ಸಚಿವ ಸ್ಥಾನಕ್ಕೆ ಬಿಜೆಪಿಗರಲ್ಲೇ ಪೈಪೋಟಿ : ಇವರೂ ಆಕಾಂಕ್ಷಿ

Suvarna News   | Asianet News
Published : Dec 14, 2019, 03:41 PM ISTUpdated : Dec 14, 2019, 03:54 PM IST
ಸಚಿವ ಸ್ಥಾನಕ್ಕೆ ಬಿಜೆಪಿಗರಲ್ಲೇ ಪೈಪೋಟಿ : ಇವರೂ ಆಕಾಂಕ್ಷಿ

ಸಾರಾಂಶ

ಬಿಜೆಪಿಯಲ್ಲೀಗ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದೆ. ನಮಗೂ ಬೇಕು ನಮಗೂ ಬೇಕು ಎನ್ನುತ್ತಿದ್ದಾರೆ. ಆದ್ರೆ ಇದಕ್ಕೆ ಇನ್ನೂ ಒಂದು ವಾರ ಕಾಯೋದು ಅನಿವಾರ್ಯ

ದಾವಣಗೆರೆ (ಡಿ.14): ಆರು ಬಿಜೆಪಿ ಶಾಸಕರನ್ನು ಹೊಂದಿದ ದಾವಣಗೆರೆಗೆ ಒಂದು ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹ ಕೇಳಿ ಬಂದಿದೆ. 

ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ಜಿಎಂ ಸಿದ್ದೇಶ್ವರ್ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಒಂದು ಮಂತ್ರಿ ಸ್ಥಾನ ನೀಡಬೇಕು. ಜಿಲ್ಲೆಯಲ್ಲಿ 6 ಮಂದಿ ಬಿಜೆಪಿ ಶಾಸಕರಿದ್ದು ಈ ಬಗ್ಗೆ ಈಗಾಗಲೇ ಸಿಎಂ ಬಳಿ ಮನವಿ ಮಾಡಲಾಗಿದೆ ಎಂದರು. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸ್ಥಾನ ನೀಡುವ ಬಗ್ಗೆಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. 11 ಜನರಿಗೆ ಮಂತ್ರಿ ಸ್ಥಾನ ಕೊಟ್ಟರೆ ಇನ್ನೂ 2 - 3 ಉಳಿಯುತ್ತವೆ. ಅದರಲ್ಲಿ ನಮಗೆ ನ್ಯಾಯ ಒದಗಿಸುವ ಭರವಸೆ ಇದೆ ಎಂದರು ಸಂಸದ ಜಿಎಂ ಸಿದ್ದೇಶ್ವರ್. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರವೀಂದ್ರ ನಾಥ್, ಮಾಡಾಳು ವಿರೂಪಾಕ್ಷಪ್ಪ, ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ರಾಮಚಂದ್ರ, ಲಿಂಗಣ್ಣ ಸೇರಿ 6 ಶಾಸಕರಿದ್ದು ಇವರಲ್ಲಿ ಓರ್ವರಿಗಾದರೂ ಮಂತ್ರಿ ಸ್ಥಾನ ಸಿಗಬೇಕೆಂದು ಆಗ್ರಹಿಸಿದ್ದಾರೆ. 

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು, ಇದೀಗ ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇದೇ ವೇಳೆ ಹಲವೆಡೆಯಿಂದ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಹೆಚ್ಚಿದ್ದು, ಮಂತ್ರಿ ಸ್ಥಾನಕ್ಕಾಗಿ ಹೆಚ್ಚಿನ ಪೈಪೋಟಿ ನಡೆಯುತ್ತಿದೆ.  

ಚುನಾವಣೆಯಲ್ಲಿ ಅನರ್ಹರಾಗಿ ಗೆದ್ದವರಿಗೆಲ್ಲಾ ಮಂತ್ರಿ ಸ್ಥಾನ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಸದ್ಯ ರಾಜ್ಯ ಸಂಪುಟ ವಿಸ್ತರಣೆಯು ಮುಂದೆ ಹೋಗುತ್ತಿದೆ.

PREV
click me!

Recommended Stories

ಬಿಲ್ ಪಾವತಿಸದ ಸರ್ಕಾರ; ತಾಲೂಕು ಆಫೀಸಿನ ಟೇಬಲ್, ಕುರ್ಚಿ, ಕಂಪ್ಯೂಟರ್ ಜಪ್ತಿ ಮಾಡಿದ ಕೋರ್ಟ್!
ಎದುರುಮನೆ ಹುಡುಗಿಯೊಂದಿಗೆ ಓಡಿಹೋದ ಮಗ; ತಾಯಿಗೆ ಮನಬಂದಂತೆ ಥಳಿಸಿದ ಲೋಕಲ್ ಪೊಲೀಸ್!