ದೇಹದೊಳಗೆ ಗೆಡ್ಡೆ ಬೆಳೆಯುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಸಾಮಾನ್ಯ ಗಾತ್ರದ ಇಂಥಾ ಗೆಡ್ಡೆಯನ್ನು ಸರ್ಜರಿ ಮಾಡಿ ಹೊರ ತೆಗೆಯಲಾಗುತ್ತದೆ. ಆದ್ರೆ ಇಲ್ಲೊಂದೆಡೆ ವ್ಯಕ್ತಿಯ ಹೊಟ್ಟೆಯೊಳಗಡೆ ಸಿಕ್ಕಿರೋದು ಸಾಮಾನ್ಯ ಗಾತ್ರದ ಗೆಡ್ಡೆಯಲ್ಲ. ಇದು ಬರೋಬ್ಬರಿ 10 ಕೆಜಿ ತೂಕದ ಗೆಡ್ಡೆ. ಫುಟ್‌ಬಾಲ್ ಗಾತ್ರದ ಈ ಗೆಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ. 

ಹೈದರಾಬಾದ್: ಇಲ್ಲಿನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ (ಎಐಎನ್‌ಯು) ವೈದ್ಯರು 53 ವರ್ಷದ ವ್ಯಕ್ತಿಯ 
ಹೊಟ್ಡೆಯಲ್ಲಿದ್ದ 10 ಕೆಜಿ ತೂಕದ ಫುಟ್‌ಬಾಲ್ ಗಾತ್ರದ ಮೂತ್ರಪಿಂಡದ ಗೆಡ್ಡೆಯನ್ನು(Kidney tumor) ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಈ ಮೂಲಕ ಅಪಾಯಕಾರಿ ಶಸ್ತ್ರಚಿಕಿತ್ಸೆಯಲ್ಲೂ (Operation) ವ್ಯಕ್ತಿಯ ಜೀವ ಉಳಿಸಿದ್ದಾರೆ. ಈ ಯಶಸ್ವಿ ಶಸ್ತ್ರಚಿಕಿತ್ಸೆ ಆಂಧ್ರಪ್ರದೇಶದಲ್ಲಿ ದಾಖಲಾದ ಮೊದಲ ಸಾಧನೆಯಾಗಿದೆ ಮತ್ತು ದೇಶದಲ್ಲಿ ಎರಡನೇ ನಿದರ್ಶನವಾಗಿದೆ ಎಂದು ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

ಡಾ.ತೈಫ್ ಬೆಂಡಿಗೇರಿ ಮತ್ತು ಡಾ.ರಾಜೇಶ್ ಕೆ.ರೆಡ್ಡಿ ಸೇರಿದಂತೆ ಡಾ.ಮಲ್ಲಿಕಾರ್ಜುನ ಸಿ. ನೇತೃತ್ವದ ಮೂತ್ರಶಾಸ್ತ್ರಜ್ಞರ ತಂಡವು ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ವೈದ್ಯರ ಪ್ರಕಾರ, ಕಡಪಾ ನಿವಾಸಿಯಾದ ರೋಗಿಯನ್ನು (Patient) ಹೊಟ್ಟೆ ಊತದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ (Test) ನಡೆಸಿದ, ವೈದ್ಯರು ದೊಡ್ಡ ಕಿಬ್ಬೊಟ್ಟೆಯಲ್ಲಿ ಲೆಸಿಯಾನ್ ಇರುವಿಕೆಯನ್ನು ಕಂಡುಕೊಂಡರು. ಎಡಭಾಗದ ಮೂತ್ರಪಿಂಡದಿಂದ ಗಡ್ಡೆ ಹುಟ್ಟಿಕೊಂಡಿರುವುದು ಚಿತ್ರಣದಿಂದ ತಿಳಿದುಬಂತು. ಈ ಗೆಡ್ಡೆಯು ಎಷ್ಟು ದೊಡ್ಡದಾಗಿತ್ತು ಎಂದರೆ ಅದು ಕಿಬ್ಬೊಟ್ಟೆಯ ಕುಹರದ ಮೂರನೇ ಎರಡರಷ್ಟು ಭಾಗವನ್ನು ಆಕ್ರಮಿಸಿಕೊಂಡಿತ್ತು. ಮಾತ್ರವಲ್ಲ ಇದು ಕರುಳನ್ನು ಬಲ ಕೆಳಗಿನ ಚತುರ್ಭುಜಕ್ಕೆ ಸ್ಥಳಾಂತರಿಸಿತ್ತು. ಆಪರೇಷನ್ ಮಾಡಿದರೂ ವ್ಯಕ್ತಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೂ ಹೆಚ್ಚಿತ್ತು. ಹೀಗಿದ್ದೂ ಬಹಳ ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ತಲೆಯ ಗಾಯ ಹಳೆಯದಾಗಿರಬಹುದು. ಆದರ ಇಗ್ನೋರ್ ಮಾಡೋದು ಅಪಾಯ

