70ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಉಚಿತ ತಪಾಸಣೆ

Published : Jul 19, 2019, 08:22 AM ISTUpdated : Jul 19, 2019, 09:12 AM IST
70ಕ್ಕೂ ಹೆಚ್ಚು ಮಂದಿಗೆ  ಕಣ್ಣಿನ ಉಚಿತ ತಪಾಸಣೆ

ಸಾರಾಂಶ

ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಲ್ತಕೇರ್‌ ಡಯಾಗ್ನೋಸ್ಟಿಕ್‌ ಲ್ಯಾಬ್‌ ಆಲೂರು ಮತ್ತು ಸಂಭವ್‌ ಫೌಂಡೇಶನ್‌ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ 70ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಹಾಸನ(ಜು.19): ಪಟ್ಟಣದ ಮಡಿವಾಳ ಸಮುದಾಯ ಭವನದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಲ್ತಕೇರ್‌ ಡಯಾಗ್ನೋಸ್ಟಿಕ್‌ ಲ್ಯಾಬ್‌ ಆಲೂರು ಮತ್ತು ಸಂಭವ್‌ ಫೌಂಡೇಶನ್‌ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮಂದಿಗೆ ತಪಾಸಣೆ ನಡೆಸಲಾಯಿತು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್‌.ಬಿ. ಧರ್ಮರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಟಿವಿ ಕಂಪ್ಯೂಟರ್‌ ಮೊಬೈಲ್‌ಗಳನು ನೋಡುವುದರಲ್ಲಿಯೇ ಕಾಲ ಕಳೆಯುತ್ತಿದ್ದು, ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಈ ಕಾರಣದಿಂದ ಕಣ್ಣಿನ ಮೇಲೆ ಒತ್ತಡ ಹೆಚ್ಚಾಗಿ ಕಣ್ಣಿನ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಕಣ್ಣಿನ ತಪಾಸಣೆ ನಡೆಸಿಕೊಳ್ಳಬೇಕು ಎಂದರು.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕಣ್ಣೇ ಕಳೆದುಕೊಂಡರು : ಎಚ್ಚರ!

ಯೋಜನೆಯ ಪಾಳ್ಯ ವಲಯದ ಮೇಲ್ವಿಚಾರಕ ವಿಶ್ವನಾಥ್‌, ಆಲೂರು ಸಕಲೇಶಪುರ ಯೋಜನಾ ಲೆಕ್ಕ ಪರಿಶೋಧಕರಾದ ಸುಜಾತಾ, ಚಂದನ, ತಾಲೂಕು ಬಿಜೆಪಿ ಮಹಿಳಾ ಅಧ್ಯಕ್ಷೆ ಉಮಾ ರವಿಪ್ರಕಾಶ್‌, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಗೋಪಿನಾಥ್‌, ಒಪಿಟಿ ಎಚ್‌ಎಂ ಹರ್ಷಿತಾ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ನಾಜಿರಾ, ನಾಗಮಣಿ ಇದ್ದರು.

PREV
click me!

Recommended Stories

50 ಲಕ್ಷ ತೆರಿಗೆ ಸಂಗ್ರಹಿಸಿದ ಗ್ರಾಮ ಪಂಚಾಯ್ತಿ: ಹೈಟೆಕ್ ಆಯ್ತು ಧಾರವಾಡದ ಪುಟ್ಟ ಹಳ್ಳಿ
ಕಮಲಾಕರ್ ಗುರೂಜಿ ಅನೈತಿಕ ಸಂಬಂಧದ ಕುರುಹು, ಇಬ್ಬರ ಸಂಬಂಧಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಇಲ್ಲೇ!