Asianet Suvarna News Asianet Suvarna News

ಟಿಕೆಟ್ ಫೈಟ್: ಕಾಂಗ್ರೆಸ್‌ ಸಂಸದ ಜೆಡಿಎಸ್‌ ಅಭ್ಯರ್ಥಿ ಆಗ್ತಾರಾ?

ಒಕ್ಕಲಿಗರು, ವೀರಶೈವರು ಸಮಪ್ರಮಾಣದಲ್ಲಿರುವ ಹಾಗೂ ಅಹಿಂದ ವರ್ಗಗಳು ತುಸು ಹೆಚ್ಚಿನ ಸಂಖ್ಯೆಯಲ್ಲಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳ ಪ್ರಾಬಲ್ಯವಿದೆ. ಈ ಬಾರಿ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟು, ಕ್ಷೇತ್ರ ಜೆಡಿಎಸ್ ಪಾಲಾಗುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಹಾಲಿ ಸಂಸದ ಮುದ್ದಹನುಮೇಗೌಡ ಜೆಡಿಎಸ್‌ಗೆ ಸೇರಿ ಅಲ್ಲಿಂದ ಅಭ್ಯರ್ಥಿಯಾಗುತ್ತಾರೆ ಎನ್ನಲಾಗುತ್ತಿದೆ. ಈ ನಡುವೆ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ನಾಯಕರು ಕಾಂಗ್ರೆಸ್ ಹಾಗೂ ಬಿಜೆಪಿ ಎರಡರಲ್ಲೂ ಟಿಕೆಟ್‌ಗೆ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

Loksabha Elections 2019 Will Congress MP become JDS Candidate in Tumkur
Author
Tumkur, First Published Feb 13, 2019, 2:07 PM IST

ಮಹಾಭಾರತ ಸಂಗ್ರಾಮ: ತುಮಕೂರು ಕ್ಷೇತ್ರ

ತುಮ​ಕೂ​ರು[ಫೆ.13]: ಬೆಂಗ​ಳೂ​ರಿನ ಭವಿ​ಷ್ಯದ ಉಪ​ನ​ಗರಿ ಹಾಗೂ ರಾಜ್ಯ​ದಲ್ಲೇ ಅತಿ ಹೆಚ್ಚು ಜಿಲ್ಲಾ ಪಂಚಾಯಿತಿ ಕ್ಷೇತ್ರ​ಗ​ಳನ್ನು ಒಳ​ಗೊಂಡಿ​ರುವ, ಎರ​ಡನೇ ಅತಿ ದೊಡ್ಡ ಜಿಲ್ಲೆ​ಯಾ​ಗಿ​ರುವ ತುಮ​ಕೂರು ಲೋಕ​ಸಭಾ ಕ್ಷೇತ್ರ ಮೂಲತಃ ಕಾಂಗ್ರೆ​ಸ್‌ನ ಭದ್ರ​ಕೋ​ಟೆ​ಯಾಗಿತ್ತು. ಆದರೆ ನಿಧಾ​ನಕ್ಕೆ ಈ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಆರಂ​ಭ​ಗೊಂಡಿದೆ. ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾ​ಹಣಿ ನಡೆ​ಯುವುದು ನಿಚ್ಚಳವಾಗಿದೆ.

ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ

ಕಳೆದ ಚುನಾ​ವ​ಣೆ​ಯ​ಲ್ಲಿ ಕಾಂಗ್ರೆ​ಸ್‌ನ ಹಾಲಿ ಸಂಸದ ಮುದ್ದ​ಹ​ನು​ಮೇ​ಗೌಡ ಅವರು ಬಿಜೆ​ಪಿ​ಯಿಂದ ಸ್ಪರ್ಧಿ​ಸಿದ್ದ ಜಿ.ಎಸ್‌. ಬಸ​ವ​ರಾಜು ವಿರುದ್ಧ ಅಧಿಕ ಮತ​ಗಳ ಅಂತ​ರ​ದಿಂದ ಜಯ​ ಸಾ​ಧಿ​ಸಿ​ದ್ದರು. ಜೆಡಿ​ಎ​ಸ್‌​ನಿಂದ ಸ್ಪರ್ಧಿ​ಸಿದ್ದ ಎ. ಕೃಷ್ಣಪ್ಪ ಹೀನಾ​ಯ​ವಾಗಿ ಪರಾ​ಭ​ವ​ಗೊಂಡಿ​ದ್ದರು. ಈ ಬಾರಿ ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ಅಭ್ಯ​ರ್ಥಿ​ಯಾಗಿ ಮುದ್ದ​ಹ​ನು​ಮೇ​ಗೌಡ ಸ್ಪರ್ಧಿ​ಸು​ವುದು ಬಹು​ತೇಕ ಖಚಿ​ತ. ಜೆಡಿ​ಎಸ್‌ ಪಕ್ಷ ಈ ಸಲ ತನಗೆ ತುಮ​ಕೂರು ಲೋಕ​ಸಭಾ ಕ್ಷೇತ್ರ​ವನ್ನು ಬಿಟ್ಟು​ಕೊ​ಡು​ವಂತೆ ಪಟ್ಟು ಹಿಡಿ​ದಿದೆ. ಆದರೆ ಉಪ​ ಮು​ಖ್ಯ​ಮಂತ್ರಿ ಪ್ರತಿ​ನಿ​ಧಿ​ಸುವ ವಿಧಾನಸಭಾ ಕ್ಷೇತ್ರ ಇದೇ ಜಿಲ್ಲೆಯಲ್ಲಿರುವುದರಿಂದ ಹಾಗೂ ಪರ​ಮೇ​ಶ್ವರ್‌ ಅವ​ರಿಗೆ ಮುದ್ದ​ ಹ​ನು​ಮೇ​ಗೌಡ ಅತ್ಯಂತ ಆತ್ಮೀ​ಯ​ರಾ​ಗಿ​ರುವುದ​ರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್‌ ಕೇಳುತ್ತಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾ​ರ​ವಾ​ಗಿಲ್ಲ.

ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಒಂದು ವೇಳೆ ಈ ಕ್ಷೇತ್ರ​ವೇ​ನಾ​ದರೂ ಜೆಡಿ​ಎಸ್‌ ಪಾಲಾ​ದರೆ ಕಾಂಗ್ರೆಸ್ಸಿನ ಮುದ್ದ​ಹ​ನು​ಮೇ​ಗೌಡ ಅವರು ಜೆಡಿ​ಎ​ಸ್‌ಗೆ ಪಕ್ಷಾಂತರ ಮಾಡಿ, ಆ ಪಕ್ಷ​ದಿಂದ ಸ್ಪರ್ಧಿ​ಸುವ ಸಾಧ್ಯ​ತೆಯೂ ಇದೆ ಎನ್ನ​ಲಾ​ಗು​ತ್ತಿದೆ. ಹೀಗಾಗಿ ಏನೇ ಆದರೂ ಹಾಲಿ ಸಂಸದ ಮುದ್ದ​ ಹ​ನು​ಮೇ​ಗೌಡ ಕಾಂಗ್ರೆಸ್‌- ಜೆಡಿ​ಎಸ್‌ ಅಭ್ಯ​ರ್ಥಿ​ಯಾ​ಗು​ವುದು ಖಚಿತ. ಇನ್ನು ಬಿಜೆ​ಪಿ​ಯಲ್ಲಿ ಕಳೆದ ಬಾರಿ ಪರಾ​ಜಿತ ಅಭ್ಯರ್ಥಿ ಜಿ.ಎಸ್‌. ಬಸ​ವ​ರಾಜು ಮತ್ತೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ​ಯಾ​ಗಿ​ದ್ದಾರೆ. ಆದರೆ ಮಾಜಿ ಶಾಸಕ ಸುರೇ​ಶ​ಗೌಡ, ವಿಧಾನ ಪರಿ​ಷತ್‌ ಮಾಜಿ ಸದಸ್ಯ ಎಂ.ಆರ್‌. ಹುಲಿ​ನಾ​ಯ್ಕರ್‌, ಮಾಜಿ ಸಚಿವ ಸೊಗಡು ಶಿವಣ್ಣ ಟಿಕೆ​ಟ್‌ಗಾಗಿ ಪೈಪೋಟಿ ನಡೆ​ಸಿ​ದ್ದಾರೆ.

