Asianet Suvarna News Asianet Suvarna News

ಸಂಸದ ಡಿ.ಕೆ.​ಸು​ರೇಶ್‌ಗೆ ನೋವು, ಬೇಸರ, ಆತಂಕ ಕಾಡುತ್ತಿದೆಯಾ!

ಲೋಕ​ಸಭಾ ಚುನಾ​ವಣೆ ಸನಿ​ಹ​ದ​ಲ್ಲಿರು​ವಾ​ಗಲೆ ಕಾಂಗ್ರೆಸ್‌ ಸಂಸದ ಡಿ.ಕೆ.​ಸುರೇಶ್‌ ಪದೇಪದೆ ರಾಜ​ಕೀಯ ವೈರಾ​ಗ್ಯದ ಮಾತು​ಗ​ಳ​ನ್ನಾ​ಡು​ತ್ತಿ​ರು​ವುದು ಜೆಡಿ​ಎಸ್‌ ಮತ್ತು ಬಿಜೆಪಿ ಮಾತ್ರ​ವ​ಲ್ಲ ಸ್ವ ಪಕ್ಷದಲ್ಲಿಯೇ ಚರ್ಚೆಗೆ ಎಡೆ ಮಾಡಿ​ಕೊಟ್ಟಿದೆ. 

Is MP DK Suresh feeling pain boredom and anxiety gvd
Author
First Published Jun 19, 2023, 8:24 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಜೂ.19): ಲೋಕ​ಸಭಾ ಚುನಾ​ವಣೆ ಸನಿ​ಹ​ದ​ಲ್ಲಿರು​ವಾ​ಗಲೆ ಕಾಂಗ್ರೆಸ್‌ ಸಂಸದ ಡಿ.ಕೆ.​ಸುರೇಶ್‌ ಪದೇಪದೆ ರಾಜ​ಕೀಯ ವೈರಾ​ಗ್ಯದ ಮಾತು​ಗ​ಳ​ನ್ನಾ​ಡು​ತ್ತಿ​ರು​ವುದು ಜೆಡಿ​ಎಸ್‌ ಮತ್ತು ಬಿಜೆಪಿ ಮಾತ್ರ​ವ​ಲ್ಲ ಸ್ವ ಪಕ್ಷದಲ್ಲಿಯೇ ಚರ್ಚೆಗೆ ಎಡೆ ಮಾಡಿ​ಕೊಟ್ಟಿದೆ. ಬೆಂಗ​ಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.​ಸು​ರೇಶ್‌ ಹ್ಯಾಟ್ರಿಕ್‌ ಗೆಲುವು ಸಾಧಿ​ಸಿದವರು. 

ನಾಲ್ಕನೇ ಬಾರಿ ಸ್ಪರ್ಧಿಸಲು ಸಿದ್ಧತೆ ಮಾಡಿ​ಕೊ​ಳ್ಳು​ವು​ದನ್ನು ಬಿಟ್ಟು ‘ನನಗೆ ರಾಜ​ಕಾ​ರಣ ಸಾಕಾ​ಗಿದೆ, ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ. ಬೇರೆ​ಯ​ವ​ರಿಗೆ ಅವ​ಕಾಶ ಮಾಡಿ​ಕೊ​ಡುವ ಉದ್ದೇ​ಶ’ ಎಂದು ಸ್ಪರ್ಧೆ ಕುರಿತು ಅಡ್ಡ​ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡು​ತ್ತಿ​ರು​ವುದು ಸಾಕಷ್ಟು ಕುತೂ​ಹಲ ಮೂಡಿ​ಸಿ​ದೆ. ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿ​ಸಿರುವ ಸುರೇಶ್‌ ಅವ​ರಿಗೆ ಮತ್ತೊಮ್ಮೆ ಚುನಾ​ವ​ಣೆ​ಯಲ್ಲಿ ಸ್ಪರ್ಧೆ ಮಾಡದಂತೆ ರಾಜ​ಕೀಯ ವೈರಾ​ಗ್ಯ ಮೂಡಲು ಕಾರ​ಣ​ವಾಗಿ​ರುವ ಆ ನೋವು, ಬೇಸರ, ದುಗುಡ, ಆತಂಕವಾದರು ಏನೆಂಬ ಚರ್ಚೆ​ಗಳು ರಾಜ​ಕೀಯ ವಲ​ಯ​ದಲ್ಲಿ ನಡೆ​ಯು​ತ್ತಿ​ದೆ.

ಯೋಜ​ನೆ​ಗಳ ಫಲಿ​ತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿ​ಕಾ​ರಿ​ಗ​ಳಿಗೆ ಸಂಸದ ಡಿ.ಕೆ.ಸು​ರೇಶ್‌ ಸೂಚನೆ

ಸಹೋ​ದರ ಸಿಎಂ ಆಗ​ದಿ​ರುವ ನೋವು: ಸಹೋ​ದ​ರ ಡಿ.ಕೆ.​ಶಿ​ವ​ಕು​ಮಾರ್‌ ಪ್ರತಿ ಹೆಜ್ಜೆ​ಗೂ ನೆರ​ಳಾಗಿ, ಅವರ ಕಷ್ಟಸುಖ​ಗ​ಳಲ್ಲಿ ಬೆನ್ನಾಗಿ ಡಿ.ಕೆ.​ಸು​ರೇಶ್‌ ನಿಲ್ಲು​ವ​ವರು. ಇದು ಡಿ.ಕೆ.​ಶಿ​ವ​ಕು​ಮಾರ್‌ ಸಂಕ​ಷ್ಟಕ್ಕೆ ಸಿಲು​ಕಿ​ದಾ​ಗ​ಲೆಲ್ಲ ಸಾಬೀತು ಕೂಡ ಆಗಿದೆ. ಕಾಂಗ್ರೆಸ್‌ ನಲ್ಲಿ ಕೆಪಿ​ಸಿಸಿ ಅಧ್ಯ​ಕ್ಷ​ರಾ​ದ​ವರು ಪಕ್ಷ ಅಧಿ​ಕಾ​ರಕ್ಕೆ ಬಂದಾಗ ಮುಖ್ಯ​ಮಂತ್ರಿ ಆಗು​ವುದು ಸಂಪ್ರ​ದಾಯ. ಈ ಹಿನ್ನೆ​ಲೆ​ಯಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಮುಖ್ಯ​ಮಂತ್ರಿ ಮಾಡುವ ಕನಸು ಕಟ್ಟಿ​ಕೊಂಡು ಡಿ.ಕೆ.​ಸು​ರೇಶ್‌ ಹಗ​ಲಿ​ರುಳು ಶ್ರಮಿ​ಸಿ​ದ​ರು.

ಆದರೆ, ಕಾಂಗ್ರೆಸ್‌ ವರಿಷ್ಠರು ಸಿದ್ದ​ರಾ​ಮಯ್ಯ ಅವ​ರಿಗೆ ಮುಖ್ಯ​ಮಂತ್ರಿ, ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಉಪ ಮುಖ್ಯ​ಮಂತ್ರಿ ಹುದ್ದೆ​ಯಲ್ಲಿ ಕೂರಿ​ಸಿ​ದರು. ಇದ​ರಿಂದ ಆಘಾ​ತ​ಕ್ಕೊ​ಳ​ಗಾದ ಡಿ.ಕೆ.​ಸು​ರೇಶ್‌ ಹೈಕ​ಮಾಂಡ್‌ ಸಂಧಾನ ಸೂತ್ರ ತಮಗೆ ಸಮಾ​ಧಾನ ತಂದಿಲ್ಲ ಎಂದು ಕಾಂಗ್ರೆಸ್‌ ವರಿ​ಷ್ಠರ ತೀರ್ಮಾನದ ವಿರುದ್ಧ ಬಹಿ​ರಂಗ​ವಾ​ಗಿಯೇ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದರು. ಡಿಕೆಶಿ ಮುಖ್ಯಮಂತ್ರಿ ಆಗ​ಲಿಲ್ಲ ಎಂಬ ನೋವು ಸುರೇಶ್‌ ಅವ​ರಿಗೆ ಹೆಚ್ಚು ಬಾಧಿಸಿ​ದಂತೆ ಕಾಣು​ತ್ತಿ​ದೆ. ಇದರಿಂದಾಗಿ ಚುನಾ​ವಣೆ ಸ್ಪರ್ಧೆಗೆ ಹಿಂದೇಟು ಹಾಕುತ್ತಿ​ದ್ದಾ​ರೆಯೇ ಎಂಬ ಚರ್ಚೆಗಳು ನಡೆ​ದಿ​​ವೆ.

