ಮದ್ಯ ಕದಿಯಲು ಬಾರ್‌ಗೆ ನುಗ್ಗಿದ ಭೂಪ: ಕಂಠಪೂರ್ತಿ ಕುಡಿದು ನಿದ್ರೆಗೆ ಜಾರಿದ ಕುಡುಕ..!

Kannadaprabha News   | Asianet News
Published : Apr 17, 2020, 09:18 AM ISTUpdated : Apr 17, 2020, 11:21 AM IST
ಮದ್ಯ ಕದಿಯಲು ಬಾರ್‌ಗೆ ನುಗ್ಗಿದ ಭೂಪ: ಕಂಠಪೂರ್ತಿ ಕುಡಿದು ನಿದ್ರೆಗೆ ಜಾರಿದ ಕುಡುಕ..!

ಸಾರಾಂಶ

ಕಳ್ಳತನ ಮಾಡಲು ಬಾರ್‌ಗೆ ನುಗ್ಗಿದ ವ್ಯಕ್ತಿ| ಬಾರ್‌ನಲ್ಲೇ ಕಂಠ ಪೂರ್ತಿ ಕುಡಿದು ಅಲ್ಲೆ ನಿದ್ರೆ ಮಾಡಿದ ವ್ಯಕ್ತಿ| ಆರೋ​ಪಿಯ ವಿರುದ್ಧ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲು|

ಹಾಸನ(ಏ.17): ಮದ್ಯ ಕಳವು ಮಾಡಲು ಹೋದ ವ್ಯಕ್ತಿಯೊಬ್ಬ ಮದ್ಯದ ಬಾಟಲಿಗಳನ್ನು ಕಂಡು ಅಲ್ಲೇ ಘಟಘಟನೆ ಕುಡಿದು ಗಡದ್‌ ನಿದ್ರೆಗೆ ಜಾರಿ ಸಿಕ್ಕಿ ಬಿದ್ದ ಘಟನೆ ನಗರದ ಸಂತೆ ಪೇಟೆಯಲ್ಲಿ ನಡೆದಿದೆ.

"
ಬುಧವಾರ ಮಧ್ಯರಾತ್ರಿ ಕಳ್ಳತನ ಮಾಡಲು ಬಾರ್‌ಗೆ ನುಸುಳಿ ತನ್ನಾಸೆಯನ್ನು ಬಾರ್‌ನಿಂದ ದೂರ ಹೋಗುವವರೆಗಾದರೂ ತಡೆಯಲಾಗದೇ ಕಂಠ ಪೂರ್ತಿ ಕುಡಿದು ಅಲ್ಲೆ ನಿದ್ರೆ ಮಾಡಿ ಗುರುವಾರ ಬೆಳಗ್ಗೆ ನಗ​ರದ ವಲ್ಲಭಾಯಿ ರಸ್ತೆಯ ವಾಸಿಯಾ​ದ ರೌಡಿ ಶೀಟರ್‌ ರೋಹಿತ್‌ ಅಲಿಯಾಸ್‌ ಕೋಕಿ ಎಂಬಾತ ಬಂಧಿತ ಆರೋಪಿಯಾಗಿ​ದ್ದಾನೆ.

ರೋಹಿತ್‌ ಪ್ರಿಯ​ದ​ರ್ಶಿನಿ ರಾತ್ರಿ ಬಾರ್‌ನ ಹೆಂಚು ತೆಗೆದು ಮದ್ಯವನ್ನು ಕಳವು ಮಾಡುವ ಸಲು​ವಾಗಿ ಒಳಕ್ಕೆ ಹೋದ. ಆದರೆ ಮದ್ಯ​ದ ಬಾಟಲಿ ಕಂಡಾ​ಕ್ಷಣ ಆತ ಕಂಠ​ಪೂರ್ತಿ ಮದ್ಯ ಸೇವಿ​ಸಿ​ದ್ದಾನೆ. ನಂತರ ಮದ್ಯದ ಎರಡು ಬಾಕ್ಸ್‌​ಗ​ಳನ್ನು ಹೊತ್ತೊ​ಯ್ಯಲು ಪ್ರಯ​ತ್ನಿ​ಸಿ​ದ್ದಾ​ನೆ. ಭರ್ಜರಿಯಾಗಿ ಕುಡಿದಿದ್ದರಿಂದ ಅದು ಸಾಧ್ಯವಾಗಿಲ್ಲ. ಆದರೆ ಮದ್ಯದ ನಶೆ ಏರಿದ್ದ ಕಾರಣ ನಿದ್ದೆಗೆ ಜಾರಿ ಹೋಗಿ​ದ್ದಾನೆ. ಆತ ಕಣ್ಣು ಬಿಟ್ಟು ನೋಡು​ವ​ಷ್ಟ​ರಲ್ಲಿ ಬೆಳಗ್ಗೆ ಆಗಿದ್ದು, ಬಾರ್‌ ಮಾಲೀ​ಕ​ನಿಗೆ ಸಿಕ್ಕಿ ಬಿದ್ದಿ​ದ್ದಾನೆ.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಆರೋ​ಪಿಯ ವಿರುದ್ಧ ನಗ​ರದ ಪೆನ್‌​ಷನ್‌ ಮೊಹಲ್ಲಾ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದೆ.
 

PREV
click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!