Asianet Suvarna News Asianet Suvarna News

Council Election Ramanagar: ಕೈ- ದಳಕ್ಕೆ ತಮ್ಮದೇ ಗೆಲು​ವಿನ ವಿಶ್ವಾಸ-ಬಿಜೆಪಿಗೆ ಭೀತಿ

  • ಕೈ- ದಳಕ್ಕೆ ತಮ್ಮದೇ ಗೆಲು​ವಿನ ವಿಶ್ವಾಸ-ಬಿಜೆಪಿಗೆ ಭೀತಿ
  • ಗೆದ್ದು ದಾಖಲೆ ಸೃಷ್ಟಿ​ಸುವ ಉತ್ಸಾ​ಹ​ದಲ್ಲಿ ರವಿ
  • ಅಸಾ​ಮಾನ್ಯ ಶಕ್ತಿ ಪ್ರದ​ರ್ಶಿ​ಸಿ​ದ ವಿಶ್ವಾಸದಲ್ಲಿ ರಮೇಶ್‌
  • ಠೇವಣಿ ನಷ್ಟದ ಭೀತಿ​ಯಲ್ಲಿ ಬಿಜೆಪಿ ನಾಯ​ಕ​ರು
MLC Election  Bengaluru Rural  Winning Confidence in Congress And JDS Leaders snr
Author
Bengaluru, First Published Dec 13, 2021, 3:00 PM IST

ವರದಿ :  ಎಂ.ಅ​ಫ್ರೋಜ್‌ ಖಾನ್‌

 ರಾಮ​ನ​ಗರ (ಡಿ.13): ಬೆಂಗ​ಳೂರು ಗ್ರಾಮಾಂತ​ರ (Bengaluru Rural) ಸ್ಥಳೀಯ ಸಂಸ್ಥೆ ಕ್ಷೇತ್ರ​ದಿಂದ ವಿಧಾನ ಪರಿ​ಷತ್‌ಗೆ ನಡೆದ ಚುನಾ​ವ​ಣೆ​ಯಲ್ಲಿ (MLC Election) ಸಮ​ಬ​ಲದ ಹೋರಾಟ ನೀಡಿರುವ ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ಪಕ್ಷ​ಗಳು ಗೆಲು​ವಿನ ವಿಶ್ವಾ​ಸ​ದ​ಲ್ಲಿ​ದ್ದರೆ, ಬಿಜೆಪಿ ಠೇವಣಿ ನಷ್ಟ​ವಾ​ಗದೆ ಪಕ್ಷದ ಮರ್ಯಾದೆ ಉಳಿ​ದರೆ ಸಾಕು ಎನ್ನು​ತ್ತಿ​ದೆ.  ಜೆಡಿಎಸ್‌ (JDS) ಮತ್ತು ಕಾಂಗ್ರೆಸ್‌ (Congress) ಪಕ್ಷಗಳ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆ ಎರಡು ಪಕ್ಷಗಳ ನಡುವಿನ ಕಾಳಗವಾಗಿತ್ತು. ಉಭಯ ಪಕ್ಷ​ಗಳನ್ನು ಮಣಿಸಿ ಬಿಜೆಪಿ ಗೆಲುವು ದಾಖಲಿಸುವುದು ಅಷ್ಟುಸುಲಭವೂ ಅಲ್ಲ ಎನ್ನುವ ಮಾತು​ಗಳು ಕೇಳಿ​ಬ​ರು​ತ್ತಿವೆ. ಈ ಎರಡು ಪಕ್ಷಗಳ ನಡುವಿನ ಹಣಾಹಣಿ ಜಿಲ್ಲೆಯವರೇ ಆದ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾ​ಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೂ ಸಹ ಪ್ರತಿಷ್ಠೆ ತಂದೊ​ಡ್ಡಿದೆ. ಹೀಗಾಗಿ ವಿಧಾನ ಪರಿಷತ್‌ ಚುನಾವಣೆ (Election) ಫಲಿ​ತಾಂಶ ಏನಾ​ಗ​ಲಿದೆ ಎಂಬ ಕುತೂಹಲ ಮೂಡಿಸಿದೆ.

