ಹೊಸಕೋಟೆ: 'ಒಡೆಯ'ನಿಗೆ ಕ್ಷೀರಾಭಿಷೇಕ. 101 ಕಿ.ಮೀ. ರ‍್ಯಾಲಿ!

Dec 12, 2019, 12:20 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರ ರಾಜ್ಯಾದ್ಯಂತ ಭರ್ಜರಿ ತೆರೆ ಕಂಡಿದೆ. ಅಭಿಮಾನಿಗಳು ಹೊಸಕೋಟೆಯ ಸಾಧನಾ ಚಿತ್ರ ಮಂದಿರದಿಂದ ಕೋಟೆ ಲಿಂಗೇಶ್ವರ ದೇವಾಲಯದವರೆಗೂ 101 ಕಿಮೀ. ಬೈಕ್‌ ರ‍್ಯಾಲಿ ಮಾಡಿದ್ದಾರೆ .ಅಷ್ಟೇ ಅಲ್ಲದೆ ಚಿತ್ರದ ಪೋಸ್ಟರ್‌ಗೆ ಕ್ಷೀರಾಭಿಷೇಕ ಮಾಡಿ ಮೊದಲ ಶೋಗೆ ಚಾಲನೆ ನೋಡಿದ್ದಾರೆ. ರಾಜ್ಯಾದ್ಯಂತ ಚಿತ್ರ ಮಂದಿರಗಳು ಫುಲ್ ಆಗಿದ್ದು 'ಒಡೆಯ' ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೆ ಚಿತ್ರ ತಂಡದೊಂದಿಗೆ ದರ್ಶನ್‌ ಚಿತ್ರ ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.

ಹೆಚ್ಚಿನ Entertainment ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: https://kannada.asianetnews.com/video