ಪಶುವೈದ್ಯರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಚಿವ ನಾಡಗೌಡ

Published : Dec 09, 2018, 04:49 PM IST
ಪಶುವೈದ್ಯರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಚಿವ ನಾಡಗೌಡ

ಸಾರಾಂಶ

ರಾಜ್ಯದ ಕೆಲ ಪಶುವೈದ್ಯರು ತಮ್ಮ ವೈದ್ಯ ವೃತ್ತಿ ಬಿಟ್ಟು ಬೇರೆ ಇಲಾಖೆಗಳ ಸೇವೆಗೆ ನಿಯೋಜನೆಗೊಂಡಿದ್ದಾರೆ. ಇದ್ರಿಂದ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಗರಂ ಆಗಿದ್ದಾರೆ.

ಗದಗ, [ಡಿ.09]: ಪಶುವೈದ್ಯರು ಕೂಡಲೇ ಮಾತೃ ಇಲಾಖೆಗೆ ಹಾಜರಾಗದಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗದಗನಲ್ಲಿ ಇಂದು [ಭಾನುವಾರ] ಸುದ್ದಿಗಾರೊಂದಿಗೆ ಮಾತನಾಡಿದ ಅವರು,  ಕೆಲ ಪಶು ವೈದ್ಯರು ಬೇರೆ ಇಲಾಖೆಗೆ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಮಾತೃ ಇಲಾಖೆಗೆ ಹಾಜರಾಗುವಂತೆ ಆದೇಶ ಮಾಡಲಾಗಿದೆ ಇನ್ನೂ ಅನೇಕ ವೈದ್ಯರು ಪಶು ಸಂಗೋಪನೆ ಇಲಾಖೆಗೆ ಹಾಜರಾಗಿಲ್ಲ.

ಸಾಕಷ್ಟು ಪಶು ವೈದ್ಯರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕರಾಗಿ ಸೇವೆ ಮಾಡುತ್ತಿದ್ದಾರೆ. ಕೂಡಲೇ ಪಶು ಸಂಗೋಪನೆ ಇಲಾಖೆಗೆ ಹಾಜರಾಗದಿದ್ರೆ‌ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಕೆಲ ಪಶುವೈದ್ಯರು ತಮ್ಮ ವೈದ್ಯ ವೃತ್ತಿ ಬಿಟ್ಟು ಬೇರೆ ಇಲಾಖೆಗಳ ಸೇವೆಗೆ ನಿಯೋಜನೆಗೊಂಡಿದ್ದಾರೆ. ಇದ್ರಿಂದ ಸಚಿವ ವೆಂಕಟರಾವ್ ನಾಡಗೌಡ ಗರಂ ಆಗಿದ್ದಾರೆ.

PREV
click me!

Recommended Stories

ಬೇಸಿಗೆ ಸೆಖೆಗೆ ಮನೆ ಹೊರಗೆ ಮಲಗಿದ್ದವರ ಮೇಲೆ 'ಸೈಕೋ' ದಾಳಿ: ಆರು ಜನರ ತಲೆ ಒಡೆದ ಮಾನಸಿಕ ಅಸ್ವಸ್ಥ
Gadag printing industry crisis ಮಧ್ಯಪ್ರಾಚ್ಯ ಯುದ್ಧಕ್ಕೆ ಮುದ್ರಣ ಕಾಶಿ ಗದಗ ತತ್ತರ