ಬಿಜೆಪಿ ಬಲ ಹೆಚ್ಚು:

ತುಮಕೂರು ಜಿಲ್ಲೆಯ 11 ವಿಧಾ​ನ​ಸಭಾ ಕ್ಷೇತ್ರ​ಗಳ ಪೈಕಿ ಬಿಜೆಪಿ ಮತ್ತು ಜೆಡಿ​ಎಸ್‌ನಲ್ಲಿ ತಲಾ 4 ಶಾಸ​ಕರು ಹಾಗೂ ಕಾಂಗ್ರೆಸ್‌ನಲ್ಲಿ 3 ಶಾಸ​ಕರು ಇದ್ದಾರೆ. ಆದರೆ 11 ವಿಧಾ​ನ​ಸಭಾ ಕ್ಷೇತ್ರ​ಗಳ ಶಿರಾ ಮತ್ತು ಪಾವ​ಗಡ ಚಿತ್ರ​ದುರ್ಗ ಲೋಕ​ಸಭೆ ಕ್ಷೇತ್ರಕ್ಕೆ ಹಾಗೂ ಕುಣಿ​ಗಲ್‌ ಬೆಂಗ​ಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿವೆ. ಹೀಗಾಗಿ ತುಮ​ಕೂರು ಲೋಕ​ಸಭಾ ಕ್ಷೇತ್ರ ವ್ಯಾಪ್ತಿ​ಗೆ ಬರು​ವುದು 8 ವಿಧಾ​ನ​ಸಭಾ ಕ್ಷೇತ್ರ. ಈ ಪೈಕಿ ಬಿಜೆಪಿ 4ರಲ್ಲಿ ಪ್ರಾಬಲ್ಯ ಸಾಧಿ​ಸಿದೆ. ಇನ್ನು ಜೆಡಿ​ಎಸ್‌ 3 ಕ್ಷೇತ್ರ​ಗ​ಳಲ್ಲಿ ಹಾಗೂ ಕಾಂಗ್ರೆಸ್‌ 1 ಕ್ಷೇತ್ರ​ದಲ್ಲಿ ಶಾಸ​ಕ​ರನ್ನು ಹೊಂದಿದೆ. ಹೀಗಾಗಿ ಲೋಕ​ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಬಲ ಕೊಂಚ ಅಧಿಕವಾಗಿದೆ.

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಗುಬ್ಬಿ​ಯಿಂದ ಜೆಡಿ​ಎಸ್‌ ಶಾಸ​ಕ​ರಾಗಿ ಆಯ್ಕೆ​ಯಾ​ಗಿರುವ ಎಸ್‌.​ಆರ್‌. ಶ್ರೀನಿ​ವಾಸ್‌ ಹಾಗೂ ಪಾವ​ಗ​ಡ​ದ ಕಾಂಗ್ರೆಸ್‌ ಶಾಸ​ಕ​ರಾ​ಗಿ​ರು​ವ ವೆಂಕ​ಟ​ರ​ಮ​ಣಪ್ಪ ಸಚಿ​ವ​ರಾ​ಗಿ​ದ್ದಾರೆ. ಕೊರ​ಟ​ಗೆ​ರೆ​ಯಿಂದ ಗೆದ್ದಿ​ರುವ ಡಾ. ಜಿ. ಪರ​ಮೇ​ಶ್ವರ್‌ ಉಪ​ಮು​ಖ್ಯ​ಮಂತ್ರಿ​ ಆ​ಗಿ​ರು​ವು​ದ​ರಿಂದ ಜಿಲ್ಲೆಯ ಮಟ್ಟಿಗೆ 3 ಮಂದಿ ಸಚಿವರು ಇದ್ದಾರೆ.

