Asianet Suvarna News Asianet Suvarna News

Mahalaya Amavasya 2022 ಯಾವಾಗ? ಯಾರಿಗೆ ಈ ದಿನ ಶ್ರಾದ್ಧ ಮಾಡ್ಬಹುದು?

ಪಿತೃಪಕ್ಷ ಕೊನೆಗೊಳ್ಳುವ ದಿನವೇ ಮಹಾಲಯ ಅಮಾವಾಸ್ಯೆ. ಈ ದಿನ ಬಹಳ ಮಹತ್ವಪೂರ್ಣವಾಗಿದೆ. ಏನು ಈ ದಿನದ ವಿಶೇಷ, ಈ ವರ್ಷ ಮಹಾಲಯ ಯಾವಾಗ ವಿವರ ತಿಳಿಯೋಣ. 

Mahalaya 2022 Date Shubh Muhurat Rituals and Significance skr
Author
First Published Sep 13, 2022, 4:48 PM IST

ಹಿಂದೂ ಧರ್ಮದಲ್ಲಿ, 15 ದಿನಗಳ ಪಿತೃ ಪಕ್ಷದಲ್ಲಿ, ಪೂರ್ವಜರ ಶಾಂತಿ ಮತ್ತು ಸಂತೋಷಕ್ಕಾಗಿ ಗಂಗಾ ಸ್ನಾನ, ಪಿಂಡ ದಾನ, ಶ್ರಾದ್ಧ ಕರ್ಮದಂತಹ ಕಾರ್ಯಗಳನ್ನು ಮಾಡಲಾಗುತ್ತದೆ. ಶ್ರಾದ್ಧ ಪಕ್ಷವು ಮಹಾಲಯ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ, ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಹಾಗಾದರೆ ಈ ವರ್ಷ ಮಹಾಲಯ ಅಮಾವಾಸ್ಯೆ ಯಾವಾಗ ಬರುತ್ತದೆ ಮತ್ತು ಅದರ ಪ್ರಾಮುಖ್ಯತೆ ಏನು ಎಂದು ತಿಳಿಯೋಣ.

ಹಿಂದೂ ಪಂಚಾಂಗದ ಪ್ರಕಾರ, ಭಾದ್ರಪದ ಮಾಸದ ಹುಣ್ಣಿಮೆಯಿಂದ ಅಶ್ವಿನ್ ಮಾಸದ ಅಮಾವಾಸ್ಯೆಯವರೆಗಿನ ಅವಧಿಯನ್ನು 'ಮಹಾಲಯ' ಶ್ರಾದ್ಧ ಪಕ್ಷ ಎಂದು ಕರೆಯಲಾಗುತ್ತದೆ. ಮಹಾಲಯ ಅಮವಾಸ್ಯೆ(Mahalaya Amavasya)ಯಂದು ಪಿತೃ ಪಕ್ಷ ಮುಗಿಯುತ್ತದೆ. 

ಮಹಾಲಯ ಅಮಾವಾಸ್ಯೆ ದಿನಾಂಕ 2022
ಪಿತೃ ಪಕ್ಷವು 10 ಸೆಪ್ಟೆಂಬರ್ 2022ರಿಂದ ಪ್ರಾರಂಭವಾಗಿದೆ. ಪಿತೃಪಕ್ಷದ ಸಮಯದಲ್ಲಿ, ಪೂರ್ವಜರು ತಮ್ಮ ಪ್ರೀತಿಪಾತ್ರರನ್ನು ಆಶೀರ್ವದಿಸಲು ಸ್ವರ್ಗದಿಂದ ಭೂಮಿಗೆ ಬರುತ್ತಾರೆ. ಈ ಬಾರಿ ಪಿತೃ ಪಕ್ಷ(Pitru Paksha)ದ ಮಹಾಲಯ ಅಮಾವಾಸ್ಯೆ ಸೆಪ್ಟೆಂಬರ್ 25 ರಂದು. ಮಹಾಲಯ ಅಮಾವಾಸ್ಯೆ ತಿಥಿ 25 ಸೆಪ್ಟೆಂಬರ್ 2022 ರಂದು 3:12 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 26 ರಂದು 3:23 ಕ್ಕೆ ಕೊನೆಗೊಳ್ಳುತ್ತದೆ. ಈ ದಿನ ಪಿಂಡದಾನ, ಶ್ರಾದ್ಧ ಮಾಡುವ ಮೂಲಕ ಎಲ್ಲ ಪೂರ್ವಜರನ್ನು ಬೀಳ್ಕೊಡಲಾಗುತ್ತದೆ. ವೈದಿಕ ಕ್ಯಾಲೆಂಡರ್ ಪ್ರಕಾರ, ಭೂಮಿಯಿಂದ ಪೂರ್ವಜರ(Ancestors) ಬೀಳ್ಕೊಡುಗೆಯ ನಂತರ, ತಾಯಿ ಶಕ್ತಿಯ ಆರಾಧನೆಯ ಹಬ್ಬವಾದ ಶಾರದೀಯ ನವರಾತ್ರಿ ಪ್ರಾರಂಭವಾಗಲಿದೆ. ಮಹಾಲಯ ಅಮಾವಾಸ್ಯೆ ತಿಥಿಯ ಮಹತ್ವವನ್ನು ತಿಳಿಯೋಣ.

Pitru Paksha: ಪಿಂಡ ಪ್ರದಾನ ಮಾಡಿದ ಸೀತೆಗೂ, ಆಲದ ಮರದ ದೀರ್ಘಾಯುಷ್ಯಕ್ಕೇನಿದೆ ನಂಟು?

ಮಹಾಲಯ ಅಮಾವಾಸ್ಯೆಯ ಮಹತ್ವ(Significance)
ಹಿಂದೂ ಧರ್ಮದಲ್ಲಿ ಅಮವಾಸ್ಯೆಯ ತಿಥಿಗೆ ವಿಶೇಷ ಮಹತ್ವವಿದೆ. ಶಾಸ್ತ್ರಗಳಲ್ಲಿ ಅಮಾವಾಸ್ಯೆ ತಿಥಿಯಂದು ಪೂರ್ವಜರಿಗೆ ನೈವೇದ್ಯ ಅರ್ಪಿಸುವುದು ವಿಶೇಷ. ಈ ದಿನ ಪೂರ್ವಜರಿಗೆ ತರ್ಪಣವನ್ನು ಅರ್ಪಿಸಿ, ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ಸಂತೃಪ್ತಿ ಪಡಿಸಲಾಗುತ್ತದೆ. ಕುಟುಂಬದ ಸದಸ್ಯರ ಸೇವೆಯಿಂದ ಸಂತುಷ್ಟರಾದ ಪೂರ್ವಜರು ತಮ್ಮ ಕುಟುಂಬಗಳನ್ನು ಭೂಮಿಯ ಮೇಲೆ ಜೀವಂತವಾಗಿ ಆಶೀರ್ವದಿಸುತ್ತಾ ಪೂರ್ವಜರ ಲೋಕಕ್ಕೆ ಹೋಗುತ್ತಾರೆ. ಮಹಾಲಯ ಅಮಾವಾಸ್ಯೆಯಂದು ಅನ್ನವನ್ನು ತಯಾರಿಸಿ, ಕಾಗೆ, ಹಸು, ನಾಯಿಗಳಿಗೆ ಅನ್ನವನ್ನು ಅರ್ಪಿಸಿ, ಬ್ರಾಹ್ಮಣರಿಗೆ ಅನ್ನದಾನ ಮಾಡಿ ದಕ್ಷಿಣೆ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.
ಸರ್ವಪಿತೃ ಅಮಾವಾಸ್ಯೆಯಂದು, ಮರಣದ ದಿನಾಂಕವನ್ನು ತಿಳಿದಿಲ್ಲದ ಪೂರ್ವಜರು ಅಥವಾ ಯಾವುದೇ ಕಾರಣದಿಂದ ತಮ್ಮ ಪೂರ್ವಜರಿಗೆ ಇದುವರೆಗೂ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ, ಈ ದಿನಾಂಕದಂದು ಮಾಡಬಹುದು.

ಹೇಗೆ ಮಾಡುವುದು?
ಕೈಯಲ್ಲಿ ಕುಶದ ಉಂಗುರವನ್ನು ಹಾಕಿಕೊಳ್ಳಲಾಗುತ್ತದೆ. ಹಾಗೆಯೇ ತರ್ಪಣ ಬಿಡುವವರ ಮುಖ ದಕ್ಷಿಣ ದಿಕ್ಕಿನಲ್ಲಿರಬೇಕು. ನೀವು ನಿಮ್ಮ ಪೂರ್ವಜರಿಗೆ ತರ್ಪಣ ಮಾಡುತ್ತಿದ್ದರೆ, ಮೊದಲು ನಿಮ್ಮ ಗೋತ್ರದ ಹೆಸರನ್ನು ತೆಗೆದುಕೊಳ್ಳಿ. ಇದರೊಂದಿಗೆ ಗಂಗಾಜಲ, ಹಾಲು, ಜೇನು, ಎಳ್ಳು ನೀಡಲಾಗುತ್ತದೆ. ಈ ದಿನ ಪಿಂಡವನ್ನು ಕಾಗೆ, ಹಸು, ದೇವತೆ, ಇರುವೆ ಮತ್ತು ಬ್ರಾಹ್ಮಣರಿಗೆ ಹಂಚಲಾಗುತ್ತದೆ. 

Mahalaya Amavasya: ಪಿತೃಗಳು ಅಸಂತುಷ್ಟರಾದ್ರೆ ಎದುರಾಗ್ತಾವೆ ಕಷ್ಟಗಳ ಸರಪಳಿ

ನವರಾತ್ರಿಗೆ ನಾಂದಿ
ಪಿತೃಪಕ್ಷ ಹಾಗೂ ಮಹಾಲಯ ಅಮಾವಾಸ್ಯೆಯು ಶರನ್ನವರಾತ್ರಿಗೆ ನಾಂದಿಯಾಗಿದೆ. ನಾಂದಿ ಎಂದರೆ ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಕ್ಕೂ ಮುನ್ನ ಪೂರ್ವಜರ ಸ್ಮರಣೆ ಮಾಡುವುದಾಗಿದೆ. ಅಂತೆಯೇ ನವರಾತ್ರಿಗೆ ನಾಂದಿಯಾಗಿ ಈ ಮಹಾಲಯ ಅಮಾವಾಸ್ಯೆ ಬರುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios