ಡೆತ್ ನೋಟ್ ಬರೆದಿಟ್ಟು ಸಾವು : ಎಚ್‌ಡಿಕೆ, ನಿಖಿಲ್ ಭೇಟಿ

By Kannadaprabha NewsFirst Published Jan 18, 2021, 9:06 AM IST
Highlights

ಡೆತ್ ನೋಟ್ ಬರೆದಿಟ್ಟು ಸಾವಿಗೀಡಾದ ವ್ಯಕ್ತಿಯ ಅಂತಿಮ ದರ್ಶನಕ್ಕೆ ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ  ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ರಾಮ​ನ​ಗರ (ಜ.18):  ತನ್ನ ಸಾವಿನ ಅಂತಿಮ ದರ್ಶನಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್‌ ನೋಟ್‌ ಬರೆ​ದಿಟ್ಟು ಸಾವ​ನ್ನ​ಪ್ಪಿದ್ದ ರಾಮನಗರ ಜಿಲ್ಲೆಯ ಬೊಮ್ಮಚ್ಚಹಳ್ಳಿಯ ನಿವಾಸಿ, ಆಟೋ ಚಾಲಕ ಆರ್‌.ಜಯ​ರಾಮ್‌ ಅವರ ಪಾರ್ಥಿವ ಶರೀ​ರದ ಅಂತಿ​ಮ ದರ್ಶ​ನ​ವನ್ನು ಎಚ್‌ಡಿಕೆ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರು ಪಡೆ​ದರು. ಗ್ರಾಮ​ಕ್ಕೆ ಆಗ​ಮಿ​ಸಿದ ಕುಮಾ​ರ​ಸ್ವಾಮಿ ಹಾಗೂ ನಿಖಿಲ್‌ ಅವರು ಜಯರಾಮ್‌ ಅವರ ಕುಟುಂಬ​ದ​ವ​ರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ​ದರು. ಅಲ್ಲದೇ, ಆರ್ಥಿಕ ಸಹಾ​ಯ​ ಮಾಡಿ​ದರು. ಆಟೋ ಚಾಲಕ ಜಯ​ರಾಮ್‌ ಅವರ ಎಡ​ಗಾ​ಲಿಗೆ ಗ್ಯಾಂಗ್ರಿನ್‌ ಆಗಿ​ದ್ದ​ರಿಂದ ಅನಾ​ರೋ​ಗ್ಯ​ದಿಂದ ಬಳ​ಲು​ತ್ತಿ​ದ್ದರು. ಕೊನೆ ಉಸಿ​ರೆ​ಳೆ​ಯು​ವು​ದಕ್ಕೂ ಮುನ್ನ ಪತ್ರ​ವೊಂದನ್ನು ಬರೆ​ದಿ​ದ್ದರು.

ಇದು ನನ್ನ ಕೊನೆಯ ಹೋರಾಟವೆಂದು ಘೋಷಿಸಿದ ಕುಮಾರಸ್ವಾಮಿ...! ...

ನಾನು ಕುಮಾ​ರ​ಸ್ವಾ​ಮಿ​ ಅವರ ಅಭಿ​ಯಾ​ನಿ​ಯಾ​ಗಿದ್ದು, ಬುದ್ಧಿ ಬಂದಾ​ಗಿ​ನಿಂದಲೂ ಜೆಡಿ​ಎಸ್‌ ಅನ್ನು ಬೆಂಬ​ಲಿ​ಸುತ್ತಾ ಬಂದಿದ್ದೇನೆ. ನನ್ನ ಮರ​ಣಾ​ನಂತರ ಅಂತ್ಯ​ಸಂಸ್ಕಾ​ರ​ದಲ್ಲಿ ಕುಮಾ​ರ​ಸ್ವಾ​ಮಿ​ರ​ವರು ಭಾಗ​ವ​ಹಿ​ಸ​ಬೇಕು. ನನ್ನ ಮಗ ಬುದ್ಧಿಮಾಂದ್ಯನಾಗಿದ್ದು, ಆತ​ನಿಗೆ ಆರ್ಥಿಕ ಸಹಾಯ ಮಾಡ​ಬೇಕು. ಬದು​ಕ​ಲು ಅವ​ರಿ​ಗೊಂದು ದಾರಿ ಮಾಡಿ​ಕೊ​ಡ​ಬೇಕು. ಕುಮಾ​ರ​ಸ್ವಾ​ಮಿ​ರ​ವರ ಋುಣ​ವನ್ನು ಮುಂದಿನ ಜನ್ಮ​ದಲ್ಲಿ ತೀರಿ​ಸು​ವು​ದಾಗಿ ಪತ್ರ​ದ​ಲ್ಲಿ ಉಲ್ಲೇಖಿ​ಸಿ​ದ್ದರು.

ವಿಚಾ​ರ ಮಾಧ್ಯ​ಮ​ಗ​ಳಲ್ಲಿ ಪ್ರಕ​ಟ​ವಾ​ಯಿ​ತ​ಲ್ಲದೇ, ಜೆಡಿ​ಎಸ್‌ ಮುಖಂಡರು ಕುಮಾ​ರ​ಸ್ವಾ​ಮಿ​ರ​ವರ ಗಮ​ನಕ್ಕೆ ತಂದಿ​ದ್ದಾರೆ. ಭಾನು​ವಾರ ಮಧ್ಯಾ​ಹ್ನ​ದ​ವ​ರೆಗೆ ಪೂರ್ವ ನಿಯೋ​ಜಿತವಾಗಿದ್ದ ಕಾರ್ಯ​ಕ್ರ​ಮ​ಗ​ಳನ್ನು ರದ್ದು ಪಡಿ​ಸಿದ ಕುಮಾ​ರ​ಸ್ವಾ​ಮಿ ಪುತ್ರ ನಿಖಿಲ್‌ ಅವ​ರೊಂದಿಗೆ ಬೊಮ್ಮ​ಚ್ಚ​ನ​ಹಳ್ಳಿ ಗ್ರಾಮಕ್ಕೆ ಆಗ​ಮಿಸಿದರು.

click me!