ಜಮೀರ್‌ ಅಹಮದ್‌ ಬಂಧಿಸಿ ಜೈಲಿಗೆ ಕಳಿಸಿ: ಕೆ.ಜಿ.ಬೋಪಯ್ಯ

Kannadaprabha News   | Asianet News
Published : Apr 21, 2020, 09:25 AM IST
ಜಮೀರ್‌ ಅಹಮದ್‌ ಬಂಧಿಸಿ ಜೈಲಿಗೆ ಕಳಿಸಿ: ಕೆ.ಜಿ.ಬೋಪಯ್ಯ

ಸಾರಾಂಶ

ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್‌ ಅಹಮದ್‌ ನೇರ ಹೊಣೆಯಾಗಿದ್ದು, ಅವರನ್ನು ಕೂಡಲೇ ಬಂ​ಧಿಸಿ ಜೈಲಿಗೆ ಕಳುಹಿಸಬೇಕು ಎಂದು ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.  

ಮಡಿಕೇರಿ(ಏ.21): ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್‌ ಅಹಮದ್‌ ನೇರ ಹೊಣೆಯಾಗಿದ್ದು, ಅವರನ್ನು ಕೂಡಲೇ ಬಂ​ಧಿಸಿ ಜೈಲಿಗೆ ಕಳುಹಿಸಬೇಕು ಎಂದು ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್‌ ಅಹಮದ್‌ ನೇರ ಹೊಣೆ. ಇದೊಂದು ಪೂರ್ವ ನಿಯೋಜಿತ ಪ್ರಕರಣ. ಅವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿ​ಸಿ ಜೈಲಿಗೆ ಕಳುಹಿಸಬೇಕು ಎಂದರು.

‘ಮದ್ಯದ ದೊರೆ’ ಹಿನ್ನಡೆ: ಮಲ್ಯ ಗಡೀಪಾರಿಗೆ ಇನ್ನೊಂದೇ ಮೆಟ್ಟಿಲು!

ಈ ಹಿಂದೆ ಆದ ಗಲಾಟೆ ಸಿಎಎ ಸರ್ವೆ ಎಂಬ ಅನುಮಾನದಿಂದ ಆಗಿತ್ತು. ಆದರೆ ನಿನ್ನೆ 500ಕ್ಕೂ ಹೆಚ್ಚು ಜನರು ಒಮ್ಮೆಲೇ ಹಲ್ಲೆಗೆ ಮುಂದಾಗಿದ್ದಾರೆ. ಆದ್ದರಿಂದ ಇದು ಪೂರ್ವ ನಿಯೋಜಿತ ಕೃತ್ಯ. ಕೋಮು ದ್ವೇಷದ ರೀತಿ ಆಗುತ್ತದೆ ಎಂದು ಸರ್ಕಾರ ಮೃದುಧೋರಣೆ ತಾಳಿದೆ. ಸರ್ಕಾರ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು. ಹೀಗೆ ಮುಂದುವರಿದರೆ ಯಾವ ಅ​ಧಿಕಾರಿಯೂ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC