ವಿಷ​ಯುಕ್ತ ಅಣ​ಬೆ ತಿಂದು ಒಂದೇ ಕುಟುಂಬದ 15 ಮಂದಿ ಅಸ್ವಸ್ಥ

By Kannadaprabha NewsFirst Published Jul 21, 2019, 12:26 PM IST
Highlights

ಮಲೆನಾಡಿನಲ್ಲಿ ಮಳೆಗಾಲದಲ್ಲಿ ಅಣಬೆಗಳ ಖಾದ್ಯ ತಯಾರಿಸುವುದು ಸಾಮಾನ್ಯ. ಆದರೆ ಅಣಬೆಗಳನ್ನು ಆರಿಸುವಾಗ ಎಚ್ಚರದಿಂದಿರುವುದು ಅಗತ್ಯ. ವಿಷಯುಕ್ತ ಅಣಬೆ ತಿಂದ ಒಂದೇ ಕುಟುಂಬದ 15 ಮಂದಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ಕೋಣಂದೂರು ಸಂತೆಹಕ್ಲು ಗ್ರಾಮ​ದಲ್ಲಿ ಶುಕ್ರ​ವಾರ ರಾತ್ರಿ ನಡೆದಿದೆ.

ತೀರ್ಥ​ಹ​ಳ್ಳಿ(ಜು.21): ವಿಷಯುಕ್ತ ಅಣಬೆ ತಿಂದ ಒಂದೇ ಕುಟುಂಬದ 15 ಮಂದಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ಕೋಣಂದೂರು ಸಂತೆಹಕ್ಲು ಗ್ರಾಮ​ದಲ್ಲಿ ಶುಕ್ರ​ವಾರ ರಾತ್ರಿ ನಡೆದಿದೆ.

ಒಂದೇ ಕುಟುಂಬದ 15 ಮಂದಿ ಶುಕ್ರವಾರ ರಾತ್ರಿ ಮನೆಯ ಹಿಂದಿದ್ದ ಅಣಬೆ ಸಂಗ್ರ​ಹಿಸಿ ಅಡುಗೆ ಮಾಡಿ​ದ್ದಾರೆ. ರಾತ್ರಿ ಊಟದ ಬಳಿಕ 11 ಗಂಟೆ ಸಮ​ಯ​ದಲ್ಲಿ ಹೊಟ್ಟೆ​ನೋ​ವು ಹಾಗೂ ವಾಂತಿ ಸಮ​ಸ್ಯೆ​ ಕಾಣಿಸಿಕೊಂಡಿದೆ.

ಅಣಬೆಯ ಹಣೆಬರಹ ತಿಳಿದುಕೊಳ್ಳುವುದು ಹೇಗೆ?

ತಕ್ಷಣ ಗ್ರಾಮಸ್ಥರು ತುರ್ತು ಚಿಕಿ​ತ್ಸೆ​ಗಾಗಿ ತೀರ್ಥ​ಹಳ್ಳಿ ಜೆ.ಸಿ.ಆಸ್ಪ​ತ್ರೆಗೆ ದಾಖ​ಲಿ​ಸಿದ್ದಾರೆ. ಈಗ ಅವರು ಆರೋಗ್ಯವಾಗಿದ್ದು, ಭಾನುವಾರ ಡಿಸ್ಚಾರ್ಜ್‌ ಮಾಡಲಾಗುವುದು ಎಂದು ತಾಲೂಕು ವೈದ್ಯಾ​ಧಿ​ಕಾ​ರಿ​ ತಿಳಿಸಿ​ದ್ದಾರೆ.

click me!