾರ್ಯ ನಿರ್ವಹಿಸುತ್ತದೆ ಎಂದು ಸಂಶೋಧಕರ ತಂಡವು ಕಂಡುಹಿಡಿದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮರಣೋತ್ತರ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಮೆದುಳಿನ ಭಾಗವು ಪ್ರಜ್ಞೆಗೆ ಕಾರಣವಾಗಿದೆ. ಈ ಅನ್ವೇಷಣೆಯು ಮಹತ್ವದ್ದಾಗಿದೆ. ನಾವು ನಮ್ಮ ಅಂತಿಮ ಕ್ಷಣಗಳನ್ನು ವಸ್ತುನಿಷ್ಠವಾಗಿ ಅನುಭವಿಸುತ್ತೇವೆ, ಆದರೂ ನಾವು ಸಂವಹನ ಮಾಡಲು ಅಥವಾ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ.

ಭಾರತದಿಂದ ChatGPTಗೆ ಪ್ರತಿಸ್ಪರ್ಧೆ ಸಾಧ್ಯವಿಲ್ಲ, AI ಸಂಸ್ಥಾಪಕನ ಸವಾಲು ಸ್ವೀಕರಿಸಿದ ಟೆಕ್ ಮಹೀಂದ್ರ!

ಸಾವಿನ ವೈದ್ಯಕೀಯ ವ್ಯಾಖ್ಯಾನ
ವೈದ್ಯಕೀಯವಾಗಿ, ಹೃದಯವು ರಕ್ತ ಪರಿಚಲನೆಯನ್ನು ನಿಲ್ಲಿಸಿದಾಗ ಸಾವು ಎನ್ನಲಾಗುತ್ತದೆ. ಹೃದಯವು ದೇಹದ ಉಳಿದ ಭಾಗಗಳಿಗೆ ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸಿದಾಗ, ಮೆದುಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ರಕ್ತ ಪರಿಚಲನೆಯ ಕೊರತೆಯು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ಉಸಿರಾಟವನ್ನು ನಿಲ್ಲಿಸುತ್ತದೆ. ಮೆದುಳಿಗೆ ಆಮ್ಲಜನಕದ ರಕ್ತದ ಹರಿವು ಇಲ್ಲದೆ, ಅಂಗವು ದೇಹದ ಉಳಿದ ಭಾಗಗಳೊಂದಿಗೆ ಸಾಯುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.

ಮೆದುಳು ಜೀವನದ ನಿಯಂತ್ರಣ ಕೇಂದ್ರವಾಗಿದ್ದರೆ, ಹೃದಯವು ಮೆದುಳಿಗೆ ಆಹಾರವನ್ನು ನೀಡುವ ಪ್ರಮುಖ ಅಂಶವಾಗಿದೆ. ಹೃದಯವು ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸಿದಾಗ ಮತ್ತು ಉಸಿರಾಟವು ನಿಂತಾಗ, ಕ್ಲಿನಿಕಲ್ ಆಗಿ ಸಾವು ಸಂಭವಿಸಿದೆ.
 

Follow Us:
Download App:
  • android
  • ios