ಉಡುಪಿ-ಮಣಿಪಾಲದ ಭೂತ ಬಂಗಲೆ ರಹಸ್ಯ.. ಒಂದೇ ರಾತ್ರಿ ಕುಟುಂಬ ನಾಪತ್ತೆ?

Published : Jun 18, 2026, 11:11 AM IST

Story udupi manipal ಟೀ ಜಂಕ್ಷನ್‌ನಲ್ಲಿ ಬಿದ್ದಿದ್ದ ವಸ್ತುವನ್ನು ಮುಟ್ಟಿದ ಬಾಲಕನಿಂದ ಆರಂಭವಾದ ವಿಚಿತ್ರ ಘಟನೆಗಳು, ಕೊನೆಗೆ ಮಣಿಪಾಲ್‌ ಕುಟುಂಬವನ್ನು ರಾತ್ರೋರಾತ್ರಿ ಮನೆ ಬಿಟ್ಟು ಓಡಿಹೋಗುವಂತೆ ಮಾಡಿತು.

PREV
14
ಭಾರತದಲ್ಲಿ ಹಲವು ನಂಬಿಕೆ

ಭಾರತದಲ್ಲಿ ಹಲವು ನಂಬಿಕೆಗಳಿವೆ. ಸಂಜೆ ಬಳಿಕ ಉಗುರು ಕತ್ತರಿಸಬಾರದು, ಚಪ್ಪಲಿಯನ್ನು ಉಲ್ಟಾ ಇಡಬಾರದು, ಟೀ ಜಂಕ್ಷನ್‌ನಲ್ಲಿ ಬಿದ್ದಿರುವ ನಿಂಬೆಹಣ್ಣು ಅಥವಾ ಕೆಂಪು ಬಟ್ಟೆ ಕಟ್ಟಿದ ವಸ್ತುಗಳನ್ನು ಮುಟ್ಟಬಾರದು ಎಂಬ ಮಾತುಗಳನ್ನು ನಾವು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ.

24
ಉಡುಪಿ-ಮಣಿಪಾಲ ಭಯಾನಕ ಕಥೆ

ಉಡುಪಿ-ಮಣಿಪಾಲ ಭಾಗದಲ್ಲಿ ನಡೆದಿತ್ತೆಂದು ಹೇಳಲಾಗುವ ಒಂದು ಭಯಾನಕ ಕಥೆ ಈಗಲೂ ಜನರ ನಡುವೆ ಹರಿದಾಡುತ್ತಿದೆ. ಬೆಂಗಳೂರಿನಿಂದ ಮಣಿಪಾಲಕ್ಕೆ ಸ್ಥಳಾಂತರವಾದ ವೈದ್ಯರ ಕುಟುಂಬವೊಂದು ಟೀ ಜಂಕ್ಷನ್ ಎದುರಿನ ದೊಡ್ಡ ಮನೆಯಲ್ಲಿ ವಾಸಕ್ಕೆ ಬಂದಿತ್ತು. ಒಂದು ದಿನ ಶಾಲೆಯಿಂದ ಮನೆಗೆ ಬಂದಿದ್ದ 14 ವರ್ಷದ ಬಾಲಕ, ಸ್ನೇಹಿತರ ಸವಾಲಿನ ಮೇರೆಗೆ ಜಂಕ್ಷನ್‌ನಲ್ಲಿ ಇಟ್ಟಿದ್ದ ನಿಂಬೆಹಣ್ಣು ಹಾಗೂ ಕೆಂಪು ಬಟ್ಟೆಯಲ್ಲಿ ಕಟ್ಟಿದ್ದ ವಸ್ತುವನ್ನು ಎತ್ತಿ ಎಸೆದಿದ್ದ.

34
ವಿಚಿತ್ರ ಘಟನೆಗಳು ಆರಂಭ

ಆ ರಾತ್ರಿಯಿಂದ ವಿಚಿತ್ರ ಘಟನೆಗಳು ಆರಂಭವಾದವು. ಬಾಲಕ ತನ್ನ ಕೊಠಡಿಯಲ್ಲಿ ಯಾರೋ ಕಾಣಿಸುತ್ತಿದ್ದಾರೆ ಎಂದು ಕಿರುಚಾಡಲು ಶುರು ಮಾಡಿದ. ದಿನದಿಂದ ದಿನಕ್ಕೆ ಅವನ ಆರೋಗ್ಯ ಹದಗೆಡತೊಡಗಿತು. ಕೊಠಡಿ ಬದಲಾಯಿಸಿದ ನಂತರ ಸಮಸ್ಯೆ ನಿಂತಂತೆಯೇ ಕಂಡರೂ, ಕೆಲವೇ ದಿನಗಳಲ್ಲಿ ಆತನ ತಮ್ಮನ ಬಾಯಿಂದ ಬಂದ ಮಾತುಗಳು ಇಡೀ ಕುಟುಂಬವನ್ನು ಬೆಚ್ಚಿಬೀಳುವಂತೆ ಮಾಡಿದ್ದವು.

"ನನ್ನ ಜೊತೆ ಕೆಂಪು ಕಣ್ಣಿನ ಅಂಕಲ್ ಇದ್ದಾರೆ... ಅವರು ನನ್ನ ಜೊತೆ ಮಾತನಾಡುತ್ತಾರೆ" ಎಂದು ಚಿಕ್ಕ ಬಾಲಕ ಹೇಳಿದಾಗ ಮನೆಯಲ್ಲಿದ್ದ ಎಲ್ಲರೂ ಆಘಾತಕ್ಕೊಳಗಾದರು. ಬಳಿಕ ಒಂದು ರಾತ್ರಿ ಮನೆಯೊಳಗೆ ಕೇಳಿಬಂದ ಭಾರೀ ಹೆಜ್ಜೆಗಳ ಶಬ್ದ, ಆಕಸ್ಮಿಕವಾಗಿ ಆಫ್ ಆದ ಲೈಟ್‌ಗಳು ಮತ್ತು ಬಾಗಿಲಿನ ಬಳಿ ಕಾಣಿಸಿಕೊಂಡ ಕೆಂಪು ಕಣ್ಣುಗಳು ಕುಟುಂಬವನ್ನು ರಾತ್ರೋರಾತ್ರಿ ಮನೆ ಬಿಟ್ಟು ಓಡಿಹೋಗುವಂತೆ ಮಾಡಿತಂತೆ.

44
ಕಥೆ ಮತ್ತಷ್ಟು ರಹಸ್ಯದ ಬಣ್ಣ

ಇದು ಕೇವಲ ಕಲ್ಪನೆಯ ಆಟವೇ? ಮಾನಸಿಕ ಭ್ರಮೆಯೇ? ಅಥವಾ ನಿಜವಾಗಿಯೂ ಅತೀಂದ್ರಿಯ ಶಕ್ತಿಗಳ ಪ್ರಭಾವವೇ? ಎಂಬ ಪ್ರಶ್ನೆಗೆ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಟೀ ಜಂಕ್ಷನ್‌ಗಳಲ್ಲಿ ಬಿದ್ದಿರುವ ವಸ್ತುಗಳನ್ನು ಮುಟ್ಟಬಾರದು ಎಂಬ ನಂಬಿಕೆಗೆ ಈ ಕಥೆ ಮತ್ತಷ್ಟು ರಹಸ್ಯದ ಬಣ್ಣ ಹಚ್ಚಿದೆ.

Read more Photos on
click me!

Recommended Stories