Asianet Suvarna News Asianet Suvarna News

ಸೂರ್ಯ ರಶ್ಮಿ ಮೈ ತಾಕಿದರೆ ಚೆನ್ನ: ಬಂಗಾರದ ಬೆಳಕೇ ನೈಜ ಚಿನ್ನ!

ವಾಸ್ತು ಶಾಸ್ತ್ರದ ಅನುಸಾರ ಮನೆಯ ಒಳಗೆ ಸೂರ್ಯನ ಕಿರಣಗಳು ಬರಬೇಕು. ಮನೆಯೊಳಗಿನ ಎಲ್ಲಾ ಭಾಗಗಳಿಗೂ ಸೂರ್ಯನ ಬೆಳಕು ಬೀಳುತ್ತಿದ್ದರೆ ಅಲ್ಲಿನ ದೋಷಗಳು ನಿವಾರಣೆಯಾಗುತ್ತವೆ. ಇನ್ನೇನು ಸಮಸ್ಯೆ ನಿವಾರಣೆಯಾಗುತ್ತೆ ನೋಡೋಣ... 

9 reasons why sunlight is important in Vaastu
Author
Bangalore, First Published May 13, 2019, 3:31 PM IST

ಸಂಪೂರ್ಣ ಬ್ರಹ್ಮಾಂಡದ ಆಧಾರ ಎಂದರೆ ಸೂರ್ಯ. ಸೂರ್ಯ ಶಕ್ತಿ ಮತ್ತು ರಚನಾತ್ಮಕವಾದ ಗ್ರಹ. ಸೂರ್ಯನ ಶಕ್ತಿಯಿಂದಾಗಿಯೇ ಈ ಭೂಮಿಯ ಮೇಲೆ ಜೀವಗಳು ಇರಲು ಸಾಧ್ಯ. ಪಂಚತತ್ವಗಳಲ್ಲಿ ಒಂದಾಗಿರುವ ಸೂರ್ಯನಿಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಮಹತ್ವವಿದೆ. ಸೂರ್ಯದೇವನನ್ನು ಅಗ್ನಿಯ ಸ್ವರೂಪ ಎಂದು ಹೇಳಲಾಗುತ್ತದೆ. 

ವಾಸ್ತುವಿನ ಸೂರ್ಯ ಯಾಕೆ ಬಹಳ ಪ್ರಾಮುಖ್ಯತೆ ಪಡೆದಿದ್ದಾನೆ ಇಲ್ಲಿದೆ ಮಾಹಿತಿ... 

- ಕತ್ತಲೆ ಕೋಣೆಯಲ್ಲಿ ಅಥವಾ ಸೂರ್ಯನ ಬೆಳಕು ಬಾರದಿರುವ ಕೋಣೆಯಲ್ಲಿ ಕೀಟಗಳು ಅಧಿಕವಾಗಿ ಮನೆ ಮಾಡಿರುತ್ತವೆ. ಇದರಿಂದ ಆ ಮನೆಯಲ್ಲಿ ವಾಸವಾಗಿರುವ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

- ಸೂರ್ಯನ ಬೆಳಕು ಮನೆಯೊಳಗೇ ಬಿದ್ದರೆ ಇದರಿಂದ ಮನೆಯ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. 

- ಮನೆಯ ಯಾವ ಕೋಣೆಯೊಳಗೆ ಬೆಳಕು ಹರಿಯುತ್ತದೆ. ಅಲ್ಲಿ ಶಕ್ತಿಯೂ ಹೆಚ್ಚುತ್ತದೆ. ಸೂರ್ಯನ ಬೆಳಕಿನಿಂದಾಗಿ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ.

- ಬೆಳಕಿರದೇ ಇದ್ದರೆ ಅಲ್ಲಿನ ಜನರ ಅರೋಗ್ಯ ಸರಿಯಾಗಿರುವುದಿಲ್ಲ. 

ಮನೆಯಲ್ಲಿರುವ ಈ ವಸ್ತುಗಳನ್ನು ಕೂಡಲೇ ಸ್ವಚ್ಛಗೊಳಿಸಿ!

- ಬೆಳಕು ಮನೆಯೊಳಗೇ ಬರದೇ ಇದ್ದರೆ ಜನರ ಜೀವನ ಶಕ್ತಿ ಕಡಿಮೆಯಾಗುತ್ತದೆ. 

- ಅಡುಗೆ ಮನೆ ಮತ್ತು ಸ್ನಾನದ ಮನೆಯಲ್ಲಿ ಸೂರ್ಯನ ಬೆಳಕು ಅತ್ಯಗತ್ಯ.

- ಮನೆಯೊಳಗೇ ಸೂರ್ಯನ ಕಿರಣ ಹೆಚ್ಚಾಗಿ ಬಾರದೆ ಇದ್ದರೆ ಆ ಜಾಗದಲ್ಲಿ ಕೃತಕ ಬೆಳಕು ಹರಿಸಬೇಕು. 

- ಮಲಗುವ ಕೋಣೆಯಲ್ಲಿ ಡಿಮ್ ಲೈಟ್ ಯಾವಾಗಲೂ ಇರಲೇಬೇಕು. ಈ ಕೊನೆಯಲ್ಲಿ ಹೆಚ್ಚು ಪ್ರಕಾಶಮಾನವಾದ ಬೆಳಕು ಬಿದ್ದರೆ ಆರಾಮವಾಗಿರಲು ಸಾಧ್ಯವಿಲ್ಲ. ಅಲ್ಲದೆ ನಿದ್ರೆ ಮೇಲೆ ಪ್ರಭಾವ ಬೀರುತ್ತದೆ. 

ಕಳ್ಳತನ ತಡೆಯಲು ಇಲ್ಲಿವೆ ವಾಸ್ತು ಟಿಪ್ಸ್....

- ಓದುವ ಮತ್ತು ಮಲಗುವ ಕೋಣೆಯಲ್ಲಿ ಸೂರ್ಯನ ಬೆಳಕು ನೇರವಾಗಿ ಮುಖದ ಮೇಲೆ ಬೀಳದಂತೆ ನೋಡಿಕೊಳ್ಳಿ. ಹೆಚ್ಚು ಬೆಳಕು ಮುಖದ ಮೈಮೇಲೆ ಬಿದ್ದರೆ ಸರಿಯಾಗಿ ಓದಲು ಸಾಧ್ಯವಾಗೋದಿಲ್ಲ. 

Follow Us:
Download App:
  • android
  • ios