ಕಾರ್ಕಳಕ್ಕೆ ನಾಳೆ ರಾಜನಾಥ್ ಸಿಂಗ್ ; ಕೃಷ್ಣಮಠಕ್ಕೂ ಭೇಟಿ

First Published Apr 22, 2018, 12:05 PM IST
Highlights

ಕಾರ್ಕಳ ಕ್ಷೇತ್ರಕ್ಕೆ ನಾಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ.  ಕಾರ್ಕಳ ಅಭ್ಯರ್ಥಿ ಸುನಿಲ್ ಕುಮಾರ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.  ಬಳಿಕ ಉಡುಪಿ ಕೃಷ್ಣ ಮಠ ಭೇಟಿ ನೀಡಲಿದ್ದಾರೆ. 

ಉಡುಪಿ (ಏ. 22):  ಕಾರ್ಕಳ ಕ್ಷೇತ್ರಕ್ಕೆ ನಾಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ. 

ಕಾರ್ಕಳ ಅಭ್ಯರ್ಥಿ ಸುನಿಲ್ ಕುಮಾರ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.  ಬಳಿಕ ಉಡುಪಿ ಕೃಷ್ಣ ಮಠ ಭೇಟಿ ನೀಡಲಿದ್ದಾರೆ. 
ಬೆಳ್ತಂಗಡಿಯ ಸಮಾವೇಶ ನಡೆಯಲಿದ್ದೂ  ರಾಜನಾಥ್ ಸಿಂಂಗ್ ಮಾತಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ.  ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಲಿದ್ದಾರೆ. ನಂತರ ಕೃಷ್ಣಮಠ ಭೇಟಿ ಮಾಡಲಿದ್ದಾರೆ. ಬಳಿಕ ಪರ್ಯಾಯ ಪಲಿಮಾರು ಶ್ರೀ, ಪೇಜಾವರ ಶ್ರೀಗಳನ್ನೂ ಭೇಟಿ ಮಾಡಲಿದ್ದಾರೆ.  

ಮಣಿಪಾಲದ ಖಾಸಗಿ ಹೋಟೇಲ್’ನಲ್ಲಿ  ಸಂವಾದ ನಡೆಯಲಿದ್ದು ಸಂವಾದದಲ್ಲಿ ಭಾಗವಹಿಸಲಿದ್ದಾರೆ. 

click me!