ಡಿಕೆಶಿ ಪರಮಾಪ್ತಗೆ ಎದುರಾಯ್ತು ಸಂಕಷ್ಟ

Kannadaprabha News   | Asianet News
Published : Oct 08, 2020, 07:35 AM ISTUpdated : Oct 08, 2020, 07:44 AM IST
ಡಿಕೆಶಿ  ಪರಮಾಪ್ತಗೆ ಎದುರಾಯ್ತು ಸಂಕಷ್ಟ

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಮಾಪ್ತರೊರ್ವರಿಗೂ ಇದೀಗ ಸಂಕಷ್ಟ ಎದುರಾಗಿದೆ. ಏನದು..? ಯಾರದು..? 

ರಾಮ​ನ​ಗ​ರ (ಅ.08): ಸಿಬಿಐ ಅಧಿ​ಕಾ​ರಿ​ಗಳ ದಾಳಿ ಬೆನ್ನ ಹಿಂದೆಯೇ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರ ಆಪ್ತರಾದ ರಾಮ​ನ​ಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.​ಎ.​ಇ​ಕ್ಬಾಲ್‌ ಹುಸೇನ್‌ ಅವ​ರಿಗೆ ಜಾರಿ ನಿರ್ದೇ​ಶ​ನಾ​ಲಯ (ಇಡಿ) ಅ.9 ರಂದು ವಿಚಾ​ರ​ಣೆಗೆ ಹಾಜ​ರಾ​ಗು​ವಂತೆ ಮತ್ತೊಮ್ಮೆ ಸಮನ್ಸ್‌ ಜಾರಿ ಮಾಡಿದೆ.

ದೆಹ​ಲಿ ಇಡಿ ಕಚೇ​ರಿ​ಯಲ್ಲಿ ಸೆ.17 ಮತ್ತು ಅ.1ರಂದು ಇಕ್ಬಾಲ್‌ ಹುಸೇನ್‌ ವಿಚಾ​ರ​ಣೆಗೆ ಒಳ​ಪ​ಟ್ಟಿ​ದ್ದರು. ಇದಾದ ಮೂರು ದಿನ​ಗಳ ನಂತರ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಹೋ​ದರ ಡಿ.ಕೆ.​ಸು​ರೇಶ್‌ ಅವ​ರಿಗೆ ಸೇರಿದ ನಿವಾ​ಸ​ಗಳ ಮೇಲೆ ಸಿಬಿಐ ದಾಳಿ ನಡೆ​ಸಿತ್ತು.

ಡಿಕೆಶಿ ಭೇಟಿ ಮಾಡಿದ ಜೆಡಿಎಸ್ ಮುಖಂಡ ಜಿಟಿ​ಡಿ .

 ಮೊದಲ ಹಂತದ ವಿಚಾ​ರಣೆ ವೇಳೆ ಇಡಿ ಅಧಿ​ಕಾ​ರಿ​ಗಳು ಇಕ್ಬಾಲ್‌ ಅವ​ರಿಗೆ 10 ವರ್ಷ​ಗಳ ಆದಾಯ ಮೂಲ ಹಾಗೂ ಬ್ಯಾಂಕ್‌ ವಿವರ ಒದ​ಗಿ​ಸು​ವಂತೆ ಸೂಚನೆ ನೀಡಿತ್ತು. ಅದ​ರಂತೆ ಎರಡನೇ ಬಾರಿಯ ವಿಚಾ​ರ​ಣೆ​ಯಲ್ಲಿ ಇಕ್ಬಾಲ್‌ ದಾಖ​ಲೆ​ಗ​ಳನ್ನು ಒದ​ಗಿಸಿ ವಿಚಾ​ರಣೆ ಮುಗಿಸಿ ಬಂದಿ​ದ್ದರು. ಹೆಚ್ಚಿನ ವಿಚಾ​ರ​ಣೆ​ಗಾಗಿ ಅ.9ರಂದು ಹಾಜ​ರಾ​ಗು​ವಂತೆ ಇಕ್ಬಾಲ್‌ ಅವ​ರಿಗೆ ಇಡಿ ಸಮನ್ಸ್‌ ಜಾರಿ ಮಾಡಿದೆ.

PREV
click me!

Recommended Stories

ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ ಮಂಗಳೂರು ಆಗಿ ರಾಜಧಾನಿಗೆ ಪಯಣ
ಮಾರ್ಚ್‌ 22 ರಂದು ಬೆಂಗಳೂರಿಗೆ ವಿಶೇಷ ಮೆಮು ರೈಲು, ತುಮಕೂರಿನಿಂದ ಯಶವಂತಪುರ ಮಾರ್ಗವಾಗಿ ಬಾಣಸವಾಡಿಗೆ ಪ್ರಯಾಣ