ಒತ್ತಡ ಹೇರ​ಲೆಂಬ ಆಶ​ಯವೆ: ಬೆಂಗ​ಳೂರು ಲೋಕ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧೆ ಮಾಡಲು ಆಕಾಂಕ್ಷಿ​ಗಳು ಯಾರೂ ಇಲ್ಲ. ಜೊತೆಗೆ ಡಿ.ಕೆ.​ಸು​ರೇಶ್‌ ಅವ​ರನ್ನು ಹೊರತು ಪಡಿಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಬರುವ ಸಮರ್ಥ ಅಭ್ಯರ್ಥಿ ಮತ್ತೊ​ಬ್ಬರು ಸಿಗು​ವುದು ಕಷ್ಟಸಾಧ್ಯ. ಇದು ಕಾಂಗ್ರೆಸ್‌ ಪಕ್ಷ​ದ​ ಪ್ರತಿ​ಯೊಬ್ಬ ಮುಖಂಡ ಹಾಗೂ ಕಾರ್ಯ​ಕ​ರ್ತ​ನಿಗೂ ತಿಳಿ​ದಿದೆ. ಸಂಸತ್‌ ಚುನಾ​ವ​ಣೆ​ಯಲ್ಲಿ ತಾವಾಗಿ ತಾವು ಸ್ಪರ್ಧೆ ಮಾಡು​ವು​ದ​ಕ್ಕಿಂತ ಪಕ್ಷದ ಮುಖಂಡರು - ಕಾರ್ಯ​ಕ​ರ್ತ​ರು ಮಾತ್ರ​ವಲ್ಲ ಪಕ್ಷದ ವರಿ​ಷ್ಠರೂ ತಮ್ಮ ಸ್ಪರ್ಧೆಗೆ ಒತ್ತಡ ಹೇರ​ಬೇಕು. ಇದ​ರಿಂದ ಕುಟುಂಬ ರಾಜ​ಕಾ​ರ​ಣದ ಅಪ​ಮಾ​ನವೂ ದೂರ​ವಾ​ಗು​ತ್ತದೆ. ಕಾರ್ಯ​ಕ​ರ್ತರು ರಣೋ​ತ್ಸಾ​ಹ​ದಿಂದ ಕೆಲಸ ಮಾಡು​ತ್ತಾರೆ ಎಂಬ ಲೆಕ್ಕಾ​ಚಾರವೂ ಅಡ​ಗಿ​ರ​ಬ​ಹುದು ಎನ್ನ​ಲಾ​ಗಿ​ದೆ.

ಆಂಬಿ​ಷನ್‌ ಫುಲ್‌ಫಿಲ್‌ ಮಾಡ​ಲಾ​ಗದ ಸ್ಥಿತಿ: ವಿಧಾ​ನ​ಸಭಾ ಚುನಾ​ವ​ಣೆಯನ್ನು ಡಿ.ಕೆ.​ಸು​ರೇಶ್‌ ಕಾಂಗ್ರೆಸ್‌ ಪಕ್ಷ​ದೊ​ಳ​ಗಿದ್ದ ಹತ್ತಾರು ಬಣ​ಗ​ಳನ್ನು ಒಗ್ಗೂ​ಡಿಸಿಕೊಂಡು ಎದು​ರಿ​ಸಿ​ದರು. ಪ್ರತಿ​ಯೊಬ್ಬ ಮುಖಂಡರು - ಕಾರ್ಯ​ಕ​ರ್ತರು ತಮ್ಮ ಜವಾ​ಬ್ದಾ​ರಿ​ಯನ್ನು ಅಚ್ಚು​ಕ​ಟ್ಟಾಗಿ ನಿಭಾ​ಯಿ​ಸಿದ ಪರಿ​ಣಾಮ ಹೆಚ್ಚಿನ ಸಂಖ್ಯೆ​ಯಲ್ಲಿ ಶಾಸ​ಕ​ರು ಗೆದ್ದು ಕಾಂಗ್ರೆಸ್‌ ಸರ್ಕಾರ ಬರಲು ಕಾರ​ಣ​ವಾ​ಯಿತು. ಆದ​ರೀಗ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಗೆಲು​ವಿ​ಗಾಗಿ ದುಡಿದ ಮುಖಂಡರು ನಿಗಮ ಮಂಡ​ಳಿ​ಗ​ಳಲ್ಲಿ ಸ್ಥಾನ​ಮಾನ, ಸರ್ಕಾರಿ ಹುದ್ದೆ​ಯ​ಲ್ಲಿ​ರುವ ತಮ್ಮ ಸಂಬಂಧಿ​ಕರು, ಪರಿ​ಚ​ಯ​ಸ್ಥರ ವರ್ಗಾ​ವಣೆ, ಕಾಮ​ಗಾ​ರಿಯ ಗುತ್ತಿ​ಗೆ​ಗಾಗಿ ಬೆನ್ನು ಬಿದ್ದಿ​ದ್ದಾರೆ. ಮುಖಂಡರ ಆಂಬಿ​ಷನ್‌ ಅನ್ನು ಫುಲ್‌ಫಿಲ್‌ ಮಾಡ​ಲಾ​ಗದೆ ಸಂಸದ ಸುರೇಶ್‌ ಇಕ್ಕ​ಟ್ಟಿಗೆ ಸಿಲು​ಕಿ​ದಂತಿ​ದೆ.

ಚುನಾ​ವ​ಣೆ​ಗಳು ದುಬಾರಿ ಆಗು​ತ್ತಿ​ರುವ ಚಿಂತೆ: ಸ್ಥಳೀಯ ಸಂಸ್ಥೆ​ಯಿಂದ ಹಿಡಿದು ಲೋಕ​ಸಭೆವರೆ​ಗಿನ ಪ್ರತಿ​ಯೊಂದು ಚುನಾ​ವ​ಣೆ​ಗ​ಳು ಚುನಾ​ವ​ಣೆ​ಯಿಂದ​ ಚುನಾ​ವ​ಣೆಗೆ ದುಬಾರಿ ಆಗು​ತ್ತಲೇ ಇದೆ. ಇತ್ತೀ​ಚೆಗೆ ನಡೆದ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿಯೂ ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಗೆಲು​ವಿಗಾಗಿ ಡಿಕೆ ಸಹೋ​ದ​ರರು ತಂತ್ರ​ಗಾ​ರಿಕೆ ಹೆಣೆ​ಯು​ವು​ದರ ಜೊತೆಗೆ ಆರ್ಥಿಕ ಶಕ್ತಿಯನ್ನು ತುಂಬಿ​ದರು. ಸಾಮಾ​ನ್ಯ​ವಾಗಿ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಶೇಕಡ 70ರಷ್ಟುಜನ​ರಿಗೆ ಅಂದರೆ 2 ಲಕ್ಷ ಮತ​ದಾ​ರರು ಇದ್ದರೆ 1.40 ಲಕ್ಷ ಮತ​ದಾ​ರ​ರ ಕೈಗೆ ಕಾಣಿಕೆ ತಲು​ಪಿ​ಸ​ಬೇಕು. ಇನ್ನು ಲೋಕ​ಸಭಾ ಚುನಾ​ವ​ಣೆ​ಯಲ್ಲಿ 25 ಲಕ್ಷ ಮತ​ದಾ​ರ​ರಿದ್ದು, ಶೇಕಡ 70ರಷ್ಟುಅಂದರು 17.50 ಲಕ್ಷ ಮತ​ದಾ​ರ​ರಿಗೆ ಕಾಣಿಕೆ ನೀಡ​ಬೇ​ಕಾ​ಗು​ತ್ತದೆ. ವಿಧಾ​ನ​ಸಭಾ ಚುನಾ​ವಣೆಗಿಂತ ಲೋಕ​ಸಭಾ ಚುನಾ​ವ​ಣೆಯಲ್ಲಿ ಖರ್ಚು ಮತ್ತಷ್ಟುದುಬಾರಿ ಆಗ​ಲಿರುವ ಕಾರ​ಣ ಜನರ ದೃಷ್ಟಿ​ಯಲ್ಲಿ ಭ್ರಷ್ಟ​ರಂತೆ ಕಾಣು​ತ್ತೇವೆಂಬ ಚಿಂತೆ ಸುರೇಶ್‌ ಅವ​ರಿ​ಗೆ ಕಾಡು​ತ್ತಿ​ರ​ಬೇ​ಕು.

ಮೈತ್ರಿ​ಯಲ್ಲಿ ಚಕ್ರ​ವ್ಯೂಹ ರಚ​ನೆಯ ಆತಂಕ: ಶತ್ರು​ವಿನ ಶತ್ರು ಮಿತ್ರ ಎಂಬ ಗಾದೆ ಮಾತಿ​ನಂತೆ ಜೆಡಿ​ಎಸ್‌ ಪಕ್ಷ ಬಿಜೆ​ಪಿ​ಯೊಂದಿಗೆ ಹೊಂದಾ​ಣಿಕೆ ಮಾಡಿ​ಕೊಂಡು ಲೋಕ​ಸಭಾ ಚುನಾ​ವಣೆ ಎದು​ರಿ​ಸುವ ಮಾತು​ಗಳು ಕೇಳಿ ಬರು​ತ್ತಿವೆ. ಈ ದೋಸ್ತಿ ರಚ​ನೆ​ಗೊಂಡಲ್ಲಿ ಮಾಜಿ ಸಿಎಂ ಕುಮಾ​ರ​ಸ್ವಾಮಿ ಅಥವಾ ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಪೈಕಿ ಒಬ್ಬರು ಮೈತ್ರಿ ಅಭ್ಯ​ರ್ಥಿ​ಯಾಗಿ ಕಣ​ಕ್ಕಿ​ಳಿ​ಯುವ ಸಾಧ್ಯ​ತೆ​ಗ​ಳಿವೆ. ಇದು ನಿಜ​ವಾ​ದರೆ ಸುರೇಶ್‌ ತಮ್ಮ ಗೆಲು​ವಿ​ಗಾಗಿ ಸಾಕಷ್ಟುಶ್ರಮ ವಹಿ​ಸ​ಬೇ​ಕಾ​ಗು​ತ್ತ​ದೆ.

ವಿಧಾ​ನ​ಸಭಾ ಚುನಾ​ವ​ಣೆಯಲ್ಲಿ ಡಿಕೆ ಸಹೋ​ದ​ರರ ನಡೆ​ಸಿದ ತಂತ್ರ​ಗಾ​ರಿಕೆಯಿಂದಾಗಿ ಜೆಡಿ​ಎಸ್‌ ಹೀನಾಯ ಸೋಲು ಕಂಡಿತು. ಇದ​ರಿಂದ ಸಿಡಿ​ದೆ​ದ್ದಿ​ರುವ ದಳ​ಪ​ತಿ​ಗಳು ಕಮಲ ಪಾಳ​ಯ​ದೊಂದಿಗೆ ಚಕ್ರ​ವ್ಯೂಹ ರಚಿಸಿ ಡಿ.ಕೆ.​ಸು​ರೇಶ್‌ ಅವ​ರನ್ನು ಹಣಿ​ಯುವ ತವ​ಕ​ದ​ಲ್ಲಿ​ದ್ದಾ​ರೆ. ಆದರೆ, ಕಳೆದ ಸಂಸತ್‌ ಚುನಾ​ವ​ಣೆಗೆ ಹೋಲಿ​ಸಿ​ದರೆ ಈ ಬಾರಿ ಕಾಂಗ್ರೆಸ್‌ ಶಾಸ​ಕರ ಪ್ರಾಬಲ್ಯ ಹೆಚ್ಚಾ​ಗಿ​ದ್ದರು ಚಕ್ರ​ವ್ಯೂ​ಹದ ಆತಂಕ ಸುರೇಶ್‌ ಅವ​ರಿಗೆ ಕಾಡು​ತ್ತಿ​ರ​ಬೇಕು ಎಂಬ ಚರ್ಚೆ​ಗಳು ರಾಜ​ಕೀಯ ವಲ​ಯ​ದಲ್ಲಿ ನಡೆ​ಯು​ತ್ತಿ​ದೆ.

ಡಿಕೆಸು ರಾಜ​ಕೀಯ ಹಾದಿ: ಸಂಸತ್‌ ಚುನಾವಣೆ ಮೂಲಕವೇ ಡಿ.ಕೆ.​ಸು​ರೇಶ್‌ ರಾಜಕಾರಣಕ್ಕೆ ಪ್ರವೇಶ ಮಾಡಿದವರು. ಸಂಸದರಾಗುವುದಕ್ಕೂ ಮೊದಲು ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿಯೂ ಸ್ಪರ್ಧೆ ಕೂಡ ಮಾಡಿದವರಲ್ಲ. ಕನಕಪುರ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಶಿವಕುಮಾರ್‌ ಅವರ ಗೆಲುವುಗಾಗಿ ರಣತಂತ್ರಗಳನ್ನು ಹೆಣೆದು ಗೆಲುವಿಗಾಗಿ ಶ್ರಮಿಸುತ್ತಿದ್ದರು.

ಜನ​ಸ್ನೇಹಿ ಆಡ​ಳಿತ ನೀಡಿ, ಇಲ್ಲ ನಿಮ್ಮ ದಾರಿ ನೋಡಿ​ಕೊಳ್ಳಿ: ಸಂಸದ ಸುರೇಶ್‌ ಖಡಕ್‌ ವಾರ್ನಿಂಗ್‌

2013ರಲ್ಲಿ ಕ್ಷೇತ್ರದ ಸಂಸದರಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿ​ಎಸ್‌ನ ಅನಿತಾ ಕುಮಾ​ರ​ಸ್ವಾಮಿ ಅವ​ರನ್ನು ಡಿ.ಕೆ.​ಸು​ರೇಶ್‌ ಮಣಿ​ಸಿ​ ಮೊದಲ ಬಾರಿಗೆ ಲೋಕ​ಸಭೆ ಪ್ರವೇ​ಶಿ​ಸಿ​ದ​ರು. 2014ರ ಸಾರ್ವ​ತ್ರಿಕ ಚುನಾ​ವ​ಣೆ​ಯಲ್ಲಿ ಬಿಜೆ​ಪಿಯ ಪಿ.ಮು​ನಿ​ರಾ​ಜು​ಗೌಡ ಅವ​ರನ್ನು ಸುರೇಶ್‌ ಸೋಲಿಸಿದರು. ಕಳೆದ (2019)ಲೋ​ಕ​ಸಭಾ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ - ಜೆಡಿ​ಎಸ್‌ ಮೈತ್ರಿ ಅಭ್ಯ​ರ್ಥಿ​ಯಾ​ಗಿದ್ದ ಡಿ.ಕೆ.​ಸು​ರೇಶ್‌ ಬಿಜೆ​ಪಿಯ ಅಶ್ವತ್ಥ ನಾರಾ​ಯ​ಣ​ಗೌಡ ಅವ​ರನ್ನು ಪರಾ​ಭ​ವ​ಗೊ​ಳಿ​ಸಿದರು. ಈ ಮೂಲಕ ರಾಜ್ಯ​ದಿಂದ ಆಯ್ಕೆ​ಯಾದ ಕಾಂಗ್ರೆಸ್‌ನ ಏಕೈಕ ಸಂಸದ ಎಂಬ ಹಿರಿ​ಮೆಗೂ ಪಾತ್ರ​ರಾದವರು.

ರಾಜ​ಕೀಯ ನನಗೆ ಸರಿ ಎನಿ​ಸು​ತ್ತಿಲ್ಲ. ಕೆಲಸ ಮಾಡಲು ನೆಮ್ಮದಿ ಇಲ್ಲ. ನನಗೆ ರೆಸ್ಟ್‌ ಬೇಕು.​ ನನಗೆ ಅಧಿ​ಕಾರ ಬೇಡ ಎಂದು ಚುನಾ​ವಣಾ ಕಣ​ದಿಂದ ಹಿಂದೆ ಸರಿ​ಯ​ಬೇಕು ಅಂದು ಕೊಂಡಿ​ದ್ದೇನೆ. ರಾಜ​ಕಾ​ರ​ಣಿಗಳ ಬಗ್ಗೆ ಜನ​ರ​ಲ್ಲಿಯೂ ಮರ್ಯಾದೆ ಇಲ್ಲ. ಒಳ​ಗ​ಡೆಯೂ ಮರ್ಯಾದೆ ಇಲ್ಲ. ನಾನು ಅರ್ಜಿ ಹಾಕಿ​ದರೆ ಪಕ್ಷ ಟಿಕೆಟ್‌ ಕೊಡು​ತ್ತದೆ. ಇಲ್ಲ​ವೆಂದರೆ ಬೇರೆ​ಯ​ವ​ರಿಗೆ ಕೊಡು​ತ್ತದೆ. ನಾನು ಕಾರ್ಯ​ಕ​ರ್ತ​ನಾಗಿ ಕೆಲಸ ಮಾಡಲು ಸಿದ್ಧ​ನಿ​ದ್ದೇನೆ. ಬೇರೆ​ಯ​ವ​ರಿಗೆ ಅವ​ಕಾಶ ಆಗ​ಬೇಕು ಎಂಬ ಉದ್ದೇಶ ನನ​ಗಿದೆ. ನನ್ನ ಮನ​ಸ್ಸಿ​ನ​ಲ್ಲಿ​ರುವ ವಿಚಾ​ರ​ವನ್ನು ಕಾರ್ಯ​ಕ​ರ್ತರ ಬಳಿ ತಿಳಿ​ಸಿ​ದ್ದೇನೆ.
-ಡಿ.ಕೆ.​ಸು​ರೇಶ್‌, ಸಂಸ​ದರು, ಬೆಂಗ​ಳೂರು ಗ್ರಾಮಾಂತರ ಕ್ಷೇತ್ರ

Follow Us:
Download App:
  • android
  • ios