ಡಿಕೆ ಸಹೋ​ದ​ರ​ರ ವಿರುದ್ಧ ಮತಾಂತರದ ಗಂಭೀರ ಆರೋಪ

By Kannadaprabha NewsFirst Published Jan 12, 2020, 10:08 AM IST
Highlights

ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ನೂರಾರು ಕುಟುಂಬಗಳನ್ನು ಮತಾಂತರ ಮಾಡುತ್ತಿದ್ದಾರೆಂದಯ ಆರೋಪಿಸಲಾಗಿದೆ. 

ರಾಮನಗರ [ಜ.12]:  ಮಾಜಿ ಸಚಿವ ಡಿ.ಕೆ.​ ಶಿ​ವ​ಕು​ಮಾರ್‌ ಹಾಗೂ ಸಂಸ​ದ ಡಿ.ಕೆ.​ ಸು​ರೇಶ್‌ ಅವರು ಭೂಮಿ ಆಸೆ ತೋರಿಸಿ ನಲ್ಲ​ಹ​ಳ್ಳಿ​ಯ​ಲ್ಲಿನ ನೂರಾರು ಹಿಂದು ಕುಟುಂಬ​ಗ​ಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತ​ರ​ಗೊ​ಳಿ​ಸಿ​ದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್ ನಾರಾ​ಯ​ಣ​ಗೌಡ ಆರೋಪ ಮಾಡಿ​ದ್ದಾರೆ.

ನಗ​ರದ ಬಿಜೆಪಿ ಕಚೇ​ರಿ​ಯಲ್ಲಿ  ಸುದ್ದಿ​ಗೋ​ಷ್ಠಿ​ಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತ​ರ​ಗೊಂಡ ಕುಟುಂಬ​ಗ​ಳಿಗೆ ಭೂಮಿ ಮಂಜೂ​ರಾ​ಗಿ​ರುವ ದಾಖ​ಲೆ​ಗ​ಳನ್ನು ಬಿಡು​ಗ​ಡೆ​ಗೊ​ಳಿಸಿದ ಅವರು, ಏಸು​ಕ್ರಿ​ಸ್ತನ ಪ್ರತಿಮೆ ಸ್ಥಾಪಿ​ಸಲು ಉದ್ದೇ​ಶಿಸಿ​ರುವ ಕಪಾಲ ಬೆಟ್ಟಕನ​ಕ​ಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ ನಲ್ಲ​ಹ​ಳ್ಳಿ ಗ್ರಾಮ ಪಂಚಾ​ಯಿತಿ ವ್ಯಾಪ್ತಿಯಲ್ಲಿದೆ. ಈ ಭಾಗ​ದಲ್ಲಿ ಮತಾಂತರ ನಿರಂತ​ರ​ವಾಗಿ ನಡೆ​ಯು​ತ್ತಿದೆ ಎಂದರು.

ದಶಕಗಳಿಂದ ಬಗರ್‌ಹುಕುಂ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿದವರಿಗೆ ಭೂಮಿ ಮಂಜೂರು ಆಗಿಲ್ಲ. ಆದರೆ , ನಲ್ಲಹಳ್ಳಿಯಲ್ಲಿ ಕ್ರಿಶ್ಚಯನ್ನರಾಗಿ ಮತಾಂತರಗೊಂಡ ನೂರಾರು ಕುಟುಂಬಗಳಿಗೆ ಎಕರೆಗಟ್ಟಲೆ ಭೂಮಿ ಹೇಗೆ ಮಂಜೂರಾಯಿತು ಎಂದು ಪ್ರಶ್ನಿ​ಸಿ​ದರು.

ಮತಾಂತರವಾಗಿ​ರುವ ಕುಟುಂಬಕ್ಕೆ ಭೂಮಿಯನ್ನು ಪರ​ಭಾರೆ ಮಾಡಿ​ರುವ ತಮ್ಮ ಆರೋಪ ಸಮರ್ಥಿಸಿಕೊಳ್ಳಲು ಅಶ್ವತ್‌್ಥ ನಾರಾ​ಯ​ಣ​ಗೌ​ಡರು, ವಿಕ್ಟೋರಿಯಾ ರಾಣಿ ಡಾಟರ್‌ ಆಫ್‌ ಪುಟ್ಟಸ್ವಾಮಾಚಾರ್‌ ಉದಾಹರಣೆ ನೀಡಿದರು. ಇದು ಮತಾಂತರಗೊಂಡಿರುವ ಕುಟುಂಬ ಎಂಬುದು ಸ್ಪಷ್ಟವಾಗಿದೆ. ಇಂತಹ ಅನೇಕ ಉದಾಹರಣೆಗಳಿವೆ ಎಂದು ಆರ್‌ಟಿಸಿ ಪತ್ರಗಳನ್ನು ಪ್ರದರ್ಶಿಸಿದರು.

ಹಾರೋಬೆಲೆ ಗ್ರಾಮದ ಸುತ್ತಮುತ್ತ ನೂರಾರು ಎಕರೆ ಗೋಮಾಳವಿದೆ. ಆ ಗ್ರಾಮಗಳಲ್ಲಿ ವಾಸಿಸುವ ಹಿಂದುಳಿದ ವರ್ಗಗಳು, ಒಕ್ಕಲಿಗ ಕುಟುಂಬಗಳಿಗೂ ಭೂಮಿ ಕೊಡಿಸದೆ, ಕೇವಲ ಒಂದು ಧರ್ಮೀಯರಿಗೆ ಮಾತ್ರ ಭೂಮಿ ಮಂಜೂರು ಮಾಡಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.

ನಲ್ಲಹಳ್ಳಿ ಗ್ರಾಮದಲ್ಲಿ ಕ್ರಿಶ್ಚಿಯನ್‌ ಮತಕ್ಕೆ ಮತಾಂತರಗೊಂಡ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿವೆ. ಈ ಕುಟುಂಬಗಳಿಗೆ ಭೂಮಿ ಮಂಜೂರಾಗಿದೆ. ಮತಾಂತರಗೊಂಡರೆ ಭೂಮಿ ಮಂಜೂರಾಗುತ್ತದೆ ಎಂಬ ಆಮೀಷವನ್ನು ಒಡ್ಡಲಾಗಿದೆ. ಈಗಾಗಲೇ ಅಲ್ಲಿ ಒಕ್ಕಲಿಗರು ಸೇರಿದಂತೆ ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ಕುಟುಂಬಗಳಿವೆ. ಈ ಎಲ್ಲಾ ವಿಚಾರಗಳು ತಿಳಿ​ದಿ​ದ್ದರೂ ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್‌ ಅವರು ಮತಾಂತರಕ್ಕೆ ಕಾರಣರಾಗಿ​ದ್ದಾರೆ ಎಂದು ಟೀಕಿ​ಸಿ​ದರು.

ಡಿಕೆಶಿಗೆ ಪ್ರಭಾವಿ ನಾಯಕ ಅಡ್ಡಗಾಲು: KPCC ಅಧ್ಯಕ್ಷ ಹುದ್ದೆ 3ನೇ ವ್ಯಕ್ತಿ ಪಾಲು..?.

