ನನ್ನೆದುರೇ ಗೋಮಾಂಸ ತಿನ್ನಲಿ ನೋಡೋ​ಣ: ಸಿದ್ದರಾಮಯ್ಯಗೆ ಸವಾಲು

By Kannadaprabha NewsFirst Published Feb 17, 2021, 9:27 AM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಎದುರೇ ಗೋ ಮಾಂಸ ಸೇವಿಸಲಿ ಎಂದು ಸಚಿವ ಪ್ರಭು ಚವಾಣ್ ಸವಾಲು ಹಾಕಿದ್ದಾರೆ. 

ಮಡಿಕೇರಿ (ಫೆ.17): ‘ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಅವರು ಬೇಕಾದರೆ ಗೋಮಾಂಸ ತಿನ್ನಲಿ. ನನ್ನ ಎದುರೇ ತಿನ್ನಲಿ ನೋಡೋಣ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್‌ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗೋಮಾಂಸ ತಿನ್ತೀನಿ, ತಿನ್ತೀನಿ ಅನ್ನೋದಲ್ಲ, ಅವ​ರು ತಿಂದು ತೋರಿ​ಸ​ಲಿ. ಅವರ ಮನೆಯಲ್ಲೂ ಗೋವುಗಳಿವೆ. ದೀಪಾ​ವಳಿ, ಯುಗಾ​ದಿಗೆ ಸಿದ್ದರಾಮಯ್ಯ ಮತ್ತು ಎಚ್‌.​ಡಿ. ಕುಮಾರಸ್ವಾಮಿ ಎಲ್ಲರೂ ಗೋ ಪೂಜೆ ಮಾಡುತ್ತಾರೆ. ಆದರೂ ಅವರು ರಾಜಕೀಯ ಕಾರಣಕ್ಕೆ ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡೋದು ವಿರೋಧ ಪಕ್ಷದ ಕೆಲಸ. ಆದರೆ, ನಾವು ಮಾತ್ರ ಗೋರಕ್ಷಣೆ ಮಾಡಿಯೇ ಮಾಡುತ್ತೇವೆ ಎಂದ​ರು.

'ಗೋಮಾಂಸ ತಿನ್ನುತ್ತೇನೆ ಎಂದ ಸಿದ್ದರಾಮಯ್ಯಗೆ ಶಿಕ್ಷೆಯಾಗಲಿ' ...

‘ನನಗೆ ಗೋಮಾಂಸ ತಿನ್ನ​ಬೇ​ಕೆ​ನಿ​ಸಿ​ದರೆ ನಾನು ತಿಂದೇ ತಿನ್ನು​ತ್ತೇನೆ, ಅದನ್ನು ಪ್ರಶ್ನಿ​ಸಲು ಅವರು ಯಾರು? ಅನೇಕ ಹಿಂದೂ​ಗಳು ಗೋಮಾಂಸ ಸೇವಿ​ಸು​ತ್ತಾರೆ’ ಎಂದು ಸಿದ್ದ​ರಾ​ಮಯ್ಯ ಹಿಂದೆ ಹೇಳಿ​ದ್ದ​ರು.

click me!