ಚಂಡಮಾರುತ ಹಿನ್ನೆಲೆ ರೈಲುಗಳ ಮಾರ್ಗ ಬದಲಾವಣೆ

Kannadaprabha News   | Asianet News
Published : Jun 03, 2020, 09:20 AM ISTUpdated : Jun 03, 2020, 09:28 AM IST
ಚಂಡಮಾರುತ ಹಿನ್ನೆಲೆ ರೈಲುಗಳ ಮಾರ್ಗ ಬದಲಾವಣೆ

ಸಾರಾಂಶ

ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್‌ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳೂರು(ಜೂ. 03): ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್‌ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಎರ್ನಾಕುಳಂ ನಿಜಾಮುದ್ದೀನ್‌ ಸ್ಪೆಶಲ್‌ ರೈಲು, ತಿರುವನಂತಪುರಂ ಸೆಂಟ್ರಲ್‌-ಲೋಕಮಾನ್ಯತಿಲಕ್‌ ಸ್ಪೆಶಲ್‌ ರೈಲು ಹಾಗೂ ನವದೆಹಲಿ-ತಿರುವನಂತಪುರಂ ಸೆಂಟ್ರಲ್‌ ಸ್ಪೆಶಲ್‌ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳೂರಿಗೆ ಎನ್‌ಡಿಆರ್‌ಎಫ್‌ ತಂಡ ಆಗಮನ

ಈ ರೈಲುಗಳು ವಯಾ ಮಡಗಾಂವ್‌ ಜಂಕ್ಷನ್‌, ಲೋಂಡಾ, ಮೀರಜ್‌, ಪುಣೆ, ಮಾನ್ಮಾಡ್‌, ಕಲ್ಯಾಣ್‌ ಮೂಲಕ ಸಂಚರಿಸಲಿವೆ. ಲೋಕಮಾನ್ಯತಿಲಕ್‌-ತಿರುವನಂತಪುರಂ ಸೆಂಟ್ರಲ್‌ ರೈಲು ಜೂನ್‌ 3ರಂದು ಸಂಜೆ 5 ಗಂಟೆಗೆ ಹೊರಡಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಬಸ್‌ಗಳಿಗೆ ಪ್ರಯಾಣಿಕರ ಕೊರತೆ: ನಿಯಮ ಉಲ್ಲಂಘಿಸಿದ 15 ಬಸ್‌ಗೆ ದಂಡ

ಮಂಗಳೂರಿನಲ್ಲಿ ಈಗಾಗಲೇ ಹಲವು ಬಾರಿ ಮಳೆಯಾಗಿದ್ದು, ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಪ್ರಭಾವದಿಂದ ಕರವಾಳಿಯಲ್ಲಿ ಕಡಲಿನ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಭಾರೀ ಮಳೆ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ರೈಲು ಮಾರ್ಗ ಬದಲಾಯಿಸಲಾಗಿದೆ.

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