ಶಿರಸಿ: ಪ್ಲಾಸ್ಟಿಕ್‌ ಚೀಲದಲ್ಲಿ ಮೃತ ಆಕಳು ಕರು ಪತ್ತೆ

Kannadaprabha News   | Asianet News
Published : Sep 02, 2021, 08:53 AM IST
ಶಿರಸಿ: ಪ್ಲಾಸ್ಟಿಕ್‌ ಚೀಲದಲ್ಲಿ ಮೃತ ಆಕಳು ಕರು ಪತ್ತೆ

ಸಾರಾಂಶ

*  ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದ ಘಟನೆ *  ರಾತ್ರಿಯ ವೇಳೆ ಮೃತ ಕರು ಎಸೆದುಹೋದ ಅನಾಗರಿಕರು *  ಮಾನವೀಯತೆ ಮೆರೆದ ಶ್ರೀನಿವಾಸ ಹೆಬ್ಬಾರ 

ಶಿರಸಿ(ಸೆ.02):  ಇಲ್ಲಿಯ ಚಿಪಗಿ ರಸ್ತೆ ಪಕ್ಕದಲ್ಲಿ ಮೃತ ಆಕಳು ಕರುವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಎಸೆದಿರುವುದು ಪತ್ತೆಯಾಗಿದೆ.

ಈ ರಸ್ತೆಯನ್ನು ಶ್ರೀನಿವಾಸ ಹೆಬ್ಬಾರ ಅವರ ಜೀವಜಲ ಕಾರ್ಯಪಡೆಯಿಂದ ಸ್ವಚ್ಛವಾಗಿರಿಸಿಕೊಳ್ಳಲಾಗಿತ್ತು. ಇಂಥ ಸ್ಥಳದಲ್ಲಿ ಅನಾಗರಿಕರು ರಾತ್ರಿಯ ವೇಳೆ ಮೃತ ಕರುವನ್ನು ಎಸೆದುಹೋಗಿದ್ದಾರೆ. ಈ ರಸ್ತೆಯಿಂದ ಸಂಚರಿಸುತ್ತಿದ್ದ ಉರಗಪ್ರೇಮಿ ಪ್ರಶಾಂತ ಹುಲೇಕಲ್‌ ಚೀಲದಿಂದ ಗೊಬ್ಬು ವಾಸನೆ ಬೀರುತ್ತಿರುವುದನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಚೀಲದಲ್ಲಿ ಕರು ಮೃತಪಟ್ಟಿರುವುದು ಕಂಡುಬಂದಿದೆ.

ರೈತರ ಸಾಲಮನ್ನಾ ಇನ್ನೂ ಬಾಕಿ: ಸಂಕಷ್ಟದಲ್ಲಿ ಅನ್ನದಾತ

ಶ್ರೀನಿವಾಸ ಹೆಬ್ಬಾರ ಅವರು ಕಾರ್ಯಪಡೆಯ ತ್ಯಾಜ್ಯ ಸಾಗಿಸುವ ವಾಹನದಿಂದ ಮೃತ ಕರುವನ್ನು ನಗರಸಭೆಯ ಘನ ತ್ಯಾಜ್ಯ ಘಟಕಕ್ಕೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!