ಕೂಡ್ಲಿಗಿ: ಮುಸ್ಲಿಂ ಯುವಕನಿಂದ ರಾಮಮಂದಿರಕ್ಕೆ ದೇಣಿಗೆ

Kannadaprabha News   | Asianet News
Published : Jan 18, 2021, 11:00 AM IST
ಕೂಡ್ಲಿಗಿ: ಮುಸ್ಲಿಂ ಯುವಕನಿಂದ ರಾಮಮಂದಿರಕ್ಕೆ ದೇಣಿಗೆ

ಸಾರಾಂಶ

ಬಂಗಾರು ಹನುಮಂತು ನೇತೃತ್ವದಲ್ಲಿ ದೇಣಿಗೆ ಸಂಗ್ರಹ| 5 ಸಾವಿರ ದೇಣಿಗೆ ನೀಡುವುದರ ಮೂಲಕ ಹಿಂದೂ, ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಮುಸ್ಲಿಂ ಯುವಕ ಜುಬೇರ್‌| ರಾಮ ಬೇರೆ ಅಲ್ಲ, ಅಲ್ಲಾ ಬೇರೆ ಅಲ್ಲ ಎಂದು ಈ ಯುವಕ ಧಾರ್ಮಿಕ ಸೌಹಾರ್ದ ಮೆರೆದ ಯುವಕ

ಕೂಡ್ಲಿಗಿ(ಜ.18): ಪಟ್ಟಣದಲ್ಲಿ ಭಾನುವಾರ ರಾಮಮಂದಿರ ನಿರ್ಮಾಣಕ್ಕೆ ದೇಣಿಕೆ ಸಂಗ್ರಹ ಕಾರ್ಯ ಕೂಡ್ಲಿಗಿ ತಾಲೂಕು ಸಂಯೋಜಕ ಬಂಗಾರು ಹನುಮಂತು ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೂಡ್ಲಿಗಿಯ ಮುಸ್ಲಿಂ ಯುವಕ ಜುಬೇರ್‌ 5 ಸಾವಿರ ದೇಣಿಗೆ ನೀಡುವುದರ ಮೂಲಕ ಹಿಂದೂ, ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. 

ದೇವರ ಹೆಸರಿನಲ್ಲಿ, ಜಾತಿ-ಧರ್ಮಗಳ ಹೆಸರಿನಲ್ಲಿ ಕೋಮುಗಲಭೆಗಳು ನಡೆಯುತ್ತಿರುವ ಇಂದಿನ ದಿನಗಳಲ್ಲಿ ರಾಮ ಬೇರೆ ಅಲ್ಲ, ಅಲ್ಲಾ ಬೇರೆ ಅಲ್ಲ ಎಂದು ಈ ಯುವಕ ಧಾರ್ಮಿಕ ಸೌಹಾರ್ದ ಮೆರೆದಿದ್ದಾರೆ. 

'ಸಾವಿರಾರು ಮರಾಠಿಗರ ಹೆಣ ನೋಡ್ಬೇಕಾಗುತ್ತೆ ಹುಷಾರ್'

ಆನಂತರ ಪಟ್ಟಣದ ವಿವಿಧ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಬಿಜೆಪಿ ಮುಖಂಡರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿಯ ಬಿಜೆಪಿ ಹಿರಿಯ ಮುಖಂಡರಾದ ಕೆ.ಎಚ್‌. ವೀರನಗೌಡ್ರು, ಮಂಜುನಾಥ, ಕೊಂಡಯ್ಯರ ರಾಘವೇಂದ್ರ, ಲಿಂಗರಾಜು, ಸತೀಶ್‌, ಗುನ್ನಳ್ಳಿ ನಾರಾಯಣ, ಗುನ್ನಳ್ಳಿ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