ಬಾಗಲಕೋಟೆ: ಮುಧೋಳ ನಗರಸಭಾ ಅಧ್ಯಕ್ಷ ಕೋವಿಡ್‌ಗೆ ಬಲಿ

Suvarna News   | Asianet News
Published : May 23, 2021, 01:21 PM IST
ಬಾಗಲಕೋಟೆ: ಮುಧೋಳ ನಗರಸಭಾ ಅಧ್ಯಕ್ಷ ಕೋವಿಡ್‌ಗೆ ಬಲಿ

ಸಾರಾಂಶ

* ಮುಧೋಳ ನಗರಸಭಾ ಅಧ್ಯಕ್ಷ ಸಿದ್ದನಾಥ ಮಾನೆ ಕೋವಿಡ್‌ಗೆ ಬಲಿ * 5 ದಿನಗಳ ಹಿಂದೆಯಷ್ಟೇ ಕೋವಿಡ್‌ನಿಂದಲೇ ಮೃತಪಟ್ಟಿದ್ದ ಸಿದ್ದನಾಥ ಅವರ ತಾಯಿ * ಸಿದ್ದನಾಥ ಸಾವಿಗೆ ಡಿಸಿಎಂ ಗೋವಿಂದ ಕಾರಜೋಳ ಸಂತಾಪ

ಬಾಗಲಕೋಟೆ(ಮೇ.23): ಜಿಲ್ಲೆಯ ಮುಧೋಳ ನಗರಸಭಾ ಅಧ್ಯಕ್ಷ ಕೋವಿಡ್‌ಗೆ ಬಲಿಯಾದ ಘಟನೆ ಇಂದು (ಭಾನುವಾರ) ಬೆಳಗಾವಿಯಲ್ಲಿ ನಡೆದಿದೆ. ಸಿದ್ದನಾಥ ಮಾನೆ (34) ಎಂಬುವರೇ ಕೊರೋನಾಗೆ ಬಲಿಯಾದವರಾಗಿದ್ದಾರೆ.

ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿದ್ದನಾಥ ಮಾನೆ ಅವರನ್ನ ಬೆಳಗಾವಿಯ ಖಾಸಗಿ ಆಸಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಸಿದ್ದನಾಥ ಮಾನೆ ಮೃತಪಟ್ಟಿದ್ದಾರೆ. ಕಳೆದ 5 ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಕೋವಿಡ್‌ನಿಂದಲೇ ಸಿದ್ದನಾಥ ತಾಯಿ ಸಹ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

"

ಗುಲಬರ್ಗಾ ವಿವಿ ಮಾಜಿ ಕುಲಪತಿ ಪ್ರೊ. ಮೇಲಕೇರಿ ಕೊರೋನಾದಿಂದ ನಿಧನ

ಸಿದ್ದನಾಥ ಸಾವಿಗೆ ಮುಧೋಳ ಶಾಸಕ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶೋಕ ವ್ಯಕ್ತಪಡಿಸಿ, ಶೃದ್ದಾಂಜಲಿ ಸಲ್ಲಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು