ಮಾನವ ಬದುಕುಳಿಯುವ ಮಿತಿಗಿಂತ ಹೆಚ್ಚಿನ ಶಾಖದ ಅಲೆಗಳನ್ನು ಭಾರತ ಅನುಭವಿಸಬಹುದು: ವಿಶ್ವ ಬ್ಯಾಂಕ್

Published : Dec 07, 2022, 06:22 PM IST
ಮಾನವ ಬದುಕುಳಿಯುವ ಮಿತಿಗಿಂತ ಹೆಚ್ಚಿನ ಶಾಖದ ಅಲೆಗಳನ್ನು ಭಾರತ ಅನುಭವಿಸಬಹುದು: ವಿಶ್ವ ಬ್ಯಾಂಕ್

ಸಾರಾಂಶ

ವಿಶ್ವ ಬ್ಯಾಂಕ್‌ ಈ ವರದಿ ನೀಡಿದ್ದು, ಈ ವರ್ಷದ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ  ದಾಖಲಾದ ಹೆಚ್ಚು ತಾಪಮಾನವನ್ನು ಇದು ಪರಿಗಣಿಸಿದೆ. ಅಲ್ಲದೆ, ಭಾರತದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ವಿಶ್ವಬ್ಯಾಂಕ್‌ ಈ ವರದಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.  

ದೇಶಾದ್ಯಂತ ಬಿಸಿಲಿನ ಶಾಖ ಹೆಚ್ಚಾಗುತ್ತಿದ್ದು, ಮಿತಿ ಮೀರಿದ ಶಾಖದ ಅಲೆಗಳಿಂದ (Heat Wave) ಕೆಲ ದಶಕಗಳಿಂದ ಈಗಾಗಲೇ ಸಾವಿರಾರು ಜನರು ಬಲಿಯಾಗಿದ್ದಾರೆ. ಇನ್ನು, ಇಂತಹ ಘಟನೆಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಭಾರತ (India) ಶೀಘ್ರದಲ್ಲೇ ಮಾನವ ಮಿತಿಗಿಂತ (Human Survivability Limit) ಶಾಖದ ಅಲೆ ಹೆಚ್ಚಾಗಲಿರುವ ವಿಶ್ವದ (World) ಮೊದಲ ಸ್ಥಳಗಳಲ್ಲಿ ಒಂದಾಗಬಹುದು ಎಂದು ಹೊಸ ವರದಿಯೊಂದು ಎಚ್ಚರಿಕೆ ನೀಡಿದೆ. ವಿಶ್ವ ಬ್ಯಾಂಕ್‌ (World Bank) ಈ ವರದಿ ನೀಡಿದ್ದು, ಈ ವರ್ಷದ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ  ದಾಖಲಾದ ಹೆಚ್ಚು ತಾಪಮಾನವನ್ನು ಇದು ಪರಿಗಣಿಸಿದೆ. ಅಲ್ಲದೆ, ಭಾರತದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ವಿಶ್ವಬ್ಯಾಂಕ್‌ ಈ ವರದಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.  

"ಭಾರತದ ತಂಪಾಗಿಸುವ ವಲಯದಲ್ಲಿನ ಹವಾಮಾನ ಹೂಡಿಕೆಯ ಅವಕಾಶಗಳು" ಎಂಬ ಶೀರ್ಷಿಕೆಯ ವಿಶ್ವ ಬ್ಯಾಂಕ್ ವರದಿಯು ದೇಶವು ಹೆಚ್ಚಿನ ತಾಪಮಾನವನ್ನು ಅನುಭವಿಸುತ್ತಿದೆ ಎಂದು ಹೇಳಿದೆ. ಏಪ್ರಿಲ್ 2022 ರಲ್ಲಿ, ಭಾರತವು ಶಾಖದ ಅಲೆಯ ತೀವ್ರತೆಯಲ್ಲಿ ಮುಳುಗಿದ್ದು, ಇದು ದೇಶವನ್ನು ಸ್ಥಗಿತಗೊಳಿಸಿತು. ರಾಜಧಾನಿ ನವದೆಹಲಿಯಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಗಿತ್ತು. ಇನ್ನು, ತಾಪಮಾನದಲ್ಲಿ ಅಸಾಧಾರಣ ಏರಿಕೆಗೆ ಸಾಕ್ಷಿಯಾದ ಮಾರ್ಚ್‌ನಲ್ಲೂ ಹೆಚ್ಚು ತಾಪಮಾನ ದಾಖಲಾಗಿತ್ತು ಎಂದು ವರದಿ 
ಹೇಳಿದೆ.