ಆಕಾಂಕ್ಷಿ​ಗಳು ಹೆಚ್ಚು​ತ್ತಿ​ದ್ದಾರೆ:

ಹಾಲಿ ಸಂಸ​ದ​ರಿಗೆ ಟಿಕೆಟ್‌ ನೀಡು​ವುದು ಖಚಿತ ಎಂದು ಕಾಂಗ್ರೆಸ್‌ ಮುಖಂಡರು ಹೇಳು​ತ್ತಿ​ರುವ ಬೆನ್ನಲ್ಲೇ ಮಾಜಿ ಸಚಿವ ಟಿ.ಬಿ. ಜಯ​ಚಂದ್ರ ಹಾಗೂ ಮಾಜಿ ಶಾಸಕ, ಹಾಲಿ ಅಪೆಕ್ಸ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ತಾವು ಕೂಡ ಕಾಂಗ್ರೆ​ಸ್‌ನ ಟಿಕೆಟ್‌ ಆಕಾಂಕ್ಷಿ​ಗಳು ಎಂದು ಬಹಿ​ರಂಗ​ವಾಗಿ ಹೇಳು​ತ್ತಿ​ದ್ದಾರೆ. ಇನ್ನು ಬಿಜೆ​ಪಿ​ಯಲ್ಲೂ ಆಕಾಂಕ್ಷಿ​ಗಳ ಪಟ್ಟಿದೊಡ್ಡ​ದಿದೆ. ಹೀಗಾಗಿ ಬಿಜೆ​ಪಿ​ಯ​ಲ್ಲಿ ವರಿ​ಷ್ಠರು ಯಾರಿಗೆ ಟಿಕೆಟ್‌ ಅನ್ನು ಅಂತಿ​ಮ​ಗೊ​ಳಿ​ಸು​ತ್ತಾರೆ ಎಂಬ​ ಕು​ತೂ​ಹಲ ಹೆಚ್ಚಿದೆ.

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

ಮುದ್ದ​ಹ​ನು​ಮೇ​ಗೌ​ಡ​ರಿಗೆ ಸುಲ​ಭದ ತುತ್ತೆ?:

ಕ್ಷೇತ್ರದಲ್ಲಿ ಒಕ್ಕ​ಲಿ​ಗರು ಹಾಗೂ ವೀರ​ಶೈವ ಲಿಂಗಾ​ಯ​ತರು ಸಮ​ ಪ್ರ​ಮಾ​ಣ​ದ​ಲ್ಲಿ​ದ್ದರೆ, ಅಹಿಂದ ವರ್ಗ​ಗಳ ಮತ​ಗಳು ತುಸು ಹೆಚ್ಚಿ​ವೆ. ಕಳೆದ ಬಾರಿ ಜೆಡಿ​ಎ​ಸ್‌​ನಿಂದ ಸ್ಪರ್ಧಿ​ಸಿದ್ದ ಅಂದಿನ ಜೆಡಿ​ಎಸ್‌ ರಾಜ್ಯಾ​ಧ್ಯಕ್ಷ ಎ. ಕೃಷ್ಣಪ್ಪ ವಿರುದ್ಧ ಪಕ್ಷದ ಮುಖಂಡರು ಹಾಗೂ ಕಾರ್ಯ​ಕ​ರ್ತರು ಅಸ​ಮಾ​ಧಾ​ನ​ಗೊಂಡಿ​ದ್ದರು. ಹೊರ​ಗ​ಡೆ​ಯಿಂದ ಅಭ್ಯ​ರ್ಥಿ​ಯನ್ನು ಕರೆದು ತರು​ವುದು ಎಷ್ಟುಸರಿ ಎಂದು ಬಹಿ​ರಂಗ​ವಾಗಿ ಪ್ರಶ್ನಿ​ಸಿ​ದ್ದರು. ಅಲ್ಲದೇ ಕಳೆದ 35 ವರ್ಷ​ಗ​ಳಿಂದ ಒಕ್ಕ​ಲಿ​ಗರು ಈ ಕ್ಷೇತ್ರ​ದಲ್ಲಿ ಜಯ​ಸಾ​ಧಿ​ಸಿಲ್ಲ ಎಂಬ ಕೂಗು ಎದ್ದಿತ್ತು. ಈ ಮಧ್ಯೆ ಜೆಡಿ​ಎಸ್‌ ಹೊರ​ಗ​ಡೆ​ಯಿಂದ ಅಭ್ಯ​ರ್ಥಿ ತಂದು ಹೂಡಿದ ಕಾರ​ಣ​ದಿಂದ ಸಿಟ್ಟಾದ ಜೆಡಿ​ಎ​ಸ್‌ನ ಕಾರ್ಯ​ಕ​ರ್ತರು ಬಹಿ​ರಂಗ​ವಾಗಿ ಒಕ್ಕ​ಲಿಗ ಸಮು​ದಾ​ಯದ ಮುದ್ದ​ಹ​ನು​ಮೇ​ಗೌ​ಡ​ರನ್ನು ಬೆಂಬ​ಲಿ​ಸಿ​ದ್ದರು. ಹೀಗಾಗಿ ಅವರ ಜಯ ಸುಲ​ಭ​ವಾ​ಯಿತು. ಇನ್ನು ಸಂಸ​ತ್‌​ನಲ್ಲಿ ಜಿಲ್ಲೆಯ ಪರ​ವಾಗಿ ಪ್ರಶ್ನೆ​ಗ​ಳನ್ನು ಕೇಳಿ ಮುದ್ದ​ ಹ​ನು​ಮೇ​ಗೌ​ಡರು ಗಮ​ನ​ ಸೆ​ಳೆ​ದಿದ್ದೂ ಉಂಟು. ಆದರೆ ಕಟ್ಟ​ಕ​ಡೆಯ ಕಾರ್ಯ​ಕ​ರ್ತ​ನನ್ನು ಮುದ್ದ​ಹ​ನು​ಮೇ​ಗೌ​ಡರು ವಿಶ್ವಾ​ಸಕ್ಕೆ ತೆಗೆ​ದು​ಕೊ​ಳ್ಳ​ಲಿಲ್ಲ ಎಂಬ ಆರೋ​ಪವಿದೆ.

