Asianet Suvarna News Asianet Suvarna News

ತಂದೆ-ತಾಯಿ ಕೊಲೆ ಮಾಡಿ ಶ್ರೀರಂಗಪಟ್ಟಣ ಸೇತುವೆಯಿಂದ ಹಾರಿದ್ದ!

ಕಾಮಾಕ್ಷಿಪಾಳ್ಯ ವೃದ್ಧ ದಂಪತಿಗಳ ಕೊಲೆ ಪ್ರಕರಣ/ ತಾನೇ ಕೊಲೆ ಮಾಡಿರುವುದಾಗಿ ಹೇಳಿದ ಪುತ್ರ/  ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ/ ಶ್ರೀರಂಗಪಟ್ಟಣ ಸೇತುವೆಯಿಂದ ಹಾರಿದ್ದ

elderly couple murder case Son arrested Bengaluru
Author
Bengaluru, First Published Jun 11, 2020, 2:57 PM IST

ಬೆಂಗಳೂರು(ಜೂ.11)  ಕಾಮಾಕ್ಷಿಪಾಳ್ಯದಲ್ಲಿ ನಡೆದಿದ್ದ ವೃದ್ಧ ದಂಪತಿಗಳ ಹತ್ಯೆ ಪ್ರಕರಣದ  ವಿಚಾರಣೆ ಮುಂದುವರಿದಿದ್ದು  ತಾನೇ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಪುತ್ರನೇ ಹೇಳಿಕೆ ನೀಡಿದ್ದಾನೆ.

ವೃದ್ಧ ದಂಪತಿಗಳ ಪುತ್ರ ಸಂತೋಷ್ ಕೃತ್ಯ ಎಸಗಿದ್ದಾನನೆ. ಜೂನ್ 10 ನೇ ತಾರೀಖು ನಸುಕಿನ ಜಾವ 3ಗಂಟೆ ಸಮಯದಲ್ಲಿ ಇಬ್ಬರನ್ನು ಹತ್ಯೆ ಮಾಡಿದ್ದ ಪುತ್ರ ಸಂತೋಷ್‌ ಬಳಿಕ ಶ್ರೀರಂಗಪಟ್ಟಣಕ್ಕೆ ತೆರಳಿದ್ದ.  ಶ್ರೀರಂಗಪಟ್ಟದಲ್ಲಿ ತಂದೆ ತಾಯಿಯ ಪಿಂಡವನ್ನು ನದಿಗೆ ಬಿಟ್ಟಿದ್ದ.  ಬಳಿಕ ತಾನು ಆತ್ಮಹತ್ಯೆಗೆ ಯತ್ನಸಿದ್ದ.

ಅವಳು ಸೆಕ್ಸ್ ವರ್ಕರ್, ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಶ್ರೀರಂಗಪಟ್ಟಣದ ಬ್ರಿಡ್ಜ್ ಮೇಲಿಂದ ಕೆಳಗೆ ಬಿದ್ದ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ.  ಆದರೆ ಕೆಳಗೆ ಬಿದ್ದವನು ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ.  ವಿಚಾರ ತಿಳಿದ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ಬಂದಿದೆ. 

ನರಸಿಂಹರಾಜು (70) ಮತ್ತು ಅವರ ಪತ್ನಿ ಸರಸ್ವತಿ (64) ಕೊಲೆಯಾಗಿದ್ದರು.  ಮದುವೆ ಬ್ರೋಕರ್‌ಆಗಿ ಕೆಲಸ ಮಾಡುತ್ತಿದ್ದ ನರಸಿಂಹರಾಜು, 20 ವರ್ಷಗಳಿಂದ ಯಾವುದೇ ಕೆಲಸ ಮಾಡದೆ ಮನೆಯಲ್ಲಿ ಇರುತ್ತಿದ್ದರು. ಶಿಕ್ಷಕಿಯಾಗಿದ್ದ ಸರಸ್ವತಿ ಅವರು ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಆಡಿಟರ್‌ ವೃತ್ತಿ ಮಾಡುತ್ತಿದ್ದ ಪುತ್ರ ಸಂತೋಷ್‌ಗೆ ವಿವಾಹವಾಗಿದ್ದು ಗರ್ಭಿಣಿ ಪತ್ನಿ ತವರಿಗೆ ತೆರಳಿದ್ದ ವೇಳೆ ಘಟನೆಯಾಗಿತ್ತು.

ಮನೆ ಕೆಲಸದವಳು ಬಂದು  ನೋಡಿದಾಗ ಕೊಲೆಯಾಗಿದ್ದು ಗೊತ್ತಾಗಿತ್ತು. ಈಗ ಆರೋಪಿ ಸಂತೋಷ್ ಪೊಲೀಸರ ವಶದಲ್ಲಿದ್ದು ಚೇತರಿಕೆ ಬಳಿಕ ಮತ್ತಷ್ಟು ಮಾಹಿತಿ ಗೊತ್ತಾಗಲಿದೆ. 

Follow Us:
Download App:
  • android
  • ios