ತಂತ್ರಜ್ಞಾನದ ಬೆಳವಣಿಗೆಯಲ್ಲಿ ಭಾರತ ವಿಶ್ವಗುರು: ವೀಸಿ

Published : Sep 01, 2023, 08:05 AM IST
 ತಂತ್ರಜ್ಞಾನದ ಬೆಳವಣಿಗೆಯಲ್ಲಿ ಭಾರತ ವಿಶ್ವಗುರು: ವೀಸಿ

ಸಾರಾಂಶ

ತಂತ್ರಜ್ಞಾನದ ಬೆಳವಣಿಗೆಯಲ್ಲಿ ಭಾರತದ ಛಾಪು ಕೃತಕ ಬುದ್ಧಿಮತ್ತೆಯನ್ನೂ ಮೀರಿದೆ. ಆವಿಷ್ಕಾರ, ಸಂಶೋಧನೆ, ಸಾಧನೆ ಭಾರತದ ನಿರಂತರ ಪ್ರಕ್ರಿಯೆಯಾಗಿ ವಿಶ್ವಕ್ಕೆ ಗುರುಗಳಾಗಿದ್ದೇವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೊ›.ಎಂ.ವೆಂಕಟೇಶ್ವರಲು ಹೇಳಿದರು.

  ತುಮಕೂರು :  ತಂತ್ರಜ್ಞಾನದ ಬೆಳವಣಿಗೆಯಲ್ಲಿ ಭಾರತದ ಛಾಪು ಕೃತಕ ಬುದ್ಧಿಮತ್ತೆಯನ್ನೂ ಮೀರಿದೆ. ಆವಿಷ್ಕಾರ, ಸಂಶೋಧನೆ, ಸಾಧನೆ ಭಾರತದ ನಿರಂತರ ಪ್ರಕ್ರಿಯೆಯಾಗಿ ವಿಶ್ವಕ್ಕೆ ಗುರುಗಳಾಗಿದ್ದೇವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೊ›.ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಗಣಕ ಯಂತ್ರ ಅನ್ವಯಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಗುರುವಾರ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಇತ್ತೀಚಿನ ಪ್ರವೃತ್ತಿಗಳು’ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ರಯೋಗಾಲಯಗಳ ಸಂಪೂರ್ಣ ಉಪಯೋಗ ಪಡೆಯಬೇಕು. ತಂತ್ರಜ್ಞಾನ ಎಷ್ಟೇ ಬೆಳೆದರೂ ಕೃತಕ ಬುದ್ಧಿಮತ್ತೆಯು ನೈಜತೆಯನ್ನು ಮೀರಲು ಸಾಧ್ಯವಿಲ್ಲ. ಮಾನವನ ಶಕ್ತಿಯ ಮುಂದೆ ಮಾನವ ನಿರ್ಮಿತ ತಂತ್ರಜ್ಞಾನ ಬಳಕೆಗಷ್ಟೇ ಸೀಮಿತವಾಗಬೇಕು. ಬದುಕು ಭಾವನೆಗಳ ಒಳಗೆ ಬಂದಾಗ ನಮ್ಮನ್ನು ಆಕ್ರಮಿಸಿ, ದುರುಪಯೋಗದ ಸಮಯ ಶುರುವಾಗುತ್ತದೆ. ಮುಂದಿನ ದಿನಗಳಲ್ಲಿ ತುಮಕೂರು ವಿವಿ ಸಂಪೂರ್ಣ ಡಿಜಿಟಲ್‌ ಆಗಲಿದೆ. ನವ ತಂತ್ರಜ್ಞಾನಗಳ ಪರಿಚಯ ನಮ್ಮ ಮಕ್ಕಳಿಗೆ ಸಿಗಲಿದೆ. ಬದಲಾವಣೆಯ ಮಂತ್ರ ಶಿಕ್ಷಣ ಕ್ಷೇತ್ರದಲ್ಲಿ ಮೊದಲು ತಂದರೆ ಜಗತ್ತನ್ನು ಬದಲಾಯಿಸುವ ಆವಿಷ್ಕಾರಗಳನ್ನು ಕಾಣಬಹುದು ಎಂದು ಹೇಳಿದರು.

ಬೆಂಗಳೂರಿನ ಆರ್‌. ವಿ. ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಎಂ. ಎನ್‌. ಮಾತನಾಡಿ, ಕೃತಕ ಬುದ್ಧಿಮತ್ತೆಯು ಬಹುತೇಕ ಎಲ್ಲ ಕ್ಷೇತ್ರಗಳನ್ನಾಕ್ರಮಿಸಿಕೊಂಡಿದೆ. ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಈಗಾಗಲೇ ತೋರಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ನೈಜತೆಗೆ ಸವಾಲೊಡ್ಡಬಹುದು ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್‌ಜಮ್‌ ಮಾತನಾಡಿ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ರಾಷ್ಟ್ರಗಳು 60 ಮಿಲಿಯನ್‌ ಭಯೋತ್ಪಾದಕ ಸಂಘಟನೆಗಳನ್ನು ನಾಶಮಾಡಿದ್ದಾರೆ. ಕೃತಕ ಬುದ್ಧಿಮತ್ತೆಯು ಎಲ್ಲವನ್ನೂ ಬದಲಾಯಿಸಬಹುದಾದ ಕಾಲ ಸಮೀಪದಲ್ಲಿದೆ. ನಮ್ಮ ವಿಶ್ವಾಸಾರ್ಹತೆ, ಕಾರ್ಯಕ್ಷಮತೆಯಿಂದಷ್ಟೇ ನಾವು ವೃತ್ತಿಯಲ್ಲಿ ಮುಂದುವರಿಯಬಹುದು ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕಿ ಡಾ.ಕುಸುಮಾಕುಮಾರಿ ಬಿ.ಎಂ.ಸ್ವಾಗತಿಸಿದರು, ವಂದಿಸಿದರು.ವಿವಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಡಿ. ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಮುಕುಂದಪ್ಪ ಬಿ.ಎಲ್‌. ಭಾಗವಹಿಸಿದ್ದರು.

PREV
Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