Asianet Suvarna News Asianet Suvarna News

ಜನವರಿಯಲ್ಲೂ ಕಾಶ್ಮೀರ, ಲಡಾಖ್‌ನಲ್ಲಿ ಚಳಿ, ಹಿಮ ಕಡಿಮೆಯಾಗಿದ್ಯಾಕೆ? ವಿಜ್ಞಾನಿಗಳು ಹೇಳಿದ್ದೀಗೆ..

ಮಳೆಯ ಕೊರತೆಯು ಹಿಮಾಲಯ ಪ್ರದೇಶದಲ್ಲಿ ಸಿಹಿನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ತೋಟಗಾರಿಕೆ ಮತ್ತು ಕೃಷಿ ಉತ್ಪಾದನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ ಎಂದು ಲಡಾಖ್‌ನ ಲೇಹ್‌ನಲ್ಲಿರುವ ಹವಾಮಾನ ಕೇಂದ್ರದ ಮುಖ್ಯಸ್ಥ ಹೇಳಿದ್ದಾರೆ.

why are ladakh kashmir so warm in peak winter scientists explain ash
Author
First Published Jan 19, 2024, 10:56 AM IST

ಹೊಸದಿಲ್ಲಿ (ಜನವರಿ 19, 2024): ಪಶ್ಚಿಮ ಹಿಮಾಲಯ ಪ್ರದೇಶವು ಡಿಸೆಂಬರ್‌ನಲ್ಲಿ 80 ಪ್ರತಿಶತದಷ್ಟು ಮಳೆಯ ಕೊರತೆಯನ್ನು ದಾಖಲಿಸಿದೆ ಮತ್ತು ಜನವರಿ ಅರ್ಧ ತಿಂಗಳು ಮುಗಿದಿದ್ರೂ ಇದುವರೆಗೆ ಬಹುತೇಕ ಶುಷ್ಕವಾಗಿದೆ. ಈ ಚಳಿಗಾಲದಲ್ಲಿ ಸಕ್ರಿಯ ಪಾಶ್ಚಿಮಾತ್ಯ ಅಡಚಣೆಗಳ ಕೊರತೆಯೇ ಇದಕ್ಕೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

ಮೆಡಿಟರೇನಿಯನ್ ಪ್ರದೇಶದಲ್ಲಿ ಹುಟ್ಟುವ ಹವಾಮಾನ ವ್ಯವಸ್ಥೆಗಳು ಮತ್ತು ವಾಯುವ್ಯ ಭಾರತಕ್ಕೆ ಅಕಾಲಿಕ ಮಳೆಯನ್ನು ತರುವ ಸಕ್ರಿಯ ಪಾಶ್ಚಿಮಾತ್ಯ ಅಡಚಣೆಗಳ ಅನುಪಸ್ಥಿತಿಯು ಡಿಸೆಂಬರ್ 25 ರಿಂದ ಈ ಪ್ರದೇಶದಲ್ಲಿನ ಬಯಲು ಪ್ರದೇಶದ ಮೇಲೆ ಮಂಜಿನ ಕುರುಡು ಪದರದ ಹಿಂದಿನ ಕಾರಣ ಎಂದೂ ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.

ಅಬ್ಬಬ್ಬಾ…ಮೈನಸ್‌ 30 ಡಿಗ್ರಿ ಚಳಿಯಲ್ಲಿ ಕೂದಲು ಸಹ ಫ್ರೀಝ್‌ ಆಗೋಯ್ತು!

ಮಳೆಯ ಕೊರತೆಯು ಹಿಮಾಲಯ ಪ್ರದೇಶದಲ್ಲಿ ಸಿಹಿನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ತೋಟಗಾರಿಕೆ ಮತ್ತು ಕೃಷಿ ಉತ್ಪಾದನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ ಎಂದು ಲಡಾಖ್‌ನ ಲೇಹ್‌ನಲ್ಲಿರುವ ಹವಾಮಾನ ಕೇಂದ್ರದ ಮುಖ್ಯಸ್ಥ ಸೋನಮ್ ಲೋಟಸ್ ಹೇಳಿದ್ದಾರೆ. ಜನವರಿಯು ಗರಿಷ್ಠ ಚಳಿಗಾಲವಾಗಿದೆ. ಆದರೆ ಆಶ್ಚರ್ಯಕರವಾಗಿ, ಲಡಾಖ್ ಮತ್ತು ಕಾಶ್ಮೀರದಲ್ಲಿ ಈ ಬಾರಿ ಹವಾಮಾನ ತುಂಬಾ ಬೆಚ್ಚಗಿದೆ ಮತ್ತು ಬೆಳೆಗಳು ಬೇಗನೆ ಅರಳುತ್ತಿವೆ ಹಾಗೂ ಇದು ತುಂಬಾ ಆತಂಕಕಾರಿಯಾಗಿದೆ ಎಂದೂ ಅವರು ಹೇಳಿದರು. ಅಲ್ಲದೆ, ದೀರ್ಘಕಾಲದ ಶುಷ್ಕ ವಾತಾವರಣವು ಈ ಪ್ರದೇಶದ ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟವನ್ನು ಕಡಿಮೆ ಮಾಡಿದೆ ಎಂದೂ ಅವರು ಹೇಳಿದರು. 

ಆದರೆ, ಡಿಸೆಂಬರ್ 29 ರಿಂದ ಉತ್ತರ ಬಯಲು ಪ್ರದೇಶದಲ್ಲಿ (ಉತ್ತರ ಭಾರತದಲ್ಲಿ) ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 5-8 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ, ಪಶ್ಚಿಮದ ಅಡಚಣೆ ಕಾರಣದಿಂದಾಗಿ ಜನವರಿ 7-8 ರಂದು ಬಿಡುವು ನೀಡಿತ್ತು. ಜನವರಿ 12 ರಿಂದ 17 ರವರೆಗೆ ಪ್ರದೇಶದ ಹಲವು ನಿಲ್ದಾಣಗಳಲ್ಲಿ ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ ಎಂದು ಐಎಂಡಿ ವಿಜ್ಞಾನಿಗಳಾದ ಕೃಷ್ಣ ಮಿಶ್ರಾ, ನರೇಶ್ ಕುಮಾರ್ ಮತ್ತು ಆರ್‌ಕೆ ಜೆನಮಣಿ ವರದಿ ಮಾಡಿದ್ದಾರೆ.

ವಾಹನ ಸವಾರರೇ ಎಚ್ಚರ: ಚಳಿಗಾಲದಲ್ಲೇ ರಸ್ತೆ ಅಪಘಾತ ಹೆಚ್ಚು..!

ಅಲ್ಲದೆ, ಡಿಸೆಂಬರ್ 25 ರಿಂದ ವಾಯುವ್ಯ ಭಾರತದ ಬಯಲು ಪ್ರದೇಶದಲ್ಲಿ ಅತ್ಯಂತ ದಟ್ಟವಾದ ಮಂಜು ಮುಂದುವರೆದಿದ್ದು, ಜನವರಿ 14 ರಂದು ಗರಿಷ್ಠ ತೀವ್ರತೆ ಮತ್ತು ಅವಧಿಯನ್ನು ತಲುಪಿತು, ಹರ್ಯಾಣ, ದೆಹಲಿ, ಉತ್ತರ ಪ್ರದೇಶ, ಮತ್ತು ಬಿಹಾರ - ಹೀಗೆ ಅಮೃತಸರದಿಂದ ದಿಬ್ರುಗಢದವರೆಗಿನ ಸಂಪೂರ್ಣ ಉತ್ತರ ಬಯಲು ಪ್ರದೇಶದಲ್ಲಿ ಗೋಚರತೆ ಶೂನ್ಯ ಮೀಟರ್‌ಗೆ ಇಳಿದಿದೆ. 

ಒಟ್ಟಾರೆ, ಉತ್ತರ ಭಾರತದ ಮೇಲೆ ಈ ತೀವ್ರ ಹವಾಮಾನವು ಪ್ರಾಥಮಿಕವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ವಾಯುವ್ಯ ಭಾರತದ ಮೇಲೆ ಸಕ್ರಿಯ ಪಾಶ್ಚಿಮಾತ್ಯ ಅಡಚಣೆಗಳ ಕೊರತೆಯಿಂದಾಗಿ ಉಂಟಾಗಿದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ. ಪಾಶ್ಚಿಮಾತ್ಯ ಅಡಚಣೆ ದೇಶದ ಮೇಲೆ ಪರಿಣಾಮ ಬೀರಿದರೂ, ಅವುಗಳ ಪ್ರಭಾವವು ಗುಜರಾತ್, ಉತ್ತರ ಮಹಾರಾಷ್ಟ್ರ, ಪೂರ್ವ ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ಸೀಮಿತವಾಗಿದೆ ಎಂದು ಅವರು ಹೇಳಿದರು.

ಪರಿಣಾಮವಾಗಿ, ಪಶ್ಚಿಮ ಹಿಮಾಲಯ ಪ್ರದೇಶವು ಡಿಸೆಂಬರ್ ತಿಂಗಳಿನಲ್ಲಿ ಬಹಳ ಕಡಿಮೆ ಮಳೆಯನ್ನು (ಮಳೆ/ಹಿಮ) ಪಡೆದಿದೆ, ಇದು ಸಾಮಾನ್ಯಕ್ಕಿಂತ ಸರಿಸುಮಾರು ಶೇಕಡಾ 80 ರಷ್ಟು ಕಡಿಮೆಯಾಗಿದೆ. ಅದೇ ರೀತಿ, ಜನವರಿಯಲ್ಲಿ ಇದುವರೆಗೆ ಈ ಪ್ರದೇಶದಲ್ಲಿ ಬಹುತೇಕ ಶೂನ್ಯ ಮಳೆಯಾಗಿದೆ ಎಂದೂ ವರದಿ ಹೇಳಿದೆ.

ಈ ತೀವ್ರವಾದ ಹವಾಮಾನವು ಮುಖ್ಯವಾಗಿ ಮೂರು ಕಾರಣಗಳಿಂದ ಉಂಟಾಗುತ್ತದೆ: ವಾಯುವ್ಯ ಭಾರತದ ಮೇಲೆ ಸಕ್ರಿಯ ಪಾಶ್ಚಿಮಾತ್ಯ ಅಡಚಣೆಗಳ ಕೊರತೆ, ಚಾಲ್ತಿಯಲ್ಲಿರುವ ಎಲ್ - ನಿನೋ ಪರಿಸ್ಥಿತಿಗಳು ಮತ್ತು ಬಲವಾದ ಜೆಟ್ ಸ್ಟ್ರೀಮ್ ಎಂದು ವಿಜ್ಞಾನಿಗಳು ಹೇಳಿದ್ದಾರೆ.
 

Follow Us:
Download App:
  • android
  • ios