ಸೀಡಿ ಸಂತ್ರಸ್ತೆಗೆ ತಂದೆಯ ಊರಲ್ಲಿ ಬೆಂಬಲ

Kannadaprabha News   | Asianet News
Published : Mar 15, 2021, 09:13 AM ISTUpdated : Mar 15, 2021, 09:56 AM IST
ಸೀಡಿ ಸಂತ್ರಸ್ತೆಗೆ ತಂದೆಯ ಊರಲ್ಲಿ ಬೆಂಬಲ

ಸಾರಾಂಶ

ಸಿಡಿ ಸಂತ್ರಸ್ತೆ  ಯುವತಿಗೆ ಆಕೆಯ ತಂದೆಯ ಊರಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ಜನರು ನಾವು ನಿಮ್ಮ ಜೊತೆಗಿದ್ದೇವೆ ಎಂದಿದ್ದಾರೆ. 

ಬಾಗಲಕೋಟೆ (ಮಾ.15): ಮಾಜಿ ಸಚಿವರ ಸಿ.ಡಿ.ಪ್ರಕರಣದ ಸಂತ್ರಸ್ತ ಯುವತಿ ತನಗೆ ರಕ್ಷಣೆ ಇಲ್ಲ ಎಂದು ವಿಡಿಯೋ ಹೇಳಿಕೆ ನೀಡಿದ ಬೆನ್ನಲ್ಲೇ ಆಕೆಯ ತಂದೆಯ ಊರಾದ ಗುಡೂರ ಗ್ರಾಮದಲ್ಲಿ ಗ್ರಾಮಸ್ಥರಿಂದ ಬೆಂಬಲ ವ್ಯಕ್ತವಾಗಿದೆ.

"

ಯುವತಿ ಮತ್ತು ಆಕೆಯ ಕುಟುಂಬಸ್ಥರು ಯಾವುದೇ ಕಾರಣಕ್ಕೂ ಜೀವಕ್ಕೆ ಏನೂ ಅಪಾಯ ಮಾಡಿಕೊಳ್ಳಬಾರದು. ಗುಡೂರ ಗ್ರಾಮಸ್ಥರು ನಿಮ್ಮ ಜತೆಗಿದ್ದೇವೆ. ಜೀವಕ್ಕೆ ತೊಂದರೆ ಮಾಡಿಕೊಂಡರೆ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ. ಏನಾದರೂ ಸಮಸ್ಯೆಯಾದರೆ ಗ್ರಾಮಸ್ಥರನ್ನು ಸಂಪರ್ಕಿಸಿ ಎಂದು ಸಾಮಾಜಿಕ ಕಾರ್ಯಕರ್ತೆ ಸಹನಾ ಅಂಗಡಿ ಹೇಳಿದ್ದಾರೆ.

ಸೀಡಿ ಯುವತಿ ಕಡೆಗೂ ಪತ್ತೆ: ಪ್ರಿಯತಮ ಕೊಟ್ಟ ಮಾಹಿತಿ ಆಧರಿಸಿ ಆಪರೇಷನ್‌!

ಗುಡೂರ ಗ್ರಾಮದಲ್ಲಿ ಸದ್ಯ ಯುವತಿಯ ಎಂಬತ್ತು ವರ್ಷದ ಅಜ್ಜಿ ಮಾತ್ರ ಇದ್ದಾರೆ. ಸಿ.ಡಿ.ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಒಮ್ಮೆ ಆಕೆಯ ಮನೆಗೆ ಹೋಗಿ ವಿಚಾರಣೆ ನಡೆಸಿದ್ದಾರೆ.

PREV
click me!

Recommended Stories

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಭಯ? ಗುಪ್ತಚರ ವರದಿಯಲ್ಲಿ ಶಾಕಿಂಗ್ ಮಾಹಿತಿ
Karnataka SIR: ಮುರಾ ಗ್ರಾಮ ಮರ, ಟ್ರೀ ಬರೆದು ಎಡವಟ್ಟು, ಎಸ್‌ಐಆರ್ ಕನ್ನಡಲ್ಲೇ ನಡೆಸಲು ಕರವೇ ಆಗ್ರಹ