ರಾಜ್ಯಾಂಗ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಬದಲಾದ ಕೇಂದ್ರ : ಮಹದೇವಪ್ಪ

Published : Jan 14, 2024, 12:17 PM IST
 ರಾಜ್ಯಾಂಗ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಬದಲಾದ ಕೇಂದ್ರ  : ಮಹದೇವಪ್ಪ

ಸಾರಾಂಶ

ರಾಜ್ಯಾಂಗ ಮಾರ್ಗದ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಕೇಂದ್ರ ಸರ್ಕಾರವು ಬದಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

  ಮೈಸೂರು :  ರಾಜ್ಯಾಂಗ ಮಾರ್ಗದ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಕೇಂದ್ರ ಸರ್ಕಾರವು ಬದಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

ಸಂವಿಧಾನದ ಆಶಯಕ್ಕೆ ಪೂರಕವಾಗಿ ರಾಜ್ಯಾಂಗ ಬದ್ಧವಾಗಿ ಆಡಳಿತ ನಡೆಸಬೇಕಾದ ಕೇಂದ್ರ ಸರ್ಕಾರವು, ಧಾರ್ಮಿಕ ಸಂಸ್ಥೆಯೊಂದರ ಆಡಳಿತ ಮಂಡಳಿಯಾಗಿ ಬದಲಾಗಿರುವುದು ಸಂವಿಧಾನ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಮೌಲ್ಯವನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವದ ಆಶಯದ ವಿರುದ್ಧದ ನಡೆಯಾಗಿದೆ ಎಂದು ಅವರು ಖಂಡಿಸಿದ್ದಾರೆ.

ಅತಿರೇಕದ ಧಾರ್ಮಿಕತೆಯನ್ನು ಆಚರಿಸುತ್ತಿರುವ ಸರ್ಕಾರವು ರಾಜ್ಯಾಂಗಬದ್ಧ ವ್ಯವಸ್ಥೆಯನ್ನು ಅರಿಯುವಲ್ಲಿ ಸಂಪೂರ್ಣ ಸೋತಿದೆ. ಧಾರ್ಮಿಕತೆ ಎಂಬುದು ವ್ಯಕ್ತಿಯೋರ್ವನ ಐಚ್ಛಿಕ ವಿಷಯವಾಗಿದೆ. ಈ ಕಾರಣಕ್ಕಾಗಿಯೇ ಕೆಲವರು ಮಂದಿರಗಳಿಗೆ ಹೋಗುತ್ತಾರೆ, ಇನ್ನೂ ಕೆಲವರು ಮಸೀದಿಗೆ, ಮತ್ತೆ ಕೆಲವರು ಚರ್ಚ್, ಬೌದ್ಧ ಸ್ಥೂಪಗಳಿಗೆ ತೆರಳುತ್ತಾರೆ. ಇತ್ತೀಚಿಗೆ ಬಾಬಾ ಸಾಹೇಬರ ದೀಕ್ಷಾಭೂಮಿಗೂ ಹೆಚ್ಚಿನ ಜನರು ತೆರಳುತ್ತಿರುವುದನ್ನು ನಾವು ಕಾಣಬಹುದು ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಒಬ್ಬರ ಐಚ್ಛಿಕ ವಿಷಯವಾದ ಧಾರ್ಮಿಕತೆಯನ್ನು ರಾಜಕೀಯ ಪರಿಧಿಯ ಒಳಗೆ ತಂದು, ಧರ್ಮವನ್ನೂ ರಾಜಕೀಯದ ಲಾಭಕ್ಕಾಗಿ ಬಳಸಿಕೊಳ್ಳುವ ಇವರ ಸಂವಿಧಾನ ವಿರೋಧಿ ಕೆಲಸವನ್ನು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಎಲ್ಲರೂ ವಿರೋಧಿಸಬೇಕು. ಚುನಾವಣೆಗಳು ಅಭಿವೃದ್ಧಿ ಮತ್ತು ಜನಪರತೆಯ ಆಧಾರದಲ್ಲಿ ನಡೆಯಬೇಕೇ ವಿನಃ ಧಾರ್ಮಿಕತೆಯ ಮೇಲಲ್ಲ ಎಂದು ಅವರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು