ತುಮಕೂರು : ಹತ್ತು ಹಲವಾರು ಸಮಸ್ಯೆಗೆ ಸ್ಥಳದಲ್ಲೇ ಡಿಸಿಪರಿಹಾರ

Published : Oct 16, 2022, 04:14 AM IST
ತುಮಕೂರು : ಹತ್ತು ಹಲವಾರು ಸಮಸ್ಯೆಗೆ ಸ್ಥಳದಲ್ಲೇ ಡಿಸಿಪರಿಹಾರ

ಸಾರಾಂಶ

ವಿದ್ಯುತ್‌ ಇಲ್ಲದ ಹದಿನೆಂಟು ಮನೆಗಳಿಗೆ ವಿದ್ಯುತ್‌ ಭಾಗ್ಯ,.. ಒತ್ತುವರಿಯಾಗಿ ಮುಚ್ಚಿ ಹೋದ ನಕಾಶೆ ರಸ್ತೆಗಳು ಮುಕ್ತ... ಹೀಗೆ ಸಾರ್ವಜನಿಕರ ಹತ್ತು ಹಲವು ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸ್ಥಳದಲ್ಲಿಯೇ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

 ತುಮಕೂರು/ಪಾವಗಡ (ಅ.16): ವಿದ್ಯುತ್‌ ಇಲ್ಲದ ಹದಿನೆಂಟು ಮನೆಗಳಿಗೆ ವಿದ್ಯುತ್‌ ಭಾಗ್ಯ,.. ಒತ್ತುವರಿಯಾಗಿ ಮುಚ್ಚಿ ಹೋದ ನಕಾಶೆ ರಸ್ತೆಗಳು ಮುಕ್ತ... ಹೀಗೆ ಸಾರ್ವಜನಿಕರ ಹತ್ತು ಹಲವು ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸ್ಥಳದಲ್ಲಿಯೇ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಜಿಲ್ಲೆಯ ಪಾವಗಡದ ಕಸಬಾ ಹೋಬಳಿ ಗುಮ್ಮಗಟ್ಟಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ತುಮಕೂರು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸ್ಥಳೀಯರ ಕುಂದುಕೊರತೆಗಳನ್ನು ಸಮಾಧಾನದಿಂದ ಆಲಿಸುತ್ತಾ ಸ್ಥಳದಲ್ಲಿಯೇ ಬಗೆಹರಿಯಬಹುದಾದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಿದರು.

18 ಮನೆಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ ಎಂಬ ಅರ್ಜಿ ನೀಡಿದ ಮೂರ್ನಾಲ್ಕು ದಿನಗಳಲ್ಲಿ ಆ 18 ಮನೆಗಳಿಗೂ ವಿದ್ಯುತ್‌ ಸಂಪರ್ಕ ಒದಗಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ನಕಾಶೆ ರಸ್ತೆ ಒತ್ತುವರಿ ಬಗ್ಗೆ ಬಂದಿದ್ದ 4 ಪ್ರಕರಣಗಳನ್ನೂ ಒಂದು ವಾರದಲ್ಲಿ ಬಗೆಹರಿಸಲು ತಹಸೀಲ್ದಾರ್‌ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಇತ್ತೀಚೆಗೆ ಒಂದೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಸುಮಾರು ಎರಡು ಲಕ್ಷದಷ್ಟುಪೈಕಿ ಪಹಣಿಗಳಿದ್ದವು, ಅವುಗಳನ್ನು ಕಡಿಮೆಗೊಳಿಸಿ ಈಗ ಕೇವಲ 200ರಷ್ಟುಮಾತ್ರ ಉಳಿದಿವೆ. ಪಾವಗಡದಲ್ಲಿ ಒಂದು ಮಾತ್ರ ಉಳಿದಿದೆ ಎಂದು ವಿವರಿಸಿದರು.

3ನೇ ಕಲಂನಲ್ಲಿ ಭೂಮಿ ವಿಸ್ತೀರ್ಣ, 9ನೇ ಕಲಂನಲ್ಲಿ ಅನುಭವದಾರ, ಮಾಲೀಕರ ಹೆಸರು ಹಾಗೂ ವಿಸ್ತೀರ್ಣ ಹೊಂದಾಣಿಕೆ ಇರುತ್ತಿರಲಿಲ್ಲ. ಅಂತಹ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿದ್ದವು. ಅಂತಹ ಪ್ರಕರಣಗಳನ್ನು ಬಗೆ ಹರಿಸುವ ಕಾರ್ಯ ಭರದಿಂದ ಸಾಗಿದ್ದು, ಈಗ ಅಂತಹ ಪ್ರಕರಣಗಳು 6 ಸಾವಿರಕ್ಕಿಳಿದಿದೆ, ಕಾಲ ಕಾಲಕ್ಕೆ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ನಡೆಯಲಿದೆ. ಪಿಂಚಣಿಗೆ ಅರ್ಹರಿದ್ದಲ್ಲಿ 72 ಗಂಟೆಗಳಲ್ಲಿ ಮಂಜೂರು ಮಾಡಲಾಗುತ್ತಿದೆ, ಯೋಜನೆ ಆರಂಭವಾಗಿ ಮೂರ್ನಾಲ್ಕು ತಿಂಗಳಾಗಿದೆ, ಆಗಿನಿಂದ ಇದೂವರೆಗೆ 7000ಗಳಷ್ಟುಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ ಎಂದ ಜಿಲ್ಲಾಧಿಕಾರಿಗಳು, ಸ್ಮಶಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ 2500ಕ್ಕೂ ಹೆಚ್ಚು ಗ್ರಾಮಗಳಿವೆ. ಅದರಲ್ಲಿ ಎಲ್ಲಾ ಗ್ರಾಮಗಳಿಗೂ ಸ್ಮಶಾನಗಳನ್ನು ಒದಗಿಸುವ ಕೆಲಸವಾಗಿದೆ ಎಂದರು.

ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್‌ ಸಿಇಓ ವಿದ್ಯಾಕುಮಾರಿ, ತಹಸೀಲ್ದಾರ್‌ ವರದರಾಜು ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.

ಕೋಟ...1

ಪಾವಗಡ ತಾಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ 33 ಗ್ರಾಮ ಪಂಚಾಯಿತಿಗಳಿಗೆ ಎಫ್‌ಡಬ್ಲ್ಯೂಎಂ ಸೈಟ್‌ (ಒಣ ಕಸ ಸಂಗ್ರಹಕ್ಕೆ ಜಾಗ) ನೀಡಲಾಗಿದೆ. ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರ  ದೊಂದಿಗೆ ಮಾಡಲಾಗಿದೆ. ಸೋಲಾರ್‌ ಪಾರ್ಕ್ನಿಂದ ವಿಶ್ವದ ಗಮನ ಸೆಳೆದಿರುವ ಪಾವಗಡ ತಾಲೂಕಿನ ಅಭಿವೃದ್ಧಿಗೆ ನೆರವು ಮತ್ತು ಸಹಕಾರ ನೀಡಲು ಸರ್ಕಾರದಲ್ಲಿ ಮನವಿ ಸಲ್ಲಿಸಲಾಗುವುದು.

ವೈ.ಎಸ್‌. ಪಾಟೀಲ ಜಿಲ್ಲಾಧಿಕಾರಿ

 ಸುಮಾರು 50 ಕೋಟಿ ರು. ವೆಚ್ಚದಲ್ಲಿ ಪಾವಗಡ ತಾಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಟೆಂಡರ್‌ ಕರೆಯಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ ಯಲ್ಲಿ 16 ಕೋಟಿ ರು. ಕಾಮಗಾರಿ ಆಗಿದೆ, ಸಣ್ಣ ನೀರಾವರಿ ಯೋಜನೆಯಡಿ ಐದು ಕೋಟಿ ರು. ವೆಚ್ಚದಲ್ಲಿ ಚೆಕ್‌ ಡ್ಯಾಂ ಗಳನ್ನು ಮಾಡಲಾಗುವುದು. ಈ ಎಲ್ಲಾ ಕಾಮಗಾರಿಗಳು ಶೀಘ್ರದಲ್ಲೇ ಆರಂಭಗೊಳ್ಳಲಿವೆ.

ವೆಂಕಟರಮಣಪ್ಪ ಶಾಸಕ

2ಕ್ಕೆ...ಲೀಡ....ಪಾವಗಡ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧ: ಡಿಸಿ

ಪಾವಗಡದ ಗುಮ್ಮಗಟ್ಟದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ

ಹತ್ತು ಹಲವಾರು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು