ಭಾರತದ ಈ ಗ್ರಾಮಗಳಲ್ಲಿ ಹಾವುಗಳೊಂದಿಗೆ ಜೀವನ ನಡೆಸ್ತಾರೆ ಜನ

First Published Aug 2, 2022, 6:11 PM IST

ನಾಗರ ಪಂಚಮಿ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಾಗರ ಪಂಚಮಿಯಂದು ನಾಗದೇವನನ್ನು ಪೂಜಿಸುವ ಮೂಲಕ, ಕಾಳ ಸರ್ಪ ದೋಷವನ್ನು ತೆಗೆದು ಹಾಕಬಹುದು ಮತ್ತು ಮಹಾದೇವನ ಕೃಪೆಯನ್ನು ಸಹ ಪಡೆಯಬಹುದು. ಇನ್ನು ನಾವು ನಾಗರಪಂಚಮಿಯಂದು ಮಾತ್ರ ಹಾವಿಗೆ ಹಾಲೆರೆದು ಪೂಜೆ ಮಾಡುತ್ತೇವೆ. ಆದರೆ ನಮ್ಮ ದೇಶದಲ್ಲೊಂದು ಗ್ರಾಮವಿದೆ, ಅಲ್ಲಿ ಹಾವಿನೊಂದಿಗೆ ಜನರು ಸಹಬಾಳ್ವೆ ಮಾಡುತ್ತಾರೆ. 

ನಾಗರ ಪಂಚಮಿಯ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು, ಸರ್ಪ ದೇವರ ಆರಾಧನೆ ಮಾಡಲಾಗುತ್ತೆ. ಈ ದಿನದಂದು ನಾಗಗಳನ್ನು ಪೂಜಿಸುವ ಮೂಲಕ, ಶಿವನ ಆಶೀರ್ವಾದವನ್ನು ಸಹ ಪಡೆಯಲಾಗುತ್ತೆ ಎಂದು ನಂಬಲಾಗಿದೆ. ನಾಗರ ಪಂಚಮಿಯ ವಿಶೇಷ ಸಂದರ್ಭದಲ್ಲಿ, ಅಂತಹ ಕೆಲವು ಸ್ಥಳಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಅಲ್ಲಿ ವಿಷಪೂರಿತ ಹಾವುಗಳು ಮನುಷ್ಯರ ಸ್ನೇಹಿತರಾಗಿರುತ್ತೆ. ನಾಗರ ಪಂಚಮಿಯ ಸಂದರ್ಭದಲ್ಲಿ ಈ ವಿಶೇಷ ಮಾಹಿತಿಯನ್ನು ತಿಳಿದುಕೊಳ್ಳೋಣ...

ಈ ಹಳ್ಳಿಯಲ್ಲಿ ಎಲ್ಲೆಡೆ ಹಾವುಗಳಿರುತ್ತೆ

ಮಹಾರಾಷ್ಟ್ರದ ಪುಣೆಯಿಂದ 200 ಕಿ.ಮೀ ದೂರದಲ್ಲಿರುವ ಸೋಲಾಪುರ ಜಿಲ್ಲೆಯಲ್ಲಿ ಶೇಟ್ಪಾಲ್ ಎಂಬ ಹಳ್ಳಿಯಿದೆ. ಇಲ್ಲಿ ನೀವು ದೇವಾಲಯಗಳಲ್ಲಿ ಮಾತ್ರವಲ್ಲದೆ ಪ್ರತಿ ಮನೆಯಲ್ಲೂ ಹಾವುಗಳನ್ನು ನೋಡಬಹುದು. ಈ ಹಳ್ಳಿಯಲ್ಲಿ, ನಾಗರಹಾವುಗಳು ಮುಕ್ತವಾಗಿ ತಿರುಗಾಡುವುದನ್ನು ನೀವು ನೋಡುತ್ತೀರಿ ಮತ್ತು ಅವುಗಳನ್ನು ತಡೆಯಲು ಸಹ ಸಾಧ್ಯವಿಲ್ಲ. 

Latest Videos


ಒಂದು ವರದಿಯ ಪ್ರಕಾರ, ಈ ಗ್ರಾಮದಲ್ಲಿ 2800 ಕ್ಕೂ ಹೆಚ್ಚು ನಾಗರಹಾವುಗಳು (cobra) ವಾಸಿಸುತ್ತವೆ ಮತ್ತು ಅವುಗಳನ್ನು ಇಲ್ಲಿ ಪೂಜಿಸಲಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಹಳ್ಳಿಯಲ್ಲಿ ಇಷ್ಟೊಂದು ಹಾವುಗಳು ಮತ್ತು ನಾಗರಹಾವುಗಳನ್ನು ಹೊಂದಿದ್ದರೂ, ಹಾವು ಮನುಷ್ಯನನ್ನು ಕಚ್ಚಿದ ಒಂದೇ ಒಂದು ಪ್ರಕರಣವೂ ಬೆಳಕಿಗೆ ಬಂದಿಲ್ಲ. 

ಗ್ರಾಮದಲ್ಲಿ ನಿರ್ಮಿಸಲಾದ ಶಾಲೆಯಲ್ಲಿ, ತರಗತಿಯ ಸಮಯದಲ್ಲಿ ಹಾವುಗಳು ಬರುತ್ತವೆ, ಆದ್ರೆ ಮಕ್ಕಳು ಸಹ ಹಾವುಗಳಿಗೆ ಇಲ್ಲಿ ಹೆದರೋದಿಲ್ಲ. ಇಲ್ಲಿ ನೀವು ಮನುಷ್ಯರು ಮತ್ತು ಹಾವುಗಳ ನಡುವಿನ ವಿಶೇಷ ಬಾಂಧವ್ಯವನ್ನು ನೋಡುತ್ತೀರಿ. ಇಲ್ಲಿ, ಯಾರಾದರೊಬ್ಬರ ಹೊಸ ಮನೆಯನ್ನು ನಿರ್ಮಿಸಿದಾಗ, ಅವರು ಹಾವುಗಳಿಗೆ ಸಹ ಒಂದು ಮೂಲೆಯನ್ನು ಮಾಡಬೇಕು, ಅದನ್ನು ದೇವಸ್ಥಾನ ಎಂದು ಕರೆಯಲಾಗುತ್ತೆ.

ಇಲ್ಲಿ ಹಾವು ಕಡಿತದಿಂದ ಸಾವನ್ನಪ್ಪಿದ ಪ್ರಕರಣವೇ ಇಲ್ಲ

ಇನ್ನು ಬಿಹಾರದ ಸಮಸ್ತಿಪುರದಿಂದ 23 ಕಿ.ಮೀ ದೂರದಲ್ಲಿ ಸಿಂಧಿಯಾ ಘಾಟ್ ಎಂಬ ಸ್ಥಳವಿದೆ, ಅಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಶಿಷ್ಟ ರಹಸ್ಯವನ್ನು ಕಾಣಬಹುದು. ಈ ಹಳ್ಳಿಯ ಮಕ್ಕಳು ಸಹ ಹಾವುಗಳಿಗೆ ಹೆದರುವುದಿಲ್ಲ ದಿನವಿಡೀ ಅವುಗಳೊಂದಿಗೆ ಆಟವಾಡುತ್ತಾರೆ. ಆಟದಲ್ಲಿ ಅನೇಕ ಬಾರಿ, ಹಾವುಗಳು ಮಕ್ಕಳನ್ನು ಕಚ್ಚುತ್ತವೆ ಆದರೆ ಅವುಗಳ ವಿಷವು ದೇಹಕ್ಕೆ ಏರೋದಿಲ್ಲ.

ಇಲ್ಲಿಯವರೆಗೆ, ಸಿಂಧಿಯಾ ಘಾಟ್ನಲ್ಲಿ ಹಾವು ಕಚ್ಚಿದ್ದರಿಂದ ಯಾವುದೇ ಮನುಷ್ಯನಿಗೆ ಏನೂ ಆಗಿಲ್ಲ. ಗ್ರಾಮದ ಜನರ ಪ್ರಕಾರ, ಈ ಗ್ರಾಮವು ತಾಯಿ ಭಗವತಿಯಿಂದ ಆಶೀರ್ವದಿಸಲ್ಪಟ್ಟಿದೆ, ಆದ್ದರಿಂದಲೇ ಹಾವು ಕಡಿತವು ಯಾವುದೇ ಪರಿಣಾಮ ಬೀರುವುದಿಲ್ಲ. ನಾಗರ ಪಂಚಮಿಯ ದಿನದಂದು, ಈ ಗ್ರಾಮದ ಜನರು ಪೂಜೆ-ಪಠಣವನ್ನು ಮಾಡಿದ ನಂತರ ಬೇವಿನ ಎಲೆಗಳನ್ನು (neem leaves) ಮೊಸರಿನೊಂದಿಗೆ ತಿನ್ನುತ್ತಾರೆ, ಇದರಿಂದ ನಾಗ ದೇವರು ಮತ್ತು ದೇವರ ಆಶೀರ್ವಾದ ಸಿಗುತ್ತೆ ಎಂದು ನಂಬಲಾಗಿದೆ.

ಈ ಹಳ್ಳಿಯಲ್ಲಿ, ವಿಷವು ಕೇವಲ ನೆನಪಿನಿಂದ ಬರುತ್ತದೆ.

ಉತ್ತರಾಖಂಡದ ಜೌನ್ಸರ್ ಬಾವರ್ ಎಂಬ ಹಳ್ಳಿಯ ಬಗ್ಗೆ ಹೇಳುವುದಾದರೆ, ಹಾವು ಕಚ್ಚಿದರೆ, ಇಲ್ಲಿ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಲಾಗುತ್ತದೆ. ಈ ಗ್ರಾಮದಲ್ಲಿ ನಾಗಗಳನ್ನು ಶತಮಾನಗಳಿಂದ ಪೂಜಿಸಲಾಗುತ್ತಿದೆ. ಆದ್ದರಿಂದ ಈ ಗ್ರಾಮವು ಸರ್ಪ ದೇವರಿಂದ ಆಶೀರ್ವದಿಸಲ್ಪಟ್ಟಿದೆ. ಹಾವು ಒಬ್ಬ ವ್ಯಕ್ತಿಯನ್ನು ಕಚ್ಚಿದರೂ ಸಹ, ಹಾವನ್ನು ಸ್ಮರಿಸಿದ ತಕ್ಷಣ ವಿಷ ಹೊರಬರುತ್ತೆ. 

ಇಲ್ಲಿಯವರೆಗೆ, ಈ ಗ್ರಾಮದಲ್ಲಿ ಹಾವು ಕಡಿತದಿಂದ (snake bite) ಯಾವುದೇ ವ್ಯಕ್ತಿ ಸಾವನ್ನಪ್ಪಿಲ್ಲ. ಈ ಗ್ರಾಮವು ಪರ್ವತಗಳು ಮತ್ತು ಕಾಡುಗಳ ನಡುವೆ ನೆಲೆಗೊಂಡಿದೆ, ಆದ್ದರಿಂದ ಹಾವುಗಳು ಸಾಮಾನ್ಯವಾಗಿ ಹೊರಗೆ ಬರುತ್ತವೆ. ಪ್ರತಿ ವರ್ಷ, ಏಪ್ರಿಲ್ 13 ರಂದು ಗ್ರಾಮದಲ್ಲಿ ಜಾತ್ರೆ ನಡೆಯುತ್ತದೆ ಮತ್ತು ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು, ಜನರು ದೂರದೂರದಿಂದ ಬಂದು ನಾಗ ದೇವರ ಆಶೀರ್ವಾದ ಪಡೆಯುತ್ತಾರೆ.

ಇಲ್ಲಿ ಹಾವುಗಳನ್ನು ಕೊಲ್ಲುವುದು ದೊಡ್ಡ ಪಾಪ

ಹರ್ಯಾಣದ ರೋಹ್ಟಕ್ ಜಿಲ್ಲೆಯ ರೋಹೆಡಾ ಗ್ರಾಮದಲ್ಲಿ ಕಳೆದ 300 ವರ್ಷಗಳಿಂದ ಹಾವು ಕಚ್ಚಿ ಯಾರೂ ಸತ್ತಿಲ್ಲ ಎನ್ನಲಾಗುತ್ತೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಭದ್ರಾ ಮಾಸದ ಐದನೇ ದಿನದಂದು ನಾಗದೇವರ ದೇವಾಲಯವಲ್ಲಿ ಹಬ್ಬ ಆಚರಿಸಲಾಗುತ್ತದೆ. ಈ ಮೇಳವು ಆ ಸಮಯದಲ್ಲಿ ಜನಿಸಿದ ಮಕ್ಕಳನ್ನು ಒಳಗೊಂಡಿದೆ. ಇಲ್ಲಿ, ಹಾವು ಒಬ್ಬ ವ್ಯಕ್ತಿಯನ್ನು ಕಚ್ಚಿದರೆ, ಮಹಿಳೆಯರು ಹಾಡನ್ನು ಹಾಡುವ ಮೂಲಕ ಚಿಕಿತ್ಸೆ ನೀಡ್ತಾರೆ ಮತ್ತು ನಂತರ ಆತನನ್ನು ನಾಗ ಸನ್ನಿಧಿಗೆ ಕರೆದೊಯ್ಯುತ್ತಾರೆ, ಇದರಿಂದ ಆತ ಆರೋಗ್ಯದಿಂದಿರಲು ಸಾಧ್ಯವಾಗುತ್ತೆ ಎನ್ನಲಾಗಿದೆ.

ಈ ಹಳ್ಳಿಯಲ್ಲಿ ಎಷ್ಟು ಹಾವುಗಳು, ಅಷ್ಟೇ ಗೌರವ

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗಡಿಯಲ್ಲಿರುವ ಶಂಕರಗಢವು ಒಂದು ಡಜನ್‌ಗೂ ಹೆಚ್ಚು ಹಳ್ಳಿಗಳನ್ನು ಹೊಂದಿದೆ, ಅಲ್ಲಿ ಜನರು ಇತರರಿಗಿಂತ ಹೆಚ್ಚು ಹಾವುಗಳನ್ನು ಹೊಂದಿರುವುದರಿಂದಲೇ ಅವರಿಗೆ ಸ್ಥಾನಮಾನವಿದೆ. ಇಲ್ಲಿ ಒಬ್ಬೊಬ್ಬರು ಎಷ್ಟು ಹಾವುಗಳನ್ನು ಹೊಂದಿದ್ದಾರೆಯೇ? ಅಷ್ಟೇ ಗೌರವನ್ನು ಹೊಂದಿರುತ್ತಾರೆ. 

ಶಂಕರಗಢದಲ್ಲಿ ಶಿವಭಕ್ತರಾಗಿ ವಾಸಿಸುವ ಸೇಪರ್ ಗಳ ಅನೇಕ ವಸಾಹತುಗಳಿವೆ. ಇಲ್ಲಿ ಹಾವುಗಳನ್ನು ಮನೆಯ ಸದಸ್ಯರಂತೆ ನೋಡಿ ಕೊಳ್ಳಲಾಗುತ್ತದೆ ಮತ್ತು ಮಕ್ಕಳು ಹಾವುಗಳನ್ನು ಆಟಿಕೆಯಂತೆ ಹಿಡಿದು ಆಡುತ್ತಾರೆ. ಹಳ್ಳಿಯಲ್ಲಿ ಒಂದಕ್ಕಿಂತ ಒಂದು ಅಪಾಯಕಾರಿ ಮತ್ತು ವಿಷಕಾರಿ ಹಾವುಗಳು (poisonous snake) ಕಂಡುಬರುತ್ತವೆ ಆದರೆ ಇಲ್ಲಿಯವರೆಗೆ ಆ ಹಾವುಗಳು ಯಾರಿಗೂ ಕಚ್ಚಿಲ್ಲ. ಇಲ್ಲಿ ನೀವು ಕಪ್ಪು ನಾಗರಹಾವು, ವೈಪರ್ ರಾಟಲ್ ನಂತಹ ಅಪಾಯಕಾರಿ ಹಾವುಗಳನ್ನು ಸಹ ಕಾಣಬಹುದು. ಇತರ ಹಳ್ಳಿಗಳಲ್ಲಿ, ರೈತರು ಜಾನುವಾರುಗಳನ್ನು ಸಾಕುತ್ತಾರೆ, ಇಲ್ಲಿ ಹಾವುಗಳನ್ನು ಸಾಕಲಾಗುತ್ತದೆ.

ನೀವು ಈ ಹಳ್ಳಿಯನ್ನು ಪ್ರವೇಶಿಸಿದಾಗ ಮಾತ್ರ ವಿಷದ ಪರಿಣಾಮವು ಕೊನೆಗೊಳ್ಳುತ್ತೆ. ಛತ್ತೀಸ್ ಗಢದ ರಾಜಧಾನಿ ರಾಯ್ ಪುರ್ ಬಳಿಯ ದಿಘಾರಿ ಗ್ರಾಮದಲ್ಲಿ, ಹಾವುಗಳು ಮತ್ತು ಮಾನವರ ನಡುವೆ ಅಗಾಧ ಪ್ರೇಮವಿದೆ. ಇಲ್ಲಿಯೂ ಸಹ ಯಾವುದೇ ಹಾವು ಯಾರನ್ನೂ ಕೊಲ್ಲುವುದಿಲ್ಲ ಅಥವಾ ಹಾವುಗಳು ಯಾರನ್ನೂ ಕಚ್ಚುವುದಿಲ್ಲ. ಹಳ್ಳಿಯ ಹೊರಗಿನ ವ್ಯಕ್ತಿಗೆ ಹಾವು ಕಚ್ಚಿದರೆ, ಆತ ಈ ಹಳ್ಳಿಗೆ ಕಾಲಿಟ್ಟ ಕೂಡಲೇ ಹಾವಿನ ವಿಷ ಇಳಿದು ಹೋಗುತ್ತೆ ಎಂದು ಹೇಳಲಾಗುತ್ತದೆ. ಇದರ ಹಿಂದಿನ ಕಾರಣವೇನೆಂದರೆ, ಒಮ್ಮೆ ಒಬ್ಬ ಬ್ರಾಹ್ಮಣನು ಹಾವಿನ ಜೀವವನ್ನು ಉಳಿಸಿದನು ಮತ್ತು ನಂತರ ಹಾವು ಈ ಹಳ್ಳಿಯಲ್ಲಿ ವಾಸಿಸುವ ಜನರನ್ನು ಎಂದಿಗೂ ಕಚ್ಚುವುದಿಲ್ಲ ಎಂದು ವರವನ್ನು ನೀಡಿತು ಎನ್ನಲಾಗಿದೆ. 

ಈ ದೇವಾಲಯಕ್ಕೆ ಬಂದ ತಕ್ಷಣ ವಿಷ ಇಳಿಯುತ್ತೆ.

ಬಿಹಾರದ ಭಾಗಲ್ಪುರದ ಸೋನ್ವರ್ಷ ಗ್ರಾಮದಲ್ಲಿ ಅಂತಹ ಒಂದು ವಿಶಿಷ್ಟ ದೇವಾಲಯವಿದೆ, ಅಲ್ಲಿ ಇಡಲಾದ ನೀರು ಕುಡಿಯುವ ಮೂಲಕ ಹಾವಿನ ವಿಷವೂ ಸಹ ಇಳಿದು ಹೋಗುತ್ತದೆ. ಹಾವು ಕಡಿತದಿಂದ ಬಳಲುತ್ತಿರುವ ಅನೇಕ ಜನರು ಇಲ್ಲಿನ ದೇವಾಲಯಕ್ಕೆ ಬರುತ್ತಾರೆ ಮತ್ತು ಅವರು ಜೀವದಾನವನ್ನು ಪಡೆಯುತ್ತಾರೆ. ನಾಗರ ಪಂಚಮಿಯ ಸಂದರ್ಭದಲ್ಲಿ, ಪ್ರತಿ ವರ್ಷ ಇಲ್ಲಿ ಒಂದು ಭವ್ಯ ಜಾತ್ರೆ ಇರುತ್ತದೆ, ಇದರಲ್ಲಿ ಜನರು ದೂರದೂರದಿಂದ ಬರುತ್ತಾರೆ. ಈ ವಿಶಿಷ್ಟ ದೇವಾಲಯವು ಭಗವತಿ ಮಾತೆಯ ದೇವಾಲಯವಾಗಿದೆ ಮತ್ತು ಇದರ ಇತಿಹಾಸವು ಹಲವಾರು ನೂರು ವರ್ಷಗಳಷ್ಟು ಹಳೆಯದಾಗಿದೆ. 

click me!