ಮುನೇಶ್ವರ ಬೆಟ್ಟದಲ್ಲಿ (ಕಪಾಲ ಬೆಟ್ಟ) ಹಾರೋಬೆಲೆ ಕಪಾಲ ಬೆಟ್ಟಅಭಿವೃದ್ದಿ ಟ್ರಸ್ಟ್‌ಗೆ ಒಂದು ಎಕರೆಗೆ ಕೇವಲ 10 ಲಕ್ಷ ರುಪಾ​ಯಿಗೆ ಕೊಡಲಾಗಿದೆ. ಇದರ ಮಾರುಕಟ್ಟೆಬೆಲೆ ಇನ್ನು ಹೆಚ್ಚಾಗಿದೆ. ಆದರೂ ಅತಿ ಕಡಿಮೆ ಬೆಲೆಗೆ ಟ್ರಸ್ಟ್‌ಗೆ ಕೊಡಲಾಗಿದೆ. ತಾವು 10 ಗುಂಟೆಗೆ 10 ಲಕ್ಷ ರು. ಕೊಡಲು ಸಿದ್ದ, ಕೊಡಿಸಿ ಎಂದು ಅವರು ಡಿಕೆ ಸಹೋದರರಿಗೆ ಸವಾಲು ಹಾಕಿ​ದರು.

ಸದರಿ ಭೂಮಿಗೆ ಎಚ್‌ಡಿಎಫ್‌ಸಿ ಬ್ಯಾಂಕು ಭೂಮಿ ಅಡ ಇಟ್ಟುಕೊಂಡು 7 ಲಕ್ಷ ರುಪಾಯಿ ಸಾಲ ಮಂಜೂರು ಮಾಡಿದೆ. ಎಲ್ಲಾ ಬ್ಯಾಂಕುಗಳು ಮಾರುಕಟ್ಟೆಬೆಲೆಯ ಕಾಲು ಭಾಗ ಮಾತ್ರ ಸಾಲ ನೀಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂದರೆ, ಇಲ್ಲಿನ ಭೂಮಿಯ ಬೆಲೆ ಎಷ್ಟಿರಬಹುದು ಎಂಬುದನ್ನು ಬ್ಯಾಂಕ್‌ನ ದಾಖಲೆಗಳೆ ಸ್ಪಷ್ಟಪಡಿಸುತ್ತಿವೆ ಎಂದರು.

ಪೊಲೀ​ಸರು ಕಿಸ್‌ ಕೊಡ​ಬೇ​ಕಿತ್ತೆ:

ಮಂಗಳೂರಿನಲ್ಲಿ ನಡೆದ ಗಲಭೆಗಳ ವಿಚಾರದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು, ಮೊದಲ ಚಲನಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದರು. ಈಗ ಸಿಡಿ ಬಿಡುಗಡೆ ಮಾಡಿದ್ದಾರೆ. ಸಮಾ​ಜ​ಘಾ​ತುಕ ಶಕ್ತಿ​ಗ​ಳ ಮೇಲೆ ಗೋಲಿ​ಬಾರ್‌ ಮಾಡದೆ ಅವ​ರನ್ನು ಕರೆದು ಪೊಲೀಸರು ಕಿಸ್‌ ಕೊಡ​ಬೇ​ಕಿತ್ತೆ ಎಂದು ಪ್ರಶ್ನಿ​ಸಿ​ದ​ರು.

ಕುಮಾರಸ್ವಾಮಿ ಅವರು ಮುಖ್ಯ​ಮಂತ್ರಿ ಆಗಿದ್ದ ವೇಳೆ ಮದ್ದೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರೊಬ್ಬರನ್ನು ಕೊಲೆ ಮಾಡಿದ ಆರೋಪಿಯನ್ನು ಎನ್‌ಕೌಂಟರ್‌ ಮಾಡಿ ಮುಗಿಸಿ ಎಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದು ಏಕೆ? ಕುಮಾರಸ್ವಾಮಿ ಅವರು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು ಎಂದರು.

ಸುದ್ದಿ​ಗೋ​ಷ್ಠಿ​ಯಲ್ಲಿ ಬಿಜೆಪಿ ಮುಖಂಡ​ರಾದ ಎಸ್‌.ಆರ್‌. ನಾಗರಾಜ್‌, ಜಿ.ವಿ. ಪದ್ಮನಾಭ, ಪ್ರವೀಣ್‌ ಗೌಡ, ಮಂಜು, ಕುಮಾರ್‌, ರುದ್ರದೇವರು ಇದ್ದರು.

click me!