ಸಾವಿನಲ್ಲೂ ಸಾರ್ಥಕತೆ ಮೆರೆದ ಯುವ ರೈತ : ಹಲವರ ಬದುಕಿಗೆ ಬೆಳಕು

Suvarna News   | Asianet News
Published : Dec 14, 2019, 10:39 AM ISTUpdated : Dec 14, 2019, 10:56 AM IST
ಸಾವಿನಲ್ಲೂ ಸಾರ್ಥಕತೆ ಮೆರೆದ ಯುವ ರೈತ : ಹಲವರ ಬದುಕಿಗೆ ಬೆಳಕು

ಸಾರಾಂಶ

ಹಾಸನದ ಯುವ ರೈತನೋರ್ವ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹಲವರ ಜೀವನಕ್ಕೆ ಈ ಮೂಲಕ ಬೆಳಕಾಗಿದ್ದಾರೆ. 

ಬೆಂಗಳೂರು/ಹಾಸನ [ಡಿ.14]: ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಯುವ ರೈತನೋರ್ವ ಮೃತಪಟ್ಟಿದ್ದು ಸಾವಿನಲ್ಲೂ  ಸಾರ್ಥಕತೆ ಮೆರೆದಿದ್ದಾರೆ. 

ಗೊರಗುಂಟೆ ಪಾಳ್ಯದ ಸ್ಪರ್ಷ ಆಸ್ಪತ್ರೆಯಲ್ಲಿ ಯುವ ರೈತ ವಿಕಾಸ್ ನಿಧನರಾಗಿದ್ದು, ಅಂಗಾಂಗ ದಾನ ಮಾಡಿದ್ದಾರೆ. ಕಳೆದ 8 ದಿನಗಳಿಂದ ಕೋಮಾದಲ್ಲಿದ್ದ ರೈತ ವಿಕಾಸ್ ಅವರ ಅಂಗಾಂಗ ದಾನದಿಂದ 8 ಜನರ ಬದುಕಿಗೆ ಬೆಳಕಾಗಿದ್ದಾರೆ. 

ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಳ್ಳಿ ಮೂಲದ ಪುಟ್ಟಸ್ವಾಮಿ ಗೌಡ ಹಾಗೂ ದಿ.ಶಶಿಕಲಾ ದಂಪತಿಯ ಪುತ್ರ ವಿಕಾಸ್ ಅವರು ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬಿಜಿಎಸ್  ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ವಿಕಾಸ್ ಅವರ ಅಂಗಾಂಗ ರವಾನೆ ಮಾಡಲಾಗಿದೆ. 

ರೈತಾಪಿ ವರ್ಗಕ್ಕೆ ಸಂತಸದ ಸುದ್ದಿ: ಬೆಳೆ ಹಾನಿ ಪರಿಹಾರ ಜಮಾ...

ಸ್ಪರ್ಷ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ,'ಜೀವ ಸಾರ್ಥಕತೆ'  ಯೋಜನೆಗೆ ದಾನ ಮಾಡಿದ್ದಾರೆ. 

ಈ ಹಿಂದೆಯೂ ಕೂಡ ಈ ರೀತಿಯ ಹೃದಯ ಸೇರಿದಂತೆ ಅಂಗಾಂಗ ದಾನ ಪ್ರಕ್ರಿಯೆಗಳು ನಡೆದು ಹಲವರ ಬದುಕಿಗೆ ಬೆಳಕಾಗಿದ್ದ ಉದಾಹರಣೆಗಳಿದ್ದು ಇದೀಘ ಯುವ ರೈತನ ಸಾವು ಅಂಗಾಂಗ ದಾನದ ಮೂಲಕ ಸಾರ್ಥಕವಾಗಿದೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!