ಡಿಕೆಶಿ ಪರಮಾಪ್ತಗೆ ಎದುರಾಯ್ತು ಸಂಕಷ್ಟ

Kannadaprabha News   | Asianet News
Published : Oct 08, 2020, 07:35 AM ISTUpdated : Oct 08, 2020, 07:44 AM IST
ಡಿಕೆಶಿ  ಪರಮಾಪ್ತಗೆ ಎದುರಾಯ್ತು ಸಂಕಷ್ಟ

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಮಾಪ್ತರೊರ್ವರಿಗೂ ಇದೀಗ ಸಂಕಷ್ಟ ಎದುರಾಗಿದೆ. ಏನದು..? ಯಾರದು..? 

ರಾಮ​ನ​ಗ​ರ (ಅ.08): ಸಿಬಿಐ ಅಧಿ​ಕಾ​ರಿ​ಗಳ ದಾಳಿ ಬೆನ್ನ ಹಿಂದೆಯೇ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರ ಆಪ್ತರಾದ ರಾಮ​ನ​ಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.​ಎ.​ಇ​ಕ್ಬಾಲ್‌ ಹುಸೇನ್‌ ಅವ​ರಿಗೆ ಜಾರಿ ನಿರ್ದೇ​ಶ​ನಾ​ಲಯ (ಇಡಿ) ಅ.9 ರಂದು ವಿಚಾ​ರ​ಣೆಗೆ ಹಾಜ​ರಾ​ಗು​ವಂತೆ ಮತ್ತೊಮ್ಮೆ ಸಮನ್ಸ್‌ ಜಾರಿ ಮಾಡಿದೆ.

ದೆಹ​ಲಿ ಇಡಿ ಕಚೇ​ರಿ​ಯಲ್ಲಿ ಸೆ.17 ಮತ್ತು ಅ.1ರಂದು ಇಕ್ಬಾಲ್‌ ಹುಸೇನ್‌ ವಿಚಾ​ರ​ಣೆಗೆ ಒಳ​ಪ​ಟ್ಟಿ​ದ್ದರು. ಇದಾದ ಮೂರು ದಿನ​ಗಳ ನಂತರ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಹೋ​ದರ ಡಿ.ಕೆ.​ಸು​ರೇಶ್‌ ಅವ​ರಿಗೆ ಸೇರಿದ ನಿವಾ​ಸ​ಗಳ ಮೇಲೆ ಸಿಬಿಐ ದಾಳಿ ನಡೆ​ಸಿತ್ತು.

ಡಿಕೆಶಿ ಭೇಟಿ ಮಾಡಿದ ಜೆಡಿಎಸ್ ಮುಖಂಡ ಜಿಟಿ​ಡಿ .

 ಮೊದಲ ಹಂತದ ವಿಚಾ​ರಣೆ ವೇಳೆ ಇಡಿ ಅಧಿ​ಕಾ​ರಿ​ಗಳು ಇಕ್ಬಾಲ್‌ ಅವ​ರಿಗೆ 10 ವರ್ಷ​ಗಳ ಆದಾಯ ಮೂಲ ಹಾಗೂ ಬ್ಯಾಂಕ್‌ ವಿವರ ಒದ​ಗಿ​ಸು​ವಂತೆ ಸೂಚನೆ ನೀಡಿತ್ತು. ಅದ​ರಂತೆ ಎರಡನೇ ಬಾರಿಯ ವಿಚಾ​ರ​ಣೆ​ಯಲ್ಲಿ ಇಕ್ಬಾಲ್‌ ದಾಖ​ಲೆ​ಗ​ಳನ್ನು ಒದ​ಗಿಸಿ ವಿಚಾ​ರಣೆ ಮುಗಿಸಿ ಬಂದಿ​ದ್ದರು. ಹೆಚ್ಚಿನ ವಿಚಾ​ರ​ಣೆ​ಗಾಗಿ ಅ.9ರಂದು ಹಾಜ​ರಾ​ಗು​ವಂತೆ ಇಕ್ಬಾಲ್‌ ಅವ​ರಿಗೆ ಇಡಿ ಸಮನ್ಸ್‌ ಜಾರಿ ಮಾಡಿದೆ.

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!