ಸತತ ಪ್ರಯತ್ನಗಳಿಂದ ಗೆಡ್ಡೆ ತೆಗೆದುಹಾಕಿದ ವೈದ್ಯರ ತಂಡ
'ಗೆಡ್ಡೆಯ ಗಾತ್ರವನ್ನು ಪರಿಗಣಿಸಿ, ನಾವು ರೊಬೊಟಿಕ್ ವಿಧಾನವನ್ನು ಮಾಡದಿರಲು ನಿರ್ಧರಿಸಿದೆವು. ಬದಲಿಗೆ ತೆರೆದ ಶಸ್ತ್ರಚಿಕಿತ್ಸೆಯನ್ನು ಆರಿಸಿಕೊಂಡೆವು.. ವೈದ್ಯರ ತಂಡದ ಸತತ ಪ್ರಯತ್ನಗಳಿಂದ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲು ಸಾಧ್ಯವಾಯಿತು. ಶಸ್ತ್ರಚಿಕಿತ್ಸೆಯ ನಂತರ, ಫುಟ್‌ಬಾಲ್ ಗಾತ್ರದಲ್ಲಿ ಗೆಡ್ಡೆ ತುಂಬಾ ದೊಡ್ಡದಾಗಿದೆ ಎಂದು ನಾವು ಕಂಡುಹಿಡಿದೆವು. ಮೈಕ್ರೋಸ್ಕೋಪಿಕ್ ಪರೀಕ್ಷೆಯು ಗೆಡ್ಡೆ ಕ್ಯಾನ್ಸರ್ ಬೆಳವಣಿಗೆ (ರೀನಲ್ ಸೆಲ್ ಕಾರ್ಸಿನೋಮ) ಎಂದು ದೃಢಪಡಿಸಿತು' ಎಂದು ಡಾ.ಮಲ್ಲಿಕಾರ್ಜುನ ವಿವರಿಸಿದರು.

'ಹೊಟ್ಟೆಯಲ್ಲಿ ಊತವಿತ್ತು, ಆಶ್ಚರ್ಯಕರವಾಗಿ ರೋಗಿಯು ಅದನ್ನು ಹೆಚ್ಚು ಗಮನಿಸಲಿಲ್ಲ ಅಥವಾ ನೋವಿನ ಹೊರತಾಗಿಯೂ ಅದನ್ನು ನಿರ್ಲಕ್ಷಿಸಿರಬಹುದು. ನಮ್ಮ ತಂಡವು ಕ್ಯಾನ್ಸರ್ ಪೀಡಿತ ಎಡ ಮೂತ್ರಪಿಂಡವನ್ನು ತೆಗೆದುಹಾಕಿದೆ. ಸೂಕ್ಷ್ಮದರ್ಶಕದ ಶಸ್ತ್ರಚಿಕಿತ್ಸಾ ಅಂಚುಗಳು ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದನ್ನು ಸೂಚಿಸುತ್ತವೆ. ಅದೃಷ್ಟವಶಾತ್, ಇದು ಗಡ್ಡೆಯು ಇತರ ಅಂಗಗಳಿಗೆ ಹರಡದ ಕಾರಣ ರೋಗಿಗೆ ಯಾವುದೇ ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಕಂಡುಬಂದಿದೆ. ಅನುಸರಿಸುವಿಕೆಯನ್ನು ನಿರ್ಲಕ್ಷಿಸದಂತೆ ನಾವು ಅವರಿಗೆ ಎಚ್ಚರಿಕೆ ನೀಡಿದ್ದೇವೆ' ಎಂದು ಡಾ. ರಾಜೇಶ್ ಕೆ. ರೆಡ್ಡಿ ಡಾ.ತೈಫ್ ತಿಳಿಸಿದ್ದಾರೆ.

World Brain Tumour Day: ಖಿನ್ನತೆಯೂ ಮೆದುಳಿನ ಮೇಲೆ ಬೀರುತ್ತೆ ಪ್ರಭಾವ

ಆರಂಭಿಕ ಹಂತದಲ್ಲಿ ರೋಗನಿರ್ಣಯ ಮಾಡಿದರೆ ಕೀಹೋಲ್ ಶಸ್ತ್ರಚಿಕಿತ್ಸೆ ಸಾಧ್ಯ
ಎಐಎನ್‌ಯುನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಸಲಹೆಗಾರ ಮೂತ್ರಶಾಸ್ತ್ರಜ್ಞ ಡಾ.ಪೂರ್ಣಚಂದ್ರ ರೆಡ್ಡಿ ಅವರ ಪ್ರಕಾರ, ವಿಶ್ವದಾದ್ಯಂತ ಮೂತ್ರಪಿಂಡದ ಟ್ಯೂಮರ್ ಹೆಚ್ಚುತ್ತಿದೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ವಾಡಿಕೆಯಂತೆ ಮೂತ್ರಪಿಂಡದ ಮಾರಣಾಂತಿಕ ಆರೋಗ್ಯ ಸಮಸ್ಯೆಗೆಳಿಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಇದು ಸರ್ಜಿಕಲ್ ರೋಬೋಟ್ ಮತ್ತು ಲ್ಯಾಪರೊಸ್ಕೋಪಿಯೊಂದಿಗೆ ಸುಸಜ್ಜಿತವಾಗಿದೆ. ಇದು ಕೀ-ಹೋಲ್‌ಗಳ ಮೂಲಕ ಶಸ್ತ್ರಚಿಕಿತ್ಸೆಯನ್ನು ಸುಗಮಗೊಳಿಸುತ್ತದೆ.

ಪ್ರಸ್ತುತ ಸನ್ನಿವೇಶಕ್ಕಿಂತ ಭಿನ್ನವಾಗಿ, ರೋಗಿಯು ಆರಂಭಿಕ ಹಂತದಲ್ಲಿ ರೋಗನಿರ್ಣಯವನ್ನು ಪಡೆದರೆ, ಕೀ-ಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಭಾಗಶಃ ನೆಫ್ರೆಕ್ಟಮಿ (ಮೂತ್ರಪಿಂಡದ ಆರೋಗ್ಯಕರ ಭಾಗವನ್ನು ತೆಗೆಯದೆಯೇ ಗೆಡ್ಡೆಯನ್ನು ತೆಗೆಯುವುದು) ಮಾಡಬಹುದು ಎಂದು ಡಾ ರೆಡ್ಡಿ ಹೇಳಿದರು.