ಸಿಎಂ ಸಾಹೆಬ್ರೇ, ಸಿಎಂ ಸಾಹೆಬ್ರೇ ಎಂದು ಕೂಗಿ ಕೂಗಿ ಏನ್​ ಹೇಳಿದ್ರು ನೋಡಿ ಈ ಯುವತಿ

Published : Apr 15, 2026, 11:21 PM IST
Lady on Helmet

ಸಾರಾಂಶ

ಬೆಂಗಳೂರಿನ ವಿಪರೀತ ಬಿಸಿಲಿನಲ್ಲಿ ಹೆಲ್ಮೆಟ್ ಧರಿಸುವ ಕಷ್ಟದ ಬಗ್ಗೆ ಯುವತಿಯೊಬ್ಬಳು ರೀಲ್ಸ್​ ಮೂಲಕ ಸಿಎಂಗೆ ಮನವಿ ಮಾಡಿದ್ದಾಳೆ. ಈ ಬಿಸಿಲಿಗೆ ಕೂದಲು ಉದುರುತ್ತಿದೆ, ನಿಯಮ ಸಡಿಲಗೊಳಿಸಿ ಎಂದು ಕೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಮಾತ್ರವಲ್ಲದೇ ಕರ್ನಾಟಕದ ಬಹುತೇಕ ಎಲ್ಲೆಡೆ ಈ ಬಾರಿ ವಿಪರೀತ ಬಿಸಿಲು ಉಂಟಾಗಿದೆ. ಬೆಂಗಳೂರಿನಲ್ಲಿಯೂ ದಾಖಲೆಯ ಪ್ರಮಾಣದಲ್ಲಿ ಸೆಖೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲಿಯೂ ಟು ವ್ಹೀಲರ್​ ಓಡಿಸುವವರ ಸ್ಥಿತಿ ಆ ದೇವರಿಗೇ ಪ್ರೀತಿ. ಮುಂದಿನ ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಹೆಲ್ಮೆಟ್​ ಕಡ್ಡಾಯ ಮಾಡಿ ದಶಕಗಳೇ ಕಳೆದಿವೆ. ಅದರಲ್ಲಿಯೂ ಐಎಸ್​ಐ ಮಾರ್ಕ್​ ಹೆಲ್ಮೆಟ್​, ಫುಲ್ ಹೆಲ್ಮೆಟ್ ಹೀಗೆ ರೂಲ್ಸ್​ ಸಿಕ್ಕಾಪಟ್ಟೆ ಇದೆ. ರೂಲ್ಸ್​ ಬ್ರೇಕ್​​ ಮಾಡಿ ಐದಾರು ಜನ ಒಂದೇ ಬೈಕ್​ನಲ್ಲಿ ಹೆಲ್ಮೆಟ್​ ಇಲ್ಲದೇ, ಸಿಗ್ನಲ್​ ಜಂಪ್​ ಮಾಡಿ ಹೋದರೂ ಪೊಲೀಸರು ಹಿಡಿಯುವುದೇ ಇಲ್ಲ, ನಮ್ಮಂಥ ಬಡಪಾಯಿಗಳು ಸಿಕ್ಕಾಕಿಕೊಳ್ತಾರೆ ಎನ್ನುವ ಗಂಭೀರ ಆರೋಪ ಸಾಕಷ್ಟು ಸೋಷಿಯಲ್​ ಮೀಡಿಯಾದಲ್ಲಿ ಕೇಳಿಬರುತ್ತಲೇ ಇವೆ ಅನ್ನಿ.

ಸಕತ್​ ಬಿಸಿಲು

ಅದೇನೇ ಇದ್ದರೂ ಎಲ್ಲಾ ರೂಲ್ಸ್ ಫಾಲೋ ಮಾಡುವ ಕರ್ನಾಟಕದ ಮಂದಿ ಅದರಲ್ಲಿಯೂ ಬೆಂಗಳೂರಿಗರಿಗೆ ಈ ಬಾರಿಯ ಬಿಸಿಲು ಸಕತ್​ ತೊಂದರೆ ಕೊಡುತ್ತಿದೆ. ಹೆಲ್ಮೆಟ್​ ಹಾಕಿಕೊಂಡು ಸವಾರಿ ಮಾಡುವುದು ಕಷ್ಟವಾಗಿದೆ. ಈ ಹಿಂದೆ ಕೆಲವು ಊರುಗಳಲ್ಲಿ ಬೇಸಿಗೆ ಕಾಲದಲ್ಲಿ ಹೆಲ್ಮೆಟ್​ ಕಡ್ಡಾಯ ಮಾಡಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಸದ್ಯ ಬೆಂಗಳೂರಿನ ಸ್ಥಿತಿ ಹಾಗಿಲ್ಲ. ಎಲ್ಲಾ ನಿಯಮ ಅನುಸರಿಸುವ ಜನರು ನಿಯಮ ಫಾಲೋ ಮಾಡಲೇಬೇಕು. ಇಲ್ಲದಿದ್ದರೆ ದಂಡ ಬೀಳುತ್ತದೆ.

ಯವತಿ ರೀಲ್ಸ್​

ಇದೀಗ ಯುವತಿಯೊಬ್ಬಳು ಇದನ್ನೇ ಮುಂದಿಟ್ಟುಕೊಂಡು ರೀಲ್ಸ್​ ಮಾಡಿದ್ದಾರೆ. varshini_ambiga ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಸಿಎಂ ಸಾಹೇಬ್ರೆ, ಸಿಎಂ ಸಾಹೇಬ್ರೆ, ನಮ್​ ಸ್ಥಿತಿ ನೋಡಿ, ಹೆಲ್ಮೆಟ್​ ಹಾಕಿಕೊಳ್ಳುವವರ ಸ್ಥಿತಿ ನೋಡಿ ಎಂದು ನೋವು ತೋಡಿಕೊಂಡಿದ್ದಾರೆ ಯುವತಿ. ಈ ಮೂಲಕ ಹೆಲ್ಮೆಟ್​ ಕಡ್ಡಾಯ ಮಾಡದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಕೂದಲ ಭಾಗ್ಯ

ಮಧ್ಯೆ ಒಮ್ಮೆ ಹೆಲ್ಮೆಟ್​ ತೆಗೆದು ಈ ಬಿಸಿಲಿಗೆ ನಮ್ಮ ಕೂದಲೆಲ್ಲಾ ಉದುರಿ ಹೋಗ್ತಿದೆ. ದಯವಿಟ್ಟು ನೋಡಿ ಎಂದು ಹೆಲ್ಮೆಟ್​ ಹಾಕಿಕೊಂಡಿದ್ದಾರೆ. ಹೆಲ್ಮೆಟ್​ ಹಾಕಿಲ್ಲ ಅಂತ ಮತ್ತೆ ದಂಡ ವಿಧಿಸಬೇಡಿ ಎಂದೂ ಹೇಳೋದನ್ನು ಮರೆತಿಲ್ಲ ಯುವತಿ. ಏಕೆಂದರೆ ಅವರಿಗೂ ಗೊತ್ತು, ಸರಿಯಾಗಿ ನಿಮಯ ಪಾಲನೆ ಮಾಡುವವರಿಗೆ ಮಾತ್ರ ದಂಡ ಬೀಳುತ್ತೆ ಎನ್ನುವುದು. ಅದಕ್ಕೆ ಹಲವು ಮಂದಿ ತಮಾಷೆಗೆ ರಿಪ್ಲೈ ಮಾಡಿದ್ದಾರೆ. ಡೋಂಟ್​ ವರಿ ಸಿಎಂ ಸಾಹೇಬ್ರು ಕೂದಲಭಾಗ್ಯ ಕೊಡ್ತಾರೆ, ಕೂದಲು ಉದುರಿದರೆ ಭಯ ಪಡಬೇಡಿ ಎಂದಿದ್ದರೆ, ಮತ್ತೆ ಕೆಲವರು ದಯವಿಟ್ಟು ಹೆಲ್ಮೆಟ್​ ಕಡ್ಡಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

PREV
Read more Articles on
click me!

Recommended Stories

ಕುರ್ಚಿ ಕದನದ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಗದಗ: ಮುಂಡರಗಿಯ ಉದ್ಯಾನದಲ್ಲಿ ಹಸಿರೇ ಇಲ್ಲ! ಹೀಗೆ ಮಾಡಿದ್ರೆ ಕಳೆದುಹೋದ ಆ ವೈಭವ ಮರಳೋದು ಹೇಗೆ?