ಮುಸ್ಲಿಮರು ನಮ್ಮ ಮುಂದೆ ಕಣ್ಣುಬಿಟ್ಟೋರು, ಈ ಮಕ್ಕಳಿಗೆ ದೇಶದ ಮೇಲೆ ಯಾವುದೇ ಅಧಿಕಾರ ಇಲ್ಲ: ಯತ್ನಾಳ್

Published : Oct 19, 2024, 12:56 PM IST
ಮುಸ್ಲಿಮರು ನಮ್ಮ ಮುಂದೆ ಕಣ್ಣುಬಿಟ್ಟೋರು, ಈ ಮಕ್ಕಳಿಗೆ ದೇಶದ ಮೇಲೆ ಯಾವುದೇ ಅಧಿಕಾರ ಇಲ್ಲ: ಯತ್ನಾಳ್

ಸಾರಾಂಶ

ಸರ್ಕಾರ ಬರೀ ಮುಸ್ಲಿಮರ ಓಲೈಕೆಗೆ ನಿಂತಿದೆ. ವಿಜಯಪುರದಲ್ಲೇ 16 ಸಾವಿರ ಎಕರೆ, ಕರ್ನಾಟಕ 6.5 ಲಕ್ಷ‌ ಎಕರೆ ನಮ್ಮದು ಎಂದು ಕ್ಲೇಮ್ ಮಾಡುತ್ತಿದ್ದಾರೆ. ಇನ್ನೂ ದೇಶದಲ್ಲಿ ಎಷ್ಟಿರಬಹುದು?. ಇವರು ಹೇಳಿದಷ್ಟು ಭೂಮಿ ಕೊಟ್ಟರೆ ದೇಶದಲ್ಲಿ ಎರಡು‌ ಪಾಕಿಸ್ತಾನ ಆಗ್ತವೆ. ವಿಧಾನಸೌಧ, ಕ್ಲೇಮ್ ಮಾಡಿದ್ರು, ಈಗ ಹೊಸ ಪಾರ್ಲಿಮೆಂಟ್ ಕೇಳ್ತಾರೆ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌  

ಹುಬ್ಬಳ್ಳಿ(ಅ.19):  ಸಿದ್ದರಾಮಯ್ಯ ಸೈಟ್ ಆಗಲೇ ವಾಪಾಸು ಕೊಡಬೇಕಿತ್ತು. ಅವರ ಗಮನಕ್ಕೆ ‌ಬಂದ ಕೂಡಲೇ ಸೈಟ್ ವಾಪಸು ಕೊಡಬೇಕಿತ್ತು. ಈಗ ಕಾಲ‌ ಮಿಂಚಿ ಹೋಗಿದೆ. ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ. 

ಸಚಿವ ಜಮೀರ್ ಅಹಮ್ಮದ್ ಖಾನ್ ವಕ್ಫ್ ಆಸ್ತಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು, ಸರ್ಕಾರ ಬರೀ ಮುಸ್ಲಿಮರ ಓಲೈಕೆಗೆ ನಿಂತಿದೆ. ವಿಜಯಪುರದಲ್ಲೇ 16 ಸಾವಿರ ಎಕರೆ, ಕರ್ನಾಟಕ 6.5 ಲಕ್ಷ‌ ಎಕರೆ ನಮ್ಮದು ಎಂದು ಕ್ಲೇಮ್ ಮಾಡುತ್ತಿದ್ದಾರೆ. ಇನ್ನೂ ದೇಶದಲ್ಲಿ ಎಷ್ಟಿರಬಹುದು?. ಇವರು ಹೇಳಿದಷ್ಟು ಭೂಮಿ ಕೊಟ್ಟರೆ ದೇಶದಲ್ಲಿ ಎರಡು‌ ಪಾಕಿಸ್ತಾನ ಆಗ್ತವೆ. ವಿಧಾನಸೌಧ, ಕ್ಲೇಮ್ ಮಾಡಿದ್ರು, ಈಗ ಹೊಸ ಪಾರ್ಲಿಮೆಂಟ್ ಕೇಳ್ತಾರೆ. ಮೊಘಲರು ಯಾರು ಕಳ್ಳ ಸೂ..ಮಕ್ಕಳು. ಅಫ್ಘಾನಿಸ್ತಾನದಿಂದ ಬಂದವರು, ಅಯೋಗ್ಯರು. ನಮ್ಮ ದೇಶದಲ್ಲಿ ರಾಮ, ಪಾಂಡವರು, ನಮ್ಮ ಇತಿಹಾಸ ಎಂದು ಕಿಡಿ ಕಾರಿದ್ದಾರೆ. 

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್‌ಐಆರ್‌

ಆಗ ಇಸ್ಲಾಂ ಧರ್ಮ ಹುಟ್ಟಿರಲಿಲ್ಲ. ಅವರು ನಮ್ಮ ಮುಂದೆ ಕಣ್ಣಬಿಟ್ಟೋರು. ನಮ್ಮಿಂದಲೇ  ಟಿಪ್ಪು, ಆದಿಲ್ ಶಾಹಿ ಅಂಜಿ ಜಮೀರ್ ಅಹಮ್ಮದ್ ಖಾನ್ ನಂತವರು ಮತಾಂತರ ಗೊಂಡವರು. ಎಲ್ಲರನ್ನು ಹೆದರಿಸಿ ಮತಾಂತರ ಮಾಡಿದವರು. ಈ ಮಕ್ಕಳಿಗೆ ಈ ದೇಶದ ಮೇಲೆ ಯಾವುದೇ ಅಧಿಕಾರ ಇಲ್ಲ. ಗಾಂಧಿ ಮತ್ತು ನೆಹರು ಈ ದೇಶ ಹಾಳಾಗಲು ಕಾರಣ ಎಂದು ದೂರಿದ್ದಾರೆ. 

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!