ನಾನು ತಪ್ಪು ಮಾಡಿದ್ರೆ ಈಗಲೂ ಜೈಲಿಗೆ ಹಾಕಲಿ

By Kannadaprabha NewsFirst Published Dec 26, 2019, 2:38 PM IST
Highlights

ನಾನು ತಪ್ಪು ಮಾಡಿದ್ರೆ ಜೈಲಿಗೆ ಹಾಕಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. 

ರಾಮನಗರ (ಡಿ.26): ನಾನು ರಾಜ​ಕಾ​ರಣ ಮತ್ತು ವ್ಯವ​ಹಾ​ರ​ವನ್ನು ಹಸ​ನಾಗಿ ಮಾಡಿ​ದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ಲೂಟಿ ಹೊಡೆ​ದಿಲ್ಲ. ನಾನು ತಪ್ಪು ಮಾಡಿದ್ರೆ ಈಗಲೂ ಜೈಲಿಗೆ ಹಾಕಲಿ ಕಾಂಪ್ರು​ಮೈಸ್‌ ಮಾಡಿ​ಕೊ​ಳ್ಳುವ ಜಾಯ​ಮಾನ ನನ್ನ​ದಲ್ಲ ಎಂದು ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಹೇಳಿ​ದರು.

ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯ ರಾಮನಗರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸಲಾಗಿರುವ ‘ಒಕ್ಕಲಿಗ ಭವನ’ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅವ​ಮಾನ ಆಗಿಲ್ಲ:  ತಿಹಾರ್‌ ಜೈಲಿಗೆ ಹೋಗಿ ಬಂದಿ​ದ್ದ​ರಿಂದ ನನಗೆ ಅವ​ಮಾನ ಆಗಿಲ್ಲ. ನಾನು ತಪ್ಪನ್ನೇ ಮಾಡಿಲ್ಲ. ಹೀಗಿ​ರು​ವಾಗ ನಾನೇಕೆ ಎದೆ​ಗುಂದಲಿ. ಯಾರು ಏನೇ ಮಾಡಲಿ, ಯಾವ ರೂಪದಲ್ಲಿ ಬೇಕಾದರೂ ಕಿರುಕುಳ ನೀಡಲಿ, ಈ ದಿಕ್ಕಿನಲ್ಲಿ ಯಾವುದೇ ರಾಜಿ ಇಲ್ಲದೆ, ನನ್ನ ಕ್ಷೇತ್ರ ಹಾಗೂ ನನ್ನ ಜನಾಂಗದ ಸಮಗ್ರಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.

ನನ್ನ ರಾಜಕೀಯ ಬದುಕಾಗಲಿ, ಸಾರ್ವಜನಿಕ ಜೀವನವಾಗಲಿ, ವಹಿವಾಟು-ವ್ಯವಹಾರಗಳಾಗಲಿ ಎಲ್ಲವೂ ಹಸನಾಗಿವೆ. ಕಾನೂನು ಮೀರಿ ಯಾವುದೇ ವ್ಯವಹಾರ ಮಾಡಿಲ್ಲ. ನಾನು ತಪ್ಪು ಮಾಡಿದರೆ ಶಿಕ್ಷೆಯಾಗಲಿ ಎಲ್ಲದಕ್ಕೂ ನಾನು ಸಿದ್ಧನಿದ್ದೇನೆ. ಎಂಥದ್ದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ಆದರೆ, ಕಾಯ್ದೆಗಳು ದುರು​ಪ​ಯೋಗ ಆಗು​ತ್ತಿ​ರು​ವು​ದಕ್ಕೆ ಬೇಸ​ರ​ವಿದೆ ಎಂದು ಹೇಳಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸಾಕಷ್ಟುಷಡ್ಯಂತ್ರ ನಡೆ​ದಿತ್ತು. ಕಾನೂ​ನನ್ನು ದುರು​ಪ​ಯೋಗ ಮಾಡಿ​ಕೊ​ಳ್ಳ​ಲಾ​ಗು​ತ್ತಿತ್ತು. ನಾನು ಕಷ್ಟ​ದ​ಲ್ಲಿ​ದ್ದಾಗ ಒಕ್ಕ​ಲಿಗ ಸಮಾಜ ಬೆನ್ನಿಗೆ ನಿಂತಿತ್ತು. ಒಕ್ಕ​ಲಿ​ಗರು ಮಾತ್ರ​ವ​ಲ್ಲದೆ ಎಲ್ಲಾ ಸಮು​ದಾ​ಯ​ಗಳ ಪ್ರಾರ್ಥ​ನೆಯ ಫಲ​ವಾಗಿ ನಿಮ್ಮೆ​ಲ್ಲರ ಮುಂದೆ ನಿಂತಿ​ದ್ದೇ​ನೆ. ನಿಮ್ಮೆ​ಲ್ಲರ ಪಾದ​ಗ​ಳಿಗೆ ನನ್ನ ನಮಸ್ಕಾರ ಎಂದು ಕೃತ​ಜ್ಞತೆ ಸಲ್ಲಿ​ಸಿ​ದ​ರು.

ಶಿರಾ ತಾಲೂಕು ಸ್ಫಟಿ​ಕ​ಪುರಿ ಮಹಾ​ಸಂಸ್ಥಾನ ಮಠದ ಪೀಠಾ​ಧ್ಯಕ್ಷ ನಂಜಾ​ವ​ಧೂತ ಮಹಾ​ಸ್ವಾ​ಮೀಜಿ ಮಾತ​ನಾಡಿ, ಪ್ರಧಾನಿ ಮೋದಿ ಅವ​ರಿಗೆ ಡಿ.ಕೆ.​ಶಿ​ವ​ಕು​ಮಾರ್‌ ಮೇಲೆ ಬಲು ಪ್ರೀತಿ ಇದೆ. ಹಾಗಾ​ಗಿಯೇ ಅವ​ರಿಗೆ ತೊಂದರೆ ನೀಡಿ, ಒಕ್ಕ​ಲಿ​ಗರು ಒಂದೆಡೆ ಸೇರಿ​ಸುವ ಕೆಲಸ ಮಾಡಿ​ದರು ಎಂದು ಪರೋ​ಕ್ಷ​ವಾಗಿ ಟೀಕಿ​ಸಿ​ದರು.

ಸುರೇಶ್‌ ಶ್ರಮ:  ಡಿ.ಕೆ. ​ಶಿ​ವ​ಕು​ಮಾರ್‌ ಸಂಕ​ಷ್ಟ​ದಲ್ಲಿ ಸಿಲು​ಕಿ​ದಾಗ ಅವರ ಬಿಡು​ಗ​ಡೆ​ಗಾಗಿ ಸಹೋ​ದರ ಡಿ.ಕೆ. ಸು​ರೇಶ್‌ ಹಗ​ಲಿ​ರಳು ಶ್ರಮಿ​ಸಿ​ದರು. ರಾಮ​ನ ನೆರ​ವಿಗೆ ಲಕ್ಷ್ಮ​ಣ ನಿಂತಿ​ದ್ದನ್ನು ನಾವೆ​ಲ್ಲರು ಕೇಳಿ​ದ್ದೇವೆ. ಆದರೆ, ಡಿ.ಕೆ.​ಸು​ರೇಶ್‌ ತನ್ನ ಸಹೋ​ದರನ ವಿಚಾ​ರ​ದಲ್ಲಿ ಲಕ್ಷ್ಮ​ಣ​ಗಿಂತಲೂ ಹತ್ತು ಹೆಜ್ಜೆ ಮುಂದಿದ್ದರು. ಜನ ಸೇವೆ​ಯನ್ನೇ ಹವ್ಯಾಸ ಮಾಡಿ​ಕೊಂಡಿ​ರುವ ಸುರೇಶ್‌ ರಾಷ್ಟ್ರ ಕಂಡ ಮಾದರಿ ಲೋಕ​ಸಭಾ ಸದಸ್ಯ ಎಂದು ಬಣ್ಣಿ​ಸಿ​ದರು.

ಚುಂಚ​ನ​ಗಿರಿ ಮಠದ ಶ್ರೀ ನಿರ್ಮ​ಲಾ​ನಂದನಾಥ ಸ್ವಾಮೀಜಿ ಮಾತ​ನಾಡಿ, ಈಗೀಗ ಡಿ.ಕೆ.​ಶಿ​ವ​ಕು​ಮಾರ್‌ ಅವರು ಆಧ್ಯಾ​ತ್ಮಿ​ಕ​ವಾಗಿ ಬಹಳ ಮಾತ​ನಾ​ಡು​ತ್ತಿ​ದ್ದಾರೆ. ಅವರು ಅನು​ಭ​ವಿ​ಸಿದ ಕಷ್ಟ​ಗ​ಳನ್ನು ನೋಡಿ​ದ್ದೇವೆ. ಮನುಷ್ಯ​ನಿಗೆ ಜೀವ​ನ​ದಲ್ಲಿ ಕಷ್ಟ​ಗಳು ಬರು​ತ್ತವೆ. ನಡೆ​ಯು​ವ​ವರು ಎಡ​ವು​ತಾ​ರೆಯೇ ಹೊರತು ಕುಳಿ​ತ​ವ​ರಲ್ಲ ಎಂದು ಹೇಳಿ​ದರು.

click me!