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

2013ರಲ್ಲಿ ನಡೆದ ವಿಧಾ​ನಸಭಾ ಚುನಾ​ವ​ಣೆ​ಯಲ್ಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಒಂದು ಸ್ಥಾನ ಮಾತ್ರ. ಆದರೆ ಈ ಬಾರಿ ತುಮ​ಕೂರು ಲೋಕ​ಸಭಾ ಕ್ಷೇತ್ರದ 8 ವಿಧಾ​ನ​ಸಭಾ ಕ್ಷೇತ್ರ​ಗಳ ಪೈಕಿ ಬಿಜೆಪಿ ನಾಲ್ಕ​ರಲ್ಲಿ ಗೆಲುವು ಸಾಧಿ​ಸಿ​ರು​ವು​ದ​ರಿಂದ ಸಹ​ಜ​ವಾಗಿ ಹುಮ್ಮ​ಸ್ಸಿ​ನ​ಲ್ಲಿದೆ. ಇದು ಬಿಜೆ​ಪಿಗೆ ಅನು​ಕೂ​ಲ​ವಾ​ಗ​ಬ​ಹುದು.

ಕಳೆದ ಮೂರು ವಿಧಾ​ನ​ಸಭಾ ಚುನಾ​ವ​ಣೆ​ಗಳಲ್ಲೂ ಜೆಡಿ​ಎಸ್‌ ಪಾರು​ಪತ್ಯ ಮೆರೆ​ದಿದೆ. ಆದರೆ ಲೋಕ​ಸ​ಭೆ​ಯಲ್ಲಿ ಒಮ್ಮೆ ಮಾತ್ರ ಹಿಂದಿನ ಜನತಾದಳ ಅಭ್ಯರ್ಥಿ ಗೆದ್ದಿ​ದ್ದರು. ಈ ಬಾರಿ ಮತ್ತೆ ಕ್ಷೇತ್ರ​ವನ್ನು ಕಾಂಗ್ರೆ​ಸ್‌ಗೆ ಬಿಟ್ಟು​ಕೊ​ಟ್ಟರೆ ಪಕ್ಷಕ್ಕೆ ನಷ್ಟಎಂಬ ಅಭಿ​ಪ್ರಾ​ಯ​ಗಳು ಜೆಡಿ​ಎ​ಸ್‌​ನ​ಲ್ಲಿ ಕೇಳಿ ಬರು​ತ್ತಿವೆ. ಅಲ್ಲದೇ ಜೆಡಿ​ಎ​ಸ್‌​ನ​ಲ್ಲೂ ಆಕಾಂಕ್ಷಿ​ಗಳು ಹೆಚ್ಚಿ​ದ್ದಾರೆ. ಹೀಗಾಗಿ ಮೂರು ಪಕ್ಷ​ಗ​ಳಲ್ಲೂ ಕೂಡ ಸಣ್ಣ ಭಿನ್ನಾ​ಭಿ​ಪ್ರಾಯ ಇದ್ದು ಇದರ ಲಾಭ ಯಾರಿಗೆ ಆಗು​ತ್ತದೆ ಎಂಬು​ದನ್ನು ಕಾದು ನೋಡ​ಬೇ​ಕಾ​ಗಿದೆ.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

8 ವಿಧಾನಸಭೆ ಕ್ಷೇತ್ರಗಳಲ್ಲಿ ನಾಲ್ವರು ಬಿಜೆಪಿ ಶಾಸಕರು

ತುಮಕೂರು ಜಿಲ್ಲೆಯಲ್ಲಿ 11 ವಿಧಾ​ನ​ಸಭಾ ಕ್ಷೇತ್ರ​ಗಳು ಇವೆ. ಆ ಪೈಕಿ ಶಿರಾ, ಪಾವಗಡ ಕ್ಷೇತ್ರಗಳು ಚಿತ್ರದುರ್ಗ ಹಾಗೂ ಕುಣಿಗಲ್‌ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸೇರಿರುವುದರಿಂದ ತುಮಕೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 8 ಕ್ಷೇತ್ರಗಳು ಇವೆ. ಆ ಪೈಕಿ 4 ಕ್ಷೇತ್ರಗಳಲ್ಲಿ (ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಹಾಗೂ ತುಮಕೂರು ನಗರ) ಬಿಜೆಪಿ, 3ರಲ್ಲಿ (ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ಮಧುಗಿರಿ) ಜೆಡಿಎಸ್‌ ಹಾಗೂ ಕೊರಟಗೆರೆಯಲ್ಲಿ ಕಾಂಗ್ರೆಸ್‌ ಶಾಸಕರು ಇದ್ದಾರೆ.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಇಲ್ಲಿನ ಸಂಸದ ಲೋಕಸಭೆ ಉಪ ಸ್ಪೀಕರ್‌ ಆಗಿದ್ದರು

1991ರಲ್ಲಿ ನಡೆದ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ತುಮ​ಕೂರು ಕ್ಷೇತ್ರ​ದಿಂದ ಬಿಜೆಪಿ ಅಭ್ಯ​ರ್ಥಿ​ಯಾಗಿ ಗೆಲುವು ಸಾಧಿ​ಸಿದ್ದ ಎಸ್‌. ಮಲ್ಲಿ​ಕಾ​ರ್ಜು​ನಯ್ಯ ಅವ​ರನ್ನು ಲೋಕಸಭೆಯ ಡೆಪ್ಯೂಟಿ ಸ್ಪೀಕರ್‌ ಆಗಿ ಆಯ್ಕೆ ಮಾಡ​ಲಾ​ಗಿತ್ತು. ಹೀಗಾಗಿ ಲೋಕ​ಸ​ಭೆ​ಯಲ್ಲಿ ತುಮ​ಕೂ​ರಿಗೆ ದೊಡ್ಡ ಗೌರವ ಸಿಕ್ಕಂತಾ​ಗಿತ್ತು.

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಯಾರ್ಯಾರು ಪೈಪೋಟಿ?

ಕಾಂಗ್ರೆಸ್‌: ಮುದ್ದಹನುಮೇಗೌಡ, ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ

ಬಿಜೆಪಿ: ಜಿ.ಎಸ್‌.ಬಸವರಾಜು, ಸುರೇಶ್‌ಗೌಡ, ಎಂ.ಆರ್‌.ಹುಲಿನಾಯ್ಕರ್‌, ಸೊಗಡು ಶಿವಣ್ಣ

ಜೆಡಿ​ಎ​ಸ್‌- ಸುರೇ​ಶ್‌​ಗೌಡ

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?

Follow Us:
Download App:
  • android
  • ios