ಇದನ್ನು ಓದಿ: ಬಿಸಿಲಿನ ತಾಪಕ್ಕೆ ಕರಗಿದ ಏರ್‌ಪೋರ್ಟ್‌ ರನ್‌ವೇ, ಚಾವಣಿ..!

ಕೇರಳ ಸರ್ಕಾರದ ಸಹಭಾಗಿತ್ವದಲ್ಲಿ ವಿಶ್ವಬ್ಯಾಂಕ್ ಆಯೋಜಿಸಿರುವ 2 ದಿನಗಳ "ಭಾರತದ ಹವಾಮಾನ ಮತ್ತು ಅಭಿವೃದ್ಧಿ ಪಾಲುದಾರರ ಸಭೆ" ಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಭಾರತದಲ್ಲಿ ಶಾಖದ ಅಲೆಗಳ ಪರಿಸ್ಥಿತಿಯು ಮಾನವನ ಬದುಕುಳಿಯುವ ಮಿತಿಯನ್ನುಮೀರಬಹುದು ಎಂದು ಈ ವರದಿಯಲ್ಲಿ ಊಹಿಸಲಾಗಿದೆ. ದಕ್ಷಿಣ ಏಷ್ಯಾದಾದ್ಯಂತ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಅನೇಕ ಹವಾಮಾನ ವಿಜ್ಞಾನಿಗಳು ದೀರ್ಘಕಾಲದವರೆಗೆ ಎಚ್ಚರಿಕೆ ನೀಡಿದ್ದನ್ನು ಇತ್ತೀಚಿನ ಶಾಖದ ಅಲೆಯು ಬೆಂಬಲಿಸುತ್ತದೆ ಎಂದೂ ವರದಿ ಹೇಳಿದೆ.

ಆಗಸ್ಟ್ 2021 ರಲ್ಲಿ, ಹವಾಮಾನ ಬದಲಾವಣೆಯ ಅಂತರ-ಸರ್ಕಾರಿ ಸಮಿತಿಯ (IPCC) ಆರನೇ ಮೌಲ್ಯಮಾಪನ ವರದಿಯು ಮುಂಬರುವ ದಶಕದಲ್ಲಿ ಭಾರತೀಯ ಉಪಖಂಡವು ಹೆಚ್ಚು ಆಗಾಗ್ಗೆ ಮತ್ತು ತೀವ್ರವಾದ ಶಾಖದ ಅಲೆಗಳನ್ನು ಅನುಭವಿಸುತ್ತದೆ ಎಂದು ಎಚ್ಚರಿಸಿತ್ತು. ಅಲ್ಲದೆ, ಇಂಗಾಲದ ಹೊರಸೂಸುವಿಕೆಯು ಅಧಿಕವಾಗಿದ್ದರೆ, 2036-65ರ ವೇಳೆಗೆ ಭಾರತದಾದ್ಯಂತ ಶಾಖದ ಅಲೆಗಳು 25 ಪಟ್ಟು ಹೆಚ್ಚು ಕಾಲ ಉಳಿಯುವ ಸಾಧ್ಯತೆಯಿದೆ ಎಂದು G20 ಹವಾಮಾನ ಅಪಾಯದ ಅಟ್ಲಾಸ್ 2021 ರಲ್ಲಿ ಎಚ್ಚರಿಸಿದೆ ಎಂದೂ ವರದಿ ಹೇಳಿದೆ. ಭಾರತದಾದ್ಯಂತ ಹೆಚ್ಚುತ್ತಿರುವ ಶಾಖವು ಆರ್ಥಿಕ ಉತ್ಪಾದಕತೆಗೆ ಅಪಾಯ ಉಂಟುಮಾಡುತ್ತದೆ ಎಂದೂ ವಿಶ್ವಬ್ಯಾಂಕ್‌  ವರದಿ ಎಚ್ಚರಿಸಿದೆ.

ಇದನ್ನೂ ಓದಿ: ಸೆಖೆಯಿಂದ ಪಾರಾಗಲು ತಾತನ ಹೊಸ ಟ್ರಿಕ್ಸ್: ಇಂಟರ್‌ನೆಟ್‌ನಲ್ಲಿ ಫೋಟೋ ವೈರಲ್

 ಭಾರತದಾದ್ಯಂತ ತಾಪಮಾನವು ಹೆಚ್ಚಾದಂತೆ, ತಂಪಾಗಿಸುವಿಕೆಗೆ ಬೇಡಿಕೆಯು ಸಹ ಹೆಚ್ಚಾಗುತ್ತದೆ. ಆದರೆ, ದೇಶದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ದಿನಕ್ಕೆ ಅಮೆರಿಕ ಡಾಲರ್‌ 2 ಕ್ಕಿಂತ ಕಡಿಮೆ ಆದಾಯದಲ್ಲಿ ವಾಸಿಸುತ್ತಾರೆ. ಹಾಗೂ, ಹವಾನಿಯಂತ್ರಣ ಘಟಕದ ಸರಾಸರಿ ವೆಚ್ಚವು 260 ಅಮೆರಿಕ ಡಾಲರ್‌ ಮತ್ತು 500 ಅಮೆರಿಕ ಡಾಲರ್‌ ನಡುವೆ ಇದೆ. ಈ ಹಿನ್ನೆಲೆ, ಏರ್-ಕೂಲಿಂಗ್ ವ್ಯವಸ್ಥೆಗಳು ಐಷಾರಾಮಿಯಾಗಿದ್ದು, ಕೆಲವರಿಗೆ ಮಾತ್ರ ಲಭ್ಯವಿದೆ.

ಇಂಡಿಯಾ ಕೂಲಿಂಗ್ ಆಕ್ಷನ್ ಪ್ಲಾನ್ (ICAP) ನಲ್ಲಿ ಪ್ರಸ್ತುತಪಡಿಸಲಾದ ವಿಶ್ಲೇಷಣೆಯ ಪ್ರಕಾರ, ಕೇವಲ 8 ಪ್ರತಿಶತ ಭಾರತೀಯ ಕುಟುಂಬಗಳು ಹವಾನಿಯಂತ್ರಣ ಘಟಕಗಳನ್ನು ಹೊಂದಿವೆ. ಇನ್ನು, ಒಳಾಂಗಣ ಮತ್ತು ಎಲೆಕ್ಟ್ರಿಕ್ ಫ್ಯಾನ್‌ಗಳು ಉಷ್ಣ ಸೌಕರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ, ಆದರೆ ಇವುಗಳು ಸಹ ಖರೀದಿಸಲು ದುಬಾರಿಯಾಗಿದೆ ಮತ್ತು ನಿಷ್ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ಬಿಸಿಲಿನ ಝಳಕ್ಕೆ ಸುಟ್ಟು ಹೋದ ಯುರೋಪ್ ಜನ: ಸೂರ್ಯನ ಝಳಕ್ಕೆ ಸ್ಪೇನ್, ಬ್ರಿಟನ್ ತತ್ತರ 

ಇದರ ಪರಿಣಾಮವಾಗಿ, ಭಾರತದಾದ್ಯಂತ ಅನೇಕ ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳು ತೀವ್ರ ಶಾಖಕ್ಕೆ ಹೆಚ್ಚು ದುರ್ಬಲರಾಗಿದ್ದಾರೆ. ಇವರು ಅಸಮರ್ಪಕ ಗಾಳಿ, ಬಿಸಿ ಮತ್ತು ಕಿಕ್ಕಿರಿದ ಮನೆಗಳಲ್ಲಿ ವಾಸಿಸುತ್ತಿದ್ದಾರೆ, ಕೂಲಿಂಗ್‌ಗೆ ಸರಿಯಾದ ಪ್ರವೇಶವಿರುವುದಿಲ್ಲ" ಎಂದು ವರದಿ ಎಚ್ಚರಿಸಿದೆ. ವಿಪರೀತ ಶಾಖದ ಸಮಯದಲ್ಲಿ ತಂಪಾಗಿರುವುದು ಕೇವಲ ಆರಾಮಕ್ಕಿಂತ ಹೆಚ್ಚಾಗಿರುತ್ತದೆ - ಇದು ಜೀವನ ಮತ್ತು ಸಾವಿನ ನಡುವಿನ ಅನಿಶ್ಚಿತ ರೇಖೆಯನ್ನು ರೂಪಿಸುತ್ತದೆ ಎಂದೂ ವಿಶ್ವಬ್ಯಾಂಕ್‌ ವರದಿಯಲ್ಲಿ ಹೇಳಿದೆ.  

ಇದನ್ನೂ ಓದಿ: ಉತ್ತರದಲ್ಲಿ ಮತ್ತೆ ಉಷ್ಣ ಅಲೆ, ದಕ್ಷಿಣದಲ್ಲಿ ಭಾರೀ ಮಳೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?