ಸ್ಥಳೀಯ ಸಂಸ್ಥೆ​ಗಳು ಸೇರಿ​ದಂತೆ ಇಲ್ಲಿ​ವ​ರೆಗೆ ನಡೆ​ದಿ​ರುವ ಸಾಲು ಸಾಲು ಚುನಾ​ವ​ಣೆ​ಗ​ಳಲ್ಲಿ ಸೋಲು ಅನು​ಭ​ವಿಸಿ ಮುಖ​ಭಂಗ​ಕ್ಕೊ​ಳ​ಗಾ​ಗಿ​ರುವ ದಳ​ಪ​ತಿ​ಗ​ಳಿಗೆ , ವಿಧಾನ ಪರಿ​ಷತ್‌ ಚುನಾ​ವಣೆ ಗೆಲು​ವಿ​ನೊಂದಿಗೆ ರಾಮ​ನ​ಗರ ಮತ್ತು ಬೆಂಗ​ಳೂರು ಗ್ರಾಮಾಂತರ ಜಿಲ್ಲೆ ಜೆಡಿ​ಎಸ್‌ ನ  (JDS) ಭದ್ರ​ಕೋಟೆ ಎನ್ನು​ವು​ದನ್ನು ಸಾಬೀತು ಪಡಿ​ಸ​ಬೇ​ಕಿದೆ. ಹೀಗಾಗಿ ಪಕ್ಷದ ಗೆಲುವು ಅತಿ ಅಗತ್ಯ ಮತ್ತು ಅನಿ​ವಾರ್ಯವಾಗಿ​ದೆ.

ಕಾಂಗ್ರೆಸ್‌ ಪಾಲಿಗೆ ದೊಡ್ಡ ಸವಾಲು:

ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ (DK Shivakumar) ಹಾಗೂ ಸಂಸದ ಡಿ.ಕೆ.​ಸು​ರೇಶ್‌ ಅವರ ತವರು ಜಿಲ್ಲೆ ಜತೆಗೆ ಸೋದರ ಸಂಬಂಧಿ ಎಸ್‌.ರವಿ ಅಭ್ಯ​ರ್ಥಿ​ಯಾ​ಗಿ​ರುವ ಕಾರಣ ಕಾಂಗ್ರೆಸ್‌ (Congress) ಪಾಲಿಗೆ ಚುನಾ​ವ​ಣೆ ಪ್ರತಿ​ಷ್ಠೆ​ಯಾಗಿ ತೆಗೆ​ದು​ಕೊಂಡಿತ್ತು. ಚುನಾ​ವಣೆ ಘೋಷ​ಣೆ​ಯಾದ ದಿನ​ದಿಂದಲೂ ವಿರೋ​ಚಿತ ಹೋರಾಟ ನೀಡಿದೆ. 2023ರ ವಿಧಾ​ನ​ಸಭೆ ಚುನಾ​ವ​ಣೆಗೆ ವಿಧಾನ ಪರಿ​ಷತ್‌ ಚುನಾ​ವಣೆ ದಿಕ್ಸೂ​ಚಿ​ಯಾಗಿ ಜಿಲ್ಲೆ​ಯಲ್ಲಿ ಹೊಸ ರಾಜ​ಕೀಯ ಪರಿ​ವ​ರ್ತನೆ ಸೃಷ್ಟಿ​ಯಾ​ಗ​ಲಿದೆ. ಇದ​ರೊಂದಿಗೆ ಕಾಂಗ್ರೆಸ್‌ನ ವರ್ಚಸ್ಸು ಮತ್ತಷ್ಟುಹೆಚ್ಚಾ​ಗ​ಲಿದೆ. ಜೆಡಿ​ಎಸ್‌ ಪಕ್ಷ​ವನ್ನು ಮತ್ತಷ್ಟುನೆಲ​ಕ​ಚ್ಚು​ವಂತೆ ಮಾಡಲು ಇದೊಂದು ಸದಾ​ವ​ಕಾಶ ಎನ್ನು​ವುದು ಕೈ ಪಾಳ​ಯದ ರಾಜ​ಕೀಯ ಲೆಕ್ಕಾ​ಚಾರ.

ಬಿಜೆಪಿಗೆ ಠೇವಣಿ ನಷ್ಟದ ಭೀತಿ​:  ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ಪಕ್ಷ​ಗ​ಳಿಗೆ ಸಮ​ಬ​ಲದ ಹೋರಾಟ ನೀಡು​ವಲ್ಲಿ ವಿಫ​ಲ​ವಾ​ಗಿ​ರುವ ಆಡ​ಳಿ​ತ​ರೂಢ ಬಿಜೆಪಿ ಪಕ್ಷಕ್ಕೆ ಠೇವಣಿ ನಷ್ಟದ ಭೀತಿ ಎದು​ರಾ​ಗಿದೆ. ಚುನಾ​ವಣಾ ಪೂರ್ವ​ದಲ್ಲಿ ಜೆಡಿ​ಎಸ್‌ ಜತೆ​ಗಿನ ಮೈತ್ರಿ ವಿಚಾರ ಪ್ರಸ್ತಾ​ಪ​ವಾ​ದಾ​ಗಲೇ ಬಿಜೆಪಿ (BJP) ಪಾಳ​ಯ​ದಲ್ಲಿ ಹೋರಾ​ಟ​ದ ಮನೋ​ಭಾ​ವನೆ ಕಳೆ​ಕುಂದು​ವಂತೆ ಮಾಡಿತು.

ಈ ಚನಾ​ವ​ಣೆಯ ಸಾರಥ್ಯ ವಹಿ​ಸ​ಬೇ​ಕಾ​ಗಿದ್ದ ಸಚಿವ ಅಶ್ವತ್‌ ನಾರಾ​ಯಣ, ಮಾಜಿ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯ​ದರ್ಶಿ ಅಶ್ವತ್‌ ನಾರಾ​ಯ​ಣ​ಗೌಡ ಸೇರಿ​ದಂತೆ ಬಿಜೆ​ಪಿಯ (BJP) ಯಾವೊಬ್ಬ ನಾಯ​ಕರೂ ಚುನಾ​ವ​ಣೆ​ಯನ್ನು ಗಂಭೀ​ರ​ವಾಗಿ ತೆಗೆ​ದು​ಕೊಂಡು ಪ್ರಚಾರ ನಡೆ​ಸಲೇ ಇಲ್ಲ. ಮತ​ದಾ​ನದ ದಿನ​ದಂದು ಸ್ಥಳೀಯ ಸಂಸ್ಥೆ​ಗಳ ಬಿಜೆಪಿ ಬೆಂಬ​ಲಿತ ಸದ​ಸ್ಯರನ್ನು ಕೇಳು​ವ​ವರೇ ಇಲ್ಲ​ದಂತಾ​ಗಿತ್ತು. ಕೊನೆಗೆ ಬಿಜೆಪಿ ಪ್ರಭಾವಿ ನಾಯ​ಕ​ರೊ​ಬ್ಬರು ಜೆಡಿ​ಎಸ್‌ (JDS) ಅನ್ನು ಸೋಲಿ​ಸಲು ಕಾಂಗ್ರೆಸ್‌ ಅಭ್ಯ​ರ್ಥಿಗೆ ಮತ ನೀಡು​ವಂತೆ ಸಂದೇಶ ರವಾ​ನಿ​ಸಿ​ದರು ಎಂಬ ಮಾತು​ಗಳು ಕೇಳಿ ಬರು​ತ್ತಿವೆ.

ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ: ಗೆಲುವು ಯಾರಿಗೆ?

1.ಕಾಂಗ್ರೆಸ್‌ ಅಭ್ಯರ್ಥಿ ಎಸ್‌ .ರವಿ ಮೂರನೇ ಬಾರಿಗೆ ವಿಧಾನ ಪರಿ​ಷತ್‌ ಪ್ರವೇ​ಶಿಸಿ ದಾಖಲೆ ಸೃಷ್ಟಿ​ಸುವ ಉತ್ಸಾ​ಹ​ದಲ್ಲಿ ಇದ್ದಾರೆ. ಡಿಕೆ ಸಹೋ​ದ​ರರ ಸೋದರ ಸಂಬಂಧಿ ಎಂಬ ಬಲದ ಜತೆಗೆ ಪಕ್ಷದ ಎಲ್ಲ ಶಾಸ​ಕ​ರೊಂದಿಗೆ ನಿಕಟ ಹಾಗೂ ಉತ್ತಮ ಬಾಂಧವ್ಯ ಹೊಂದಿ​ದ್ದಾರೆ. ಜೊತೆಗೆ ಗ್ರಾಪಂಗ​ಳಲ್ಲಿ ಕಾಂಗ್ರೆಸ್‌ ಮತ​ಗಳೇ ಹೆಚ್ಚಿನ ಸಂಖ್ಯೆ​ಯ​ಲ್ಲಿ​ರು​ವು​ದ​ರಿಂದ ಗೆಲುವು ಸುಲಭವಂದು ಕಾಂಗ್ರೆಸ್‌ ನವರು ಹೇಳು​ತ್ತಿ​ರುವ ಮಾತು.

2.ಜೆ​ಡಿ​ಎಸ್‌ ಅಭ್ಯರ್ಥಿ ರಮೇಶ್‌ ಗೌಡ (Ramesh Gowda) ಸಾಮಾನ್ಯ ಅಭ್ಯ​ರ್ಥಿ​ಯಂತೆ ಕಂಡ​ಬಂದರೂ ದಿನ​ಕ​ಳೆ​ದಂತೆ ರಾಜ​ಕೀಯ ದಾಳ ಉರು​ಳಿ​ಸುವ ಮೂಲಕ ತಮ್ಮ ಅಸಾ​ಮಾನ್ಯ ಶಕ್ತಿ ಪ್ರದ​ರ್ಶಿಸಿ ಕೈ ಪಾಳ​ಯ​ದಲ್ಲಿ ಸಂಚ​ಲನ ಮೂಡಿ​ಸಿ​ದರು. ರಮೇಶ್‌ ಗೌಡ ಅವ​ರನ್ನು ಗೆಲ್ಲಿ​ಸಲೇ ಬೇಕೆಂಬ ಹಠ​ದೊಂದಿಗೆ ಜೆಡಿ​ಎಸ್‌ ಶಾಸ​ಕ​ರೆ​ಲ್ಲರೂ ಸಂಘ​ಟಿ​ತ​ರಾಗಿ ಪ್ರಯತ್ನ ನಡೆ​ಸಿದ್ದು, ಜೆಡಿ​ಎಸ್‌ ಪಾಲಿನ ಮತ​ಗ​ಳೆ​ಲ್ಲವೂ ಕಾಂಗ್ರೆಸ್‌ ಕಡೆಗೆ ವಾಲ​ದಂತೆ ಕಾಯ್ದು​ಕೊಂಡಿ​ದ್ದಾ​ರೆಂಬ ಅಪ​ರಿ​ಮಿತ ವಿಶ್ವಾ​ದ​ಲ್ಲಿ​ದ್ದಾರೆ.

3.ಬಿ​ಜೆಪಿ ಅಭ್ಯರ್ಥಿ ಬಿ.ಸಿ.​ನಾ​ರಾ​ಯ​ಣ​ಸ್ವಾಮಿ ಯಾವುದೇ ಬಲ​ವಿ​ಲ್ಲದೆ ಏಕಾಂಗಿ​ಯಾಗಿ ಹೋರಾಟ ನೀಡಿ​ದರು. ಬಿಜೆಪಿ ಅಧಿ​ಕಾ​ರ​ದ​ಲ್ಲಿ​ರುವ ಕಾರಣ ಸ್ಥಳೀಯ ಸಂಸ್ಥೆ​ಗಳ ಅಭಿ​ವೃದ್ಧಿ ದೃಷ್ಟಿ​ಯಿಂದ ಮತ​ದಾ​ರರು ತಮ್ಮನ್ನು ಬೆಂಬ​ಲಿ​ಸು​ತ್ತಾ​ರೆಂಬ ವಿಶ್ವಾಸ. ಕಮಲ ಪಾಳ​ಯ​ದೊ​ಳ​ಗೆ ಯಾವುದೇ ಒಳೇ​ಟು​ಗಳು ಬಿದ್ದಿ​ರುವ ಸಾಧ್ಯ​ತೆ​ಗ​ಳಿಲ್ಲ ಎನ್ನುತ್ತಿ​ದ್ದಾರೆ ಬಿಜೆಪಿ ನಾಯ​ಕ​ರು.

Follow Us:
Download App:
  • android
